‘ಯುವಕರನ್ನು ತಮ್ಮ ಕಲೆಯತ್ತ ಸೆಳೆಯುವುದು ಇಂದಿನ ಬಹುದೊಡ್ಡ ಸವಾಲಿನ ಕೆಲಸ’ ಎಂದು ಅವರು ಹೇಳುತ್ತಾರೆ. ಅಕ್ಕಿ ತುಂಬಿದ ಚೆಂಬಿನೊಳಗೆ ಖಡ್ಗವನ್ನಿಟ್ಟು ಎತ್ತುವ, ವಿವಿಧ ಭಂಗಗಳಲ್ಲಿ ತಿರುಗಿಸುವ ಪವಾಡಗಳು, ಕರ್ಪೂರವನ್ನು ನಾಲಿಗೆ ಮೇಲಿಟ್ಟು ಹೊತ್ತಿಸಿಕೊಳ್ಳುವ ಚಮತ್ಕಾರಗಳು, ಖಡ್ಗದಿಂದ ತೆಂಗಿನಕಾಯಿಯನ್ನು ಸಮನಾಗಿ ಎರಡು ಭಾಗವಾಗಿ ಹೊಡೆಯುವ ಕಲೆಗಾರಿಕೆಯ ಮೂಲಕವೇ ಇಂದು ಯುವಕರನ್ನು ಸೆಳೆಯಬೇಕಿದೆ ಎಂದು ಅವರು ತಿಳಿಸುತ್ತಾರೆ.