ಮೈಸೂರು: ಇಲ್ಲಿನ ವಿದ್ಯಾರಣ್ಯಾಪುರಂನ 4ನೇ ಮೇನ್ನ ನಿವಾಸಿ ನಂದಿನಿ (45) ಅವರು ಶುಕ್ರವಾರ ರಾತ್ರಿ 8.45ರ ಸಮಯದಲ್ಲಿ ರಂಗೋಲಿ ಹಾಕುತ್ತಿರುವಾಗ ಬೈಕ್ನಲ್ಲಿ ಬಂದ ಇಬ್ಬರು ಸರ ಕಿತ್ತುಕೊಂಡು ಪರಾರಿಯಾಗಿದ್ದಾರೆ.
ವಿಳಾಸ ಕೇಳುವ ನೆವದಲ್ಲಿ ಮೊದಲಿಗೆ ಮಾತನಾಡಿಸಿದ ಅವರು ಕುತ್ತಿಗೆಯಲ್ಲಿದ್ದ ಸರವನ್ನು ಕಿತ್ತುಕೊಂಡು ಹೋಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ವಿದ್ಯಾರಣ್ಯಪುರಂ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.