ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಔತಣಕೂಟಕ್ಕೆ ಬಂದವರಿಗೆ ಸಸಿ ವಿತರಣೆ

ಪರಿಸರ ಕಾಳಜಿ ಮೆರೆದ ಕೆ.ವಿ.ನಾಗೇಂದ್ರ ಮತ್ತು ಸ್ನೇಹಾ ದಂಪತಿ
Last Updated 21 ಮೇ 2019, 20:01 IST
ಅಕ್ಷರ ಗಾತ್ರ

ತಿ.ನರಸೀಪುರ: ತಾಲ್ಲೂಕಿನ ಕರೊಹಟ್ಟಿ ಗ್ರಾಮದ ಕೆ.ವಿ.ನಾಗೇಂದ್ರ ಮತ್ತು ಸ್ನೇಹಾ ದಂಪತಿಯು ಬೀಗರೂಟಕ್ಕೆ ಬಂದ ಜನರಿಗೆ ಗಿಡಗಳನ್ನು ನೀಡುವ ಮೂಲಕ ಪರಿಸರ ಕಾಳಜಿ ಮೆರೆದಿದ್ದಾರೆ.

ಕೆ.ವಿ.ನಾಗೇಂದ್ರ ಅವರು ಆಂತರಿಕ ಭದ್ರತಾ ವಿಭಾಗದ ಉಪನಿರೀಕ್ಷಕರಾಗಿದ್ದಾರೆ. ಅವರು ಮೇ 16ರಂದು ವಿವಾಹವಾಗಿದ್ದರು. ಗ್ರಾಮದಲ್ಲಿ ಸೋಮವಾರ ಬೀಗರ ಔತಣಕೂಟ ಏರ್ಪಡಿಸಿದ್ದರು. ಇಲ್ಲಿ 600 ತೇಗದ ಗಿಡಗಳನ್ನು ವಿತರಿಸಿದ ದಂಪತಿ, ಅವುಗಳನ್ನು ಬೆಳೆಸುವಂತೆ ಅತಿಥಿಗಳಿಗೆ ಮನವಿ ಮಾಡಿದರು.

‘ಮದುವೆ ವೇಳೆ ಗಿಡಗಳನ್ನು ವಿತರಿಸುವ ಆಸೆ ಇತ್ತು. ಆದರೆ, ಅದು ಸಾಧ್ಯವಾಗಿರಲಿಲ್ಲ. ಬೀಗರೂಟಕ್ಕೆ ಬರುವವರಿಗೆ ವಿತರಿಸಿದ್ದೇವೆ. ಪರಿಸರ ಸಂರಕ್ಷಣೆ ಮಾಡದಿದ್ದರೆ ಮನುಕುಲದ ಉಳಿಗಾಲ ಇರುವುದಿಲ್ಲ. ತಾಪಮಾನ ಏರಿಕೆಯನ್ನು ಕಡಿಮೆ ಮಾಡಬೇಕಾದರೆ ಅರಣ್ಯವನ್ನು ಬೆಳೆಸಬೇಕು’ ಎಂದು ನಾಗೇಂದ್ರ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT