‘ಬಿರುಬೇಸಿಗೆಯ ಬಿಸಿಲಿನಲ್ಲಿ ಹಸಿಮೆಣಸಿನಕಾಯಿ ಸಸಿಗಳು ಸಮರ್ಪಕ ಇಳುವರಿ ನೀಡುತ್ತಿರಲಿಲ್ಲ. ಇದರಿಂದ ಇಳುವರಿ ಕಡಿಮೆಯಾಗಿತ್ತು. ಮದುವೆ ಮೊದಲಾದ ಶುಭ ಸಮಾರಂಭಗಳಿಗೂ ಇದು ಅತ್ಯಗತ್ಯವಾಗಿ ಬೇಕಿತ್ತು. ಹಾಗಾಗಿ, ಬೇಡಿಕೆ ಹೆಚ್ಚಿತ್ತು. ಈಗ ಆಷಾಢ ಬಂದಿರುವುದರಿಂದ ಸಹಜವಾಗಿಯೇ ಶುಭ ಸಮಾರಂಭಗಳು ನಡೆಯುತ್ತಿಲ್ಲ. ಇದರಿಂದ ಬೇಡಿಕೆ ಬಹಳಷ್ಟು ಕುಸಿದಿದೆ. ಬೆಲೆಯೂ ನಿಯಂತ್ರಣಕ್ಕೆ ಬಂದಿದೆ’ ಎಂದು ಹುಲ್ಲಹಳ್ಳಿಯ ರೈತ ಶಿವಬಸಪ್ಪ ‘ಪ್ರಜಾವಾಣಿ’ಗೆ ತಿಳಿಸಿದರು.