ಮೈಸೂರು: ಹೊರ ಜಿಲ್ಲೆಗಳಿಂದ ಇಲ್ಲಿಗೆ ಬರುವ ಕಾರ್ಮಿಕರ ತಪಾಸಣೆಗಾಗಿ ಜಿಲ್ಲೆಯ ಹಲವು ಭಾಗಗಳಲ್ಲಿ ಚೆಕ್ಪೋಸ್ಟ್ಗಳನ್ನು ತೆರೆಯಲಾಗಿದ್ದು, ಎಲ್ಲರನ್ನೂ ಆರೋಗ್ಯ ತಪಾಸಣೆಗೆ ಒಳಪಡಿಸಿ 14 ದಿನಗಳ ಕಾಲ ಹೋಂಕ್ವಾರಂಟೈನ್ಗೆ ಒಳಪಡಿಸಲಾಗುತ್ತಿದೆ.
ಬೆಂಗಳೂರಿನಿಂದ ಸೋಮವಾರ 10 ಕೆಎಸ್ಆರ್ಟಿಸಿ ಬಸ್ಗಳಲ್ಲಿ 246 ಮಂದಿ ಬಂದರು. ಇವರನ್ನು ಸಾತಗಳ್ಳಿ ಬಸ್ ಡಿಪೊದಲ್ಲೇ ಆರೋಗ್ಯ ತಪಾಸಣೆಗೆ ಒಳಪಡಿಸಲಾಯಿತು. ನಂತರ, ಇವರ ವಿವರಗಳನ್ನು ಕಲೆ ಹಾಕಿ, 14 ದಿನಗಳ ಕಾಲ ಹೋಂ ಕ್ವಾರಂಟೈನ್ಗೆ ಒಳಪಡಿಸಲಾಯಿತು.
ನಗರದ ಹೊರವಲಯದ ಜಿಆರ್ಎಸ್ ಫ್ಯಾಂಟಸಿ ಪಾರ್ಕ್ ಸಮೀಪ ಖಾಸಗಿ ವಾಹನಗಳಲ್ಲಿ ಬರುವವರ ಮೇಲೆ ನಿಗಾ ಇರಿಸಲಾಗಿತ್ತು. ಇದಲ್ಲದೇ ಕೊಪ್ಪ, ಗುಂಡ್ಲುಪೇಟೆ, ಬನ್ನೂರು, ಮೂಗೂರು ಸಮೀಪವೂ ವಿಶೇಷ ಚೆಕ್ಪೋಸ್ಟ್ ರಚಿಸಿಕೊಂಡು, ಜಿಲ್ಲಾಡಳಿತದ ಅನುಮತಿಯೊಂದಿಗೆ ಬರುವವರ ಆರೋಗ್ಯ ತಪಾಸಣೆ ನಡೆಸಲಾಯಿತು.