ಎಚ್.ಡಿ. ಕೋಟೆ: ಜಿಂಕೆ ಕದ್ದ ಆರೋಪದಲ್ಲಿ ಬಂಧಿತರಾಗಿ ಪೊಲೀಸರ ವಶದಲ್ಲಿದ್ದ, ಜೇನು ಕುರುಬ ಸಮುದಾಯದ ಹೊಸಳ್ಳಿ ಹಾಡಿ ನಿವಾಸಿ ಕರಿಯಪ್ಪ (45) ಅನುಮಾನಾಸ್ಪದವಾಗಿ ಸಾವನ್ನಪ್ಪಿದ್ದು, ’ಲಾಕಪ್ ಡೆತ್‘ ಆಗಿದೆ ಎಂದು ಆರೋಪಿಸಿ,ಆದಿವಾಸಿ ಗಿರಿಜನರು ಮತ್ತು ಸಾರ್ವಜನಿಕರು ಬೇಗೂರು ವಲರ ಅರಣ್ಯಾಧಿಕಾರಿ ಕಚೇರಿ ಮುಂದೆ ಬುಧವಾರ ಪ್ರತಿಭಟನೆ ನಡೆಸಿದರು.