‘ಕಳೆದ ವರ್ಷ ಮುಂಗಾರುಪೂರ್ವ ಮಳೆ ಉತ್ತಮವಾಗಿ ಸುರಿದಿತ್ತು. ಮಾರ್ಚ್ ತಿಂಗಳಿನಿಂದಲೇ ಆರಂಭವಾದ ಮಳೆಯಿಂದ ತರಕಾರಿ ಬೆಳೆಗಳಲ್ಲಿ ಉತ್ತಮ ಇಳುವರಿ ಬಂದಿತ್ತು. ಆದರೆ, ಈಗ ಮಳೆ ಆರಂಭವಾಗಿರುವುದೇ ಮೇ ತಿಂಗಳಿನಲ್ಲಿ. ಹೀಗಾಗಿ, ಇನ್ನೊಂದು ತಿಂಗಳಿನಲ್ಲಿ ತರಕಾರಿಗಳ ಇಳುವರಿ ಹೆಚ್ಚಾಗುವ ಸಂಭವ ಇದೆ’ ಎಂದು ದೂರ ಗ್ರಾಮದ ರೈತ ಸಿದ್ಧಪ್ಪ ‘ಪ್ರಜಾವಾಣಿ’ಗೆ ತಿಳಿಸಿದರು.