‘ಸುಮಾರು 10 ಸರಕುಸಾಗಣೆ ವಾಹನಗಳಲ್ಲಿದ್ದ 11 ಟನ್ನಷ್ಟು ವಿವಿಧ ತರಕಾರಿಗಳನ್ನು ಬಡವರಿಗೆ ಉಚಿತವಾಗಿ ನೀಡಲಾಗಿದೆ. ನಂಜನಗೂಡಿನಲ್ಲಿ ಅತಿ ಹೆಚ್ಚು ‘ಕೋವಿಡ್– 19’ ಪ್ರಕರಣಗಳು ಕಂಡು ಬಂದಿದ್ದರಿಂದ ಕೇರಳದ ವರ್ತಕರು ಮಾರುಕಟ್ಟೆಗೆ ಬರುತ್ತಿಲ್ಲ. ಹೀಗಾಗಿ, ರೈತರ ತರಕಾರಿಗಳು ಕೊಳೆಯುವುದು ಬೇಡ ಎಂದು ಅವರಿಂದ ರಿಯಾಯಿತಿ ದರದಲ್ಲಿ ಖರೀದಿಸಿ ಅಗತ್ಯವುಳ್ಳವರಿಗೆ ಹಂಚಲಾಯಿತು’ ಎಂದು ಎಪಿಎಂಸಿ ಉಪಾಧ್ಯಕ್ಷ ಜವರಪ್ಪ ‘ಪ್ರಜಾವಾಣಿ’ಗೆ ತಿಳಿಸಿದರು.