ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೈಸೂರು: ಎಫ್‌ಐಆರ್ ದಾಖಲಿಸದೇ ಲಂಚ ಪಡೆದ ಇಬ್ಬರು ಕಾನ್‌ಸ್ಟೆಬಲ್‌ ಬಂಧನ

Last Updated 12 ಡಿಸೆಂಬರ್ 2021, 4:16 IST
ಅಕ್ಷರ ಗಾತ್ರ

ಮೈಸೂರು: ಇಲ್ಲಿನ ವಿದ್ಯಾರಣ್ಯಪುರಂ ಠಾಣೆಯಲ್ಲಿ ಎಫ್‌ಐಆರ್ ದಾಖಲಿಸದೇ ಇರಲು ₹ 1,500 ಲಂಚ ಪಡೆಯುತ್ತಿ ದ್ದಾಗ ಹೆಡ್‌ಕಾನ್‌ಸ್ಟೆಬಲ್ ಸುರೇಶ್ ಹಾಗೂ ಕಾನ್‌ಸ್ಟೆಬಲ್ ರಾಘವೇಂದ್ರ ಅವರನ್ನು ಭ್ರಷ್ಟಾಚಾರ ನಿಗ್ರಹ ದಳದ ಪೊಲೀಸರು ಬಂಧಿಸಿದ್ದಾರೆ.

‘ಮನೆಯ ಮಾಲೀಕರು ತೊಂದರೆ ಕೊಡುತ್ತಿದ್ದು, ಸಹಾಯ ಮಾಡುವಂತೆ ಮಹಿಳೆಯೊಬ್ಬರು ಆರೋಪಿ ಕಾನ್‌ಸ್ಟೆಬಲ್‌ಗಳಿಗೆ ಮನವಿ ಮಾಡಿದ್ದರು. ಆ ಪ್ರಕರಣವನ್ನು ರಾಜಿ ಪಂಚಾಯಿತಿಯಲ್ಲಿ ಮುಗಿಸಿ, ಪ್ರಕರಣ ದಾಖಲಿಸದೇ ಇರಲು ₹ 3 ಸಾವಿರ ಲಂಚ ನೀಡಬೇಕು ಎಂದು ಮಾಲೀಕರನ್ನು ಆರೋಪಿಗಳು ಒತ್ತಾಯಿಸಿ, ₹ 1,500 ಪಡೆದಿದ್ದರು. ಉಳಿಕೆ ಹಣ ನೀಡುವಂತೆ ಒತ್ತಡ ಹೆಚ್ಚಾದಾಗ ಮಾಲೀಕ ಎಸಿಬಿ ಗಮನಕ್ಕೆ ವಿಷಯ ತಂದರು’ ಎಂದು ಪೊಲೀಸರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT