ಕವಿತೆ, ಶಿಶು ಸಾಹಿತ್ಯ, ಚುಟುಕು ಸಾಹಿತ್ಯ, ಚಿಂತನ ಕೃತಿಗಳು, ಸಾಹಿತ್ಯ ವಿಮರ್ಶೆಗಳನ್ನು ಕುರಿತ ಅವರ ಕೃತಿಗಳು ಪ್ರಕಟವಾಗಿವೆ. ಹದಿನೈದಕ್ಕೂ ಹೆಚ್ಚು ಗ್ರಂಥಗಳನ್ನು ಸಂಪಾದಿಸಿದ್ದಾರೆ. ದೇಜಗೌ ಕುರಿತು 'ಕಾಯಕ ವಿಭೂತಿ' ಬೃಹತ್ ಅಭಿನಂದನ ಗ್ರಂಥವನ್ನು ಹೊರತಂದಿದ್ದಾರೆ. ದೊಡ್ಡ ರಂಗೇಗೌಡರನ್ನು ಕುರಿತು ಬರೆದಿರುವ 'ಮಧುಗಿರಿಯ ಮಾಣಿಕ್ಯ' ಸಂಭಾವನೆ ಗ್ರಂಥ ಇತ್ತೀಚೆಗೆ ಬಿಡುಗಡೆ ಆಗಿದೆ. ಶಿವಮಯ, ಅಕ್ಷಯ ಬೃಹತ್ ಅಭಿನಂದನ ಗ್ರಂಥಗಳು ಇವರನ್ನು ಕುರಿತಾಗಿವೆ.