ಚಾಮುಂಡಿಬೆಟ್ಟದ ಪಾದದ ಬಳಿ ಇದ್ದ ಜಾಗದ ಕುರಿತು ಕಿರಣ್ಗೂ, ಸ್ವಾಮಿ ಮತ್ತು ಶಿವು ಎಂಬುವವರಿಗೂ ಮೊದಲಿನಿಂದಲೂ ವೈಮನಸ್ಯ ಇತ್ತು. ಇದೇ ವಿಚಾರವಾಗಿ ಮಾತನಾಡಲು ಎಂದು ಎರಡು ಗುಂಪುಗಳು ಚಾಮುಂಡಿಪುರಂ ವೃತ್ತದಿಂದ ಊಟಿ ರಸ್ತೆಗೆ ಹೋಗುವ ಮಾರ್ಗ ಮಧ್ಯೆದ ಎಲೆತೋಟದ ಸಮೀಪ ಸೇರಿದ್ದಾರೆ. ಈ ವೇಳೆ ಮಾತಿಗೆ ಮಾತು ಬೆಳೆದು ಸ್ವಾಮಿ, ಶಿವು ಹಾಗೂ ಇತರ ಇಬ್ಬರು ರಾತ್ರಿ 11.30ರ ಸಮಯದಲ್ಲಿ ಇವರ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ ಕೊಲೆ ಮಾಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಕೃತ್ಯ ನಡೆದ ಸ್ಥಳಕ್ಕೆ ರಾತ್ರಿ ಡಿಸಿಪಿ ಡಾ.ಎ.ಎನ್. ಪ್ರಕಾಶ್ಗೌಡ ಭೇಟಿ ನೀಡಿ ಪರಿಶೀಲನೆ ನಡೆಸಿದರು.