‘ಯಾವೊಬ್ಬ ರೈತ ಮುಖಂಡನನ್ನು ನಂಬುವಂತಿಲ್ಲ. ಜಿಲ್ಲೆಯವರೇ ಆದ ವಿವಿಧ ರೈತ ಸಂಘಟನೆಗಳ ರಾಜ್ಯ ಅಧ್ಯಕ್ಷರಾದ ಬಡಗಲಪುರ ನಾಗೇಂದ್ರ, ಕುರುಬೂರು ಶಾಂತಕುಮಾರ್ ಸಹ ರೈತರ ಹಿತ ರಕ್ಷಿಸುತ್ತಿಲ್ಲ. ರೈತರ ಕಾಳಜಿ ಯಾರೊಬ್ಬರಿಗೂ ಬೇಡವಾಗಿದೆ. ಇಬ್ಬರೂ ಮಧ್ಯವರ್ತಿಗಳಂತಾಗಿದ್ದಾರೆ’ ಎಂದು ನಗರದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ರೈತ ಮುಖಂಡರ ವಿರುದ್ಧ ಅವರು ಗುಡುಗಿದರು.