ಈ ಕುರಿತು ಪ್ರತಿಕ್ರಿಯಿಸಿದ ಅವರು, ‘ಮುಸ್ಲಿಮ್ ಧರ್ಮದವನಾಗಿ ಕ್ರೈಸ್ತ ಧರ್ಮದ ಮೋಂಬತ್ತಿಯಿಂದ ಹಿಂದೂ ಧರ್ಮದ ಜ್ಯೋತಿ ಬೆಳಗುತ್ತಿದ್ದೇನೆ ಎಂದು ಎಪಿಜೆ ಅಬ್ದುಲ್ ಕಲಾಂ ಅವರು ಒಮ್ಮೆ ತಮ್ಮ ಭಾಷಣದಲ್ಲಿ ಹೇಳಿದ್ದರು. ಅದರಂತೆ ಮೂರು ಧರ್ಮಗಳೂ ಸೌಹಾರ್ದತೆಯಿಂದ ಇರಬೇಕು, ಶಿಕ್ಷಣಕ್ಕೆ ಮಹತ್ವ ಕೊಡಬೇಕು ಎಂಬ ಉದ್ದೇಶದಿಂದ ಈ ಚಿತ್ರ ರಚಿಸಿದ್ದೇನೆ’ ಎಂದು ಹೇಳಿದರು.