ಮೈಸೂರು: ನಾಗರಿಕರ ಸಮಸ್ಯೆಗಳನ್ನು ಪರಿಹರಿಸುವುದಕ್ಕಾಗಿ ಮಹಾನಗರಪಾಲಿಕೆಯಿಂದ ಹಮ್ಮಿಕೊಂಡಿದ್ದ ಅದಾಲತ್ನ ಅಂತಿಮ ಕಾರ್ಯಕ್ರಮ ಬುಧವಾರ ನಡೆಯಿತು.
ಮೇಯರ್ ಶಿವಕುಮಾರ್ ನೇತೃತ್ವದಲ್ಲಿ ನಡೆದ ಕಾರ್ಯಕ್ರಮದಲ್ಲಿ 98 ಅರ್ಜಿಗಳನ್ನು ಪರಿಶೀಲಿಸಿ ಪರಿಹರಿಸಲು ಕ್ರಮ ವಹಿಸಲಾಯಿತು. 174 ಅರ್ಜಿಗಳಿಗೆ ಹಿಂಬರಹ ನೀಡಲಾಯಿತು. ನ.14ರಿಂದ 19ರವರೆಗೆ ವಿವಿಧ ಸಮಸ್ಯೆಗಳನ್ನು ಬಗೆಹರಿಸುವಂತೆ ಸಾರ್ವಜನಿಕರಿಂದ ಅರ್ಜಿಗಳು ಸಲ್ಲಿಕೆಯಾಗಿದ್ದವು.
ಖಾತೆ ವರ್ಗಾವಣೆ, ಪೌತಿ ಖಾತೆಗಾಗಿ ಕಂದಾಯ ಶಾಖೆಗೆ ಸಲ್ಲಿಸಿದ್ದ 82 ಅರ್ಜಿಗಳಲ್ಲಿ 35 ಅರ್ಜಿಗಳಿಗೆ ಖಾತಾ ಪತ್ರವನ್ನು ವಿತರಿಸಲಾಯಿತು. ಸಮರ್ಪಕ ದಾಖಲೆಗಳು ಇಲ್ಲದ ಮತ್ತು ಕಾನೂನು ತೊಡಕಿರುವ 47 ಅರ್ಜಿಗಳಿಗೆ ಹಿಂಬರಹ ನೀಡಲಾಯಿತು.
ಸಲ್ಲಿಕೆಯಾಗಿದ್ದ ಅರ್ಜಿಗಳನ್ನು ಪರಿಶೀಲಿಸಲಾಯಿತು. ಹಿಂಬರಹ ನೀಡಲಾಯಿತು. ಸಲ್ಲಿಕೆಯಾದ 18 ಹೊಸ ಅರ್ಜಿಗಳನ್ನು ಮುಂದಿನ ವಾರ ವಿಲೇವಾರಿ ಮಾಡಲು ತೀರ್ಮಾನಿಸಲಾಯಿತು.
ಉಪ ಮೇಯರ್ ಡಾ.ಜಿ.ರೂಪಾ ಯೋಗೇಶ್, ಆಯುಕ್ತ ಜಿ.ಲಕ್ಷ್ಮೀಕಾಂತ್ ರೆಡ್ಡಿ, ಹೆಚ್ಚುವರಿ ಆಯುಕ್ತರಾದ ರೂಪಾ ಹಾಗೂ ಎಂ.ಕೆ.ಸವಿತಾ ಇದ್ದರು.