‘10 ವರ್ಷದಿಂದ ಮನವಿ ಸಲ್ಲಿಸಿದರೂ ಪ್ರತಿಮೆ ನಿರ್ಮಾಣವಾಗದೇ ಇದ್ದುದರಿಂದ ಅಭಿಮಾನಿಗಳೇ ಪ್ರತಿಮೆಯನ್ನು ಸ್ಥಾಪಿಸಿದ್ದರು. ಅಧಿಕಾರಿಗಳ ಕಾಲಿಗೆ ಬಿದ್ದು, ತೆರವುಗೊಳಿಸದಂತೆ ಒತ್ತಾಯಿಸಿದರೂ ಕರುಣೆ ತೋರಲಿಲ್ಲ. ಜನ್ಮದಿನದಂದೇ ವಿಷ್ಣು ಅವರ ಕೊಲೆಯಾಗಿದೆ’ ಎಂದು ಡಾ.ವಿಷ್ಣುಸೇನಾ ಸಮಿತಿ ಅಧ್ಯಕ್ಷ ಎಂ.ಡಿ.ಪಾರ್ಥಸಾರಥಿ ಆಕ್ರೋಶ ವ್ಯಕ್ತಪಡಿಸಿದರು.