‘ಆಡು, ಕುರಿ ಮೇಯಿಸಲು ಹೋದ ನೇರಳಕುಪ್ಪೆ ಹಾಡಿಯ ಜಗದೀಶ್ ವಾಪಾಸ್ ಬಾರದಿರುವ ಬಗ್ಗೆ ಮಾಹಿತಿ ಬಂದ ಮೇರೆಗೆ ಆನೆಗಳ ಸಹಾಯದಿಂದ ಕೂಂಬಿಂಗ್ ನಡೆಸಿದ್ದು, ಸ್ಥಳದಲ್ಲಿ ಇವರ ಬಟ್ಟೆ, ಕತ್ತಿ, ಚಪ್ಪಲಿ ಸಿಕ್ಕಿದೆ. ರಕ್ತದ ಕಲೆ ಕಾಣಿಸಿಕೊಂಡಿರುವುದರಿಂದ ಹುಲಿಯೇ ಹೊತ್ತೋಯ್ದಿರಬೇಕು ಎಂಬ ಶಂಕೆ ಇದೆ. ರಾತ್ರಿಯಾಗಿದ್ದು ಹಾಗೂ ಮಳೆ ಬರುತ್ತಿರುವುದರಿಂದ ಬೆಳಿಗ್ಗೆ ಕೊಂಬಿಂಗ್ ನಡೆಸಲಾಗುವುದು’ ಎಂದು ಎಸಿಎಫ್ ಪ್ರಸನ್ನಕುಮಾರ್ ತಿಳಿಸಿದ್ದಾರೆ.