ಪಟ್ಟಣದ ಹಾಪ್ಕಾಮ್ಸ್ ಕಚೇರಿಯಿಂದ ಕೊಡಳ್ಳಿ ವೃತ್ತದ ಸಮೀಪದಲ್ಲಿ ಇರುವ ವೀರಯೋಧ ಶಿವಾನಂದ ಸರ್ಕಲ್ ತನಕ ಜೋಡಿ ರಸ್ತೆಯ ವಿಸ್ತರಣೆ ಕಾಮಗಾರಿ ನಡೆಯುತ್ತಿದ್ದು, ಅದಕ್ಕಾಗಿ ರಸ್ತೆಯ ಇಕ್ಕೆಲಗಳಲ್ಲಿ ಒತ್ತುವರಿಯನ್ನು ತೆರವುಗೊಳಿಸಲಾಗಿದ್ದು, ಕಾಂಕ್ರಿಟ್ ಚರಂಡಿ ಮಾಡಲಾಗುತ್ತಿದೆ. ಆದರೆ, ಅವೈಜ್ಞಾನಿಕವಾಗಿ ಕೆಲಸ ಮಾಡುತ್ತಿರುವುದರಿಂದ ಕೊಳಚೆ ರಸ್ತೆಯ ಮೇಲೆ ಹರಿಯುತ್ತಿದೆ. ಇದರಿಂದಾಗಿ ರಸ್ತೆಯಲ್ಲಿ ಬೃಹತ್ ಗುಂಡಿಗಳು ನಿರ್ಮಾಣವಾಗಿದೆ.