ನಗರದ ಕಲಾಮಂದಿರದಲ್ಲಿ ಮಂಗಳವಾರ ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ವಿಶ್ವಕರ್ಮ ಜಯಂತ್ಯುತ್ಸವ ಸಮಿತಿ ವತಿಯಿಂದ ಏರ್ಪಡಿಸಿದ್ದ ವಿಶ್ವಕರ್ಮ ಜಯಂತಿ ಉದ್ಘಾಟಿಸಿ ಮಾತನಾಡಿದ ಸಚಿವರು, ‘ವಿಶ್ವಕರ್ಮ ಸಮಾಜ ಕುಲಕಸುಬು ಅವಲಂಬಿಸಿದೆ. ಈ ಕಸುಬನ್ನೇ ಬೇರೆಯವರು ಹೈಜಾಕ್ ಮಾಡಿರುವುದರಿಂದ ಮೂಲ ಕಸುಬುದಾರರಿಗೆ ಬೆಲೆ ಇಲ್ಲದ ಸಂದರ್ಭ ಸೃಷ್ಟಿಯಾಗಿದೆ’ ಎಂದರು.