ಘಟನೆ ವಿವರ: ಗ್ರಾಮದ ಸಿದ್ದಯ್ಯ ಎಂಬುವವರ ಮನೆಯಲ್ಲಿ ಕಾರ್ತೀಕ ಮಾಸದ ಅಂಗವಾಗಿ ಭೈರವೇಶ್ವರ ದೇವರ ವಿಶೇಷ ಪೂಜೆ ಹಮ್ಮಿಕೊಂಡಿದ್ದರು. ಈ ಕಾರ್ಯಕ್ರಮಕ್ಕೆ ನಟರಾಜ್ ಮತ್ತು ಪತ್ನಿ ಪವಿತ್ರ ತೆರಳಿದ್ದರು. ಪೂಜಾ ಸಮಯದಲ್ಲಿ ಗುಡ್ಡಪ್ಪ ಶಿವಕುಮಾರ್ (ಪೂಜಾರಿ), ದೇವರು ಬಂದಿದೆ ಎಂದು ಕುಣಿಯಲಾರಂಭಿಸಿ ಆತನ ಕೈಯಲ್ಲಿದ್ದ ಬಿದಿರು ಕಡ್ಡಿಯಿಂದ ಹಿಗ್ಗಾಮುಗ್ಗ ಪವಿತ್ರಳಿಗೆ ಥಳಿಸಿದ್ದಾನೆ.