ತಂದೆ ಸುಪ್ರಸಿದ್ದ ಹರಿಕಥಾ ವಿದ್ವಾನ್ ಆಗಿದ್ದ ಎಲ್.ಲಕ್ಷ್ಮೀಪತಿ ಭಾಗವತರ ಮಾರ್ಗದರ್ಶನದಲ್ಲಿ ತಮ್ಮ 10ನೇ ವಯಸ್ಸಿನಲ್ಲೇ ಸಂಗೀತ ಲೋಕಕ್ಕೆ ರಾಮಶೇಷು ಪಾದಾರ್ಪಣೆ ಮಾಡಿದರು. ಕರ್ನಾಟಕ ಸಂಗೀತ ಶೈಲಿಯ ಹಾಡುಗಾರಿಕೆಯಿಂದ ಇವರು ಹೆಚ್ಚು ಪ್ರಸಿದ್ಧಿ ಹೊಂದಿದ್ದರು. ಇವರು ಹೊರ ರಾಜ್ಯ ಮತ್ತು ವಿದೇಶಗಳಲ್ಲೂ ಅನೇಕ ಸಂಗೀತ ಕಾರ್ಯಕ್ರಮಗಳನ್ನು ಪ್ರಸ್ತುತಪಡಿಸಿದ್ದಾರೆ. ಇವರ ಪತ್ನಿ ಲೋಪಾಮುದ್ರಾ ಸಹ ಗಾಯಕರು ಮತ್ತು ಸಂಗೀತ ಶಿಕ್ಷಕರೂ ಆಗಿದ್ದಾರೆ. ಇವರ ಹಿರಿಯ ಪುತ್ರ ಫಣೀಂದ್ರಕುಮಾರ್ ಹವ್ಯಾಸಿ ರಂಗಭೂಮಿಯ ಕಲಾವಿದರು ಹಾಗೂ ಕಿರಿಯಪುತ್ರ ವಿಜಯಪ್ರಕಾಶ್ ಚಲನಚಿತ್ರ ಗಾಯಕರಾಗಿದ್ದಾರೆ. ರಾಮಶೇಷು ಅವರನ್ನು ಕರ್ನಾಟಕ ಗಾನಕಲಾ ಪರಿಷತ್ತು ‘ಗಾನ ಕಲಾ ಕಸ್ತೂರಿ’ ಎಂಬ ಬಿರುದು ನೀಡಿ ಸನ್ಮಾನಿಸಿದೆ.