‘ಮನೆಯ ಮಾಲೀಕರು ತೊಂದರೆ ಕೊಡುತ್ತಿದ್ದು, ಸಹಾಯ ಮಾಡುವಂತೆ ಮಹಿಳೆಯೊಬ್ಬರು ಆರೋಪಿ ಕಾನ್ಸ್ಟೆಬಲ್ಗಳಿಗೆ ಮನವಿ ಮಾಡಿದ್ದರು. ಆ ಪ್ರಕರಣವನ್ನು ರಾಜಿ ಪಂಚಾಯಿತಿಯಲ್ಲಿ ಮುಗಿಸಿ, ಪ್ರಕರಣ ದಾಖಲಿಸದೇ ಇರಲು ₹ 3 ಸಾವಿರ ಲಂಚ ನೀಡಬೇಕು ಎಂದು ಮಾಲೀಕರನ್ನು ಆರೋಪಿಗಳು ಒತ್ತಾಯಿಸಿ, ₹ 1,500 ಪಡೆದಿದ್ದರು. ಉಳಿಕೆ ಹಣ ನೀಡುವಂತೆ ಒತ್ತಡ ಹೆಚ್ಚಾದಾಗ ಮಾಲೀಕ ಎಸಿಬಿ ಗಮನಕ್ಕೆ ವಿಷಯ ತಂದರು’ ಎಂದು ಪೊಲೀಸರು ತಿಳಿಸಿದ್ದಾರೆ.