‘ಈ ಸರ್ಕಾರ ಸತ್ತು ಹೋಗಿದೆ. ಇನ್ನು, ಸಚಿವರು ಕ್ರಿಯಾಶೀಲರಾಗಿದ್ದಾರಾ, ಇಲ್ಲವಾ ಎಂಬ ಪ್ರಶ್ನೆಯಾದರೂ ಎಲ್ಲಿದೆ? ವಿಧಾನಸಭೆ ಅಧಿವೇಶನದಲ್ಲಿ ಎಲ್ಲವನ್ನೂ ಪ್ರಸ್ತಾಪಿಸುತ್ತೇವೆ. ಪ್ರವಾಹ, ಕೆ.ಜಿ.ಹಳ್ಳಿ–ಡಿ.ಜಿ.ಹಳ್ಳಿ ಗೋಲಿಬಾರ್, ಕೋವಿಡ್ ಭ್ರಷ್ಟಾಚಾರ, ಡ್ರಗ್ಸ್ ದಂಧೆ ಬಗ್ಗೆ ಪ್ರಶ್ನಿಸುತ್ತೇವೆ’ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.