‘ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ರಾಜಕೀಯ ಸಾಹಿತ್ಯದ ಗೋಷ್ಠಿಗೂ ಅವಕಾಶ ಕಲ್ಪಿಸಬೇಕು. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ನಾವು ರಾಜಕಾರಣವನ್ನೇ ಉಸಿರಾಡುತ್ತೇವೆ. ಆದರೆ, ಇಲ್ಲಿ ರಾಜಕಾರಣದ ಬಗ್ಗೆ ಪುಸ್ತಕ, ಸಾಹಿತ್ಯ ಇಲ್ಲ. ರಾಜಕೀಯವನ್ನು ಮೈಲಿಗೆಯಾಗಿ ನೋಡುವ ಪರಂಪರೆ ಬೆಳೆದುಬಂದಿದೆ. ಸಾಹಿತ್ಯದ ಮೂಲಕವಾದರೂ ಅದನ್ನು ಹೋಗಲಾಡಿಸಬೇಕು’ ಎಂದು ಅಭಿಪ್ರಾಯಪಟ್ಟರು.