ನಗರಸಭೆ ಪೌರಾಯುಕ್ತ ರಮೇಶ್ ಪ್ರತಿಕ್ರಿಯಿಸಿ, ಕಿಡಿಗೇಡಿಗಳು ಆಸನಗಳನ್ನು ಧ್ವಂಸ ಮಾಡಿರುವ ಬಗ್ಗೆ ಪೊಲೀಸರಿಗೆ ದೂರು ನೀಡಿ ಕ್ರಮವಹಿಸಲಾಗುವುದು. ನಗರದ ಸಾರ್ವಜನಿಕರಿಗೆ ಅನುಕೂಲವಾಗಲು ನಗರೋತ್ಥಾನ ಯೋಜನೆಯಲ್ಲಿ ₹ 30 ಲಕ್ಷ ವೆಚ್ಚದಲ್ಲಿ ಭೂಮಿ ಸಮತಟ್ಟು, 15ನೇ ಹಣಕಾಸು ಯೋಜನೆಯಲ್ಲಿ ಮೈದಾನದ ಸುತ್ತಲೂ ₹ 12 ಲಕ್ಷ ವೆಚ್ಚದಲ್ಲಿ ವಾಕಿಂಗ್ ಪಾಥ್ ಮತ್ತು ಗ್ರಾನೈಟ್ ಆಸನಗಳಿಗೆ ತಲಾ ₹ 9 ಸಾವಿರ ವೆಚ್ಚ ಮಾಡಲಾಗಿದೆ ಎಂದರು.