ರಾಜಮ್ಮ, ಇಬ್ಬರು ಮಕ್ಕಳು ಹಾಗೂ ಪತಿ ಶಿವಣ್ಣ ಅವರೊಂದಿಗೆ ತಮ್ಮ ತವರೂರಾದ ಕೋಟೆಮಾಳಕ್ಕೆ ಕಾಲುದಾರಿಯಲ್ಲಿ ನಡೆದುಕೊಂಡು ಹೋಗುತ್ತಿದ್ದರು. ಗೇರುಮಾಳ್ಯಂ ಸಮೀಪ ಎದುರಾದ ಆನೆ ದಾಳಿ ಮಾಡಿದೆ. ಪತಿಯು ಇಬ್ಬರು ಮಕ್ಕಳನ್ನು ಎತ್ತಿಕೊಂಡು ಓಡಿದ್ದಾರೆ. ಆದರೆ, ರಾಜಮ್ಮ ತಪ್ಪಿಸಿಕೊಳ್ಳುವ ವೇಳೆ ಎಡವಿ ಬಿದ್ದಿದ್ದು, ಆಗ ಆನೆಯು ತುಳಿದು ಕೊಂದಿದೆ ಎಂದು ಅರಣ್ಯ ಅಧಿಕಾರಿಗಳು ತಿಳಿಸಿದ್ದಾರೆ.