‘ಬಜೆಟ್ನಲ್ಲಿ ಖಾಸಗೀಕರಣಕ್ಕೆ ಒತ್ತು ನೀಡಲಾಗಿದೆ. ವಿಮಾ ಕ್ಷೇತ್ರದಲ್ಲಿ ಖಾಸಗಿ ಬಂಡವಾಳ ಹೂಡಿಕೆಗೆ ಅವಕಾಶ ಮಾಡಿಕೊಡಲಾಗಿದೆ. ಇದು ಅಪಾಯಕಾರಿ ಬೆಳವಣಿಗೆ. ಸಾರ್ವಜನಿಕ ಉದ್ದಿಮೆಗಳನ್ನು ಮಾರಾಟ ಮಾಡಿ, ದೇಶದ ಜನರನ್ನು ಭಿಕ್ಷುಕರನ್ನಾಗಿ ಮಾಡಲು ಪ್ರಯತ್ನ ನಡೆದಿದೆ. ಪ್ರತಿ ದಿನ ಕೂಲಿ ಮಾಡಿ ತಿನ್ನಬೇಕು, ಯಾವುದೇ ಸಂಪಾದನೆ ಮಾಡಬಾರದು ಎಂಬುದು ಬಿಜೆಪಿ ಹುನ್ನಾರ’ ಎಂದು ಆರೋಪಿಸಿದರು.