<p><strong>ಮೈಸೂರು</strong>: ‘ಎಸ್ಪಿಎಫ್ಟಿ (ಸೈಂಟಿಫಿಕ್ ಪ್ರಾಣಾಯಾಮ ಫೌಂಡೇಷನ್) ವತಿಯಿಂದ ಮಾರ್ಚ್ 12 ಮತ್ತು 13ರಂದು ಬನ್ನೂರು ರಸ್ತೆಯ ಮೆಲ್ಲಹಳ್ಳಿಯ ಎಟಿಎಂಇ ಎಂಜಿನಿಯರಿಂಗ್ ಕಾಲೇಜಿನಲ್ಲಿ ‘ಪ್ರಾಣಾಯಾಮ’ ಕುರಿತ ರಾಷ್ಟ್ರೀಯ ಸಮ್ಮೇಳನ–ಭಾರತ 2026’ ಆಯೋಜಿಸಲಾಗಿದೆ.</p>.<p>‘ವಿವಿಧ ಸಂಘ–ಸಂಸ್ಥೆಗಳ ಸಹಯೋಗದಲ್ಲಿ ಸಮ್ಮೇಳನ ನಡೆಯಲಿದೆ. 12ರಂದು ಬೆಳಿಗ್ಗೆ 9ಕ್ಕೆ ಉದ್ಘಾಟನೆ ನಡೆಯಲಿದ್ದು, ಉಡುಪಿಯ ಪೇಜಾವರ ಮಠಾಧೀಶ ವಿಶ್ವಪ್ರಸನ್ನತೀರ್ಥ ಸ್ವಾಮೀಜಿ ಸಾನ್ನಿಧ್ಯ ವಹಿಸುವರು’ ಎಂದು ಫೌಂಡೇಷನ್ ಅಧ್ಯಕ್ಷೆ ದೇವಕಿ ಮಾಧವ್ ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.</p><p>‘ಮುಖ್ಯ ಅತಿಥಿಗಳಾಗಿ ಪದ್ಮಶ್ರೀ ಪುರಸ್ಕೃತರಾದ ಎಚ್.ಆರ್.ನಾಗೇಂದ್ರ, ವಿದ್ಯಾವರ್ಧಕ ಎಂಜಿನಿಯರಿಂಗ್ ಕಾಲೇಜಿನ ಪ್ರಾಂಶುಪಾಲ ಸದಾಶಿವಗೌಡ, ಜಿಲ್ಲಾ ಆಯುಷ್ ಅಧಿಕಾರಿ ಡಾ.ರೇಣುಕಾ ದೇವಿ, ಮೊರಾರ್ಜಿ ದೇಸಾಯಿ ರಾಷ್ಟ್ರೀಯ ಯೋಗ ಸಂಸ್ಥೆ ಮಾಜಿ ನಿರ್ದೇಶಕ ಈಶ್ವರ್ ವಿ.ಬಸವರೆಡ್ಡಿ, ಪತಂಜಲಿ ವಿವಿ ಪ್ರಾಧ್ಯಾಪಕ ವಿನೋದ್ ಕುಮಾರ್ ಕಟಿಯಾರ್ ಆಗಮಿಸುವರು. ಎಟಿಎಂಇ ಕಾಲೇಜಿನ ಅಧ್ಯಕ್ಷ ಎಲ್.ಅರುಣ್ ಕುಮಾರ್ ಅಧ್ಯಕ್ಷತೆ ವಹಿಸುವರು’ ಎಂದರು.</p><p>‘ಮಾರ್ಚ್ 13ರಂದು ಮಧ್ಯಾಹ್ನ 3.30ಕ್ಕೆ ಸಮಾರೋಪ ಸಮಾರಂಭ ನಡೆಯಲಿದ್ದು, ಸುತ್ತೂರು ಮಠಾಧೀಶ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಸಾನ್ನಿಧ್ಯ ವಹಿಸುವರು. ಮುಖ್ಯ ಅತಿಥಿಗಳಾಗಿ ಯೋಗ ಯೂನಿವರ್ಸಿಟಿ ಆಫ್ ಭಾರತ್ ಸಂಸ್ಥಾಪಕ ರಾಜಶೇಖರ ರೆಡ್ಡಿ ಪೋರೆಡ್ಡಿ, ಎಸ್ವಿವೈಎಎಸ್ಎ ಮಾಜಿ ಕುಲಪತಿ ಸುಬ್ರಮಣ್ಯ ಸ್ವಾಮಿ, ಕೈವಲ್ಯಧಾಮದ ಪ್ರಾಧ್ಯಾಪಕ ಶರಶ್ಚಂದ್ರ ಭಾಲೇಕರ್, ಕ್ರೀಡಾ ತರಬೇತಿ ವೈದ್ಯ ಪ್ರಹ್ಲಾದ ರಾವ್ ಆಗಮಿಸುವರು. ಯೋಗ ಪಟು ಖುಷಿ ಎಚ್. ಅವರು ಯೋಗ ಕಲೆ ಹಾಗೂ ವೈಜ್ಞಾನಿಕ ಪ್ರಾಣಾಯಾಮ ಪ್ರಾತ್ಯಕ್ಷಿಕೆ ಪ್ರಸ್ತುತಪಡಿಸುವರು’ ಎಂದು ತಿಳಿಸಿದರು.</p><p>ಎಲ್.ಬಸವರಾಜು, ಭಾಗ್ಯಶ್ರೀ, ಸೀತಾ ರಮೇಶ್ ಉಪಸ್ಥಿತರಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮೈಸೂರು</strong>: ‘ಎಸ್ಪಿಎಫ್ಟಿ (ಸೈಂಟಿಫಿಕ್ ಪ್ರಾಣಾಯಾಮ ಫೌಂಡೇಷನ್) ವತಿಯಿಂದ ಮಾರ್ಚ್ 12 ಮತ್ತು 13ರಂದು ಬನ್ನೂರು ರಸ್ತೆಯ ಮೆಲ್ಲಹಳ್ಳಿಯ ಎಟಿಎಂಇ ಎಂಜಿನಿಯರಿಂಗ್ ಕಾಲೇಜಿನಲ್ಲಿ ‘ಪ್ರಾಣಾಯಾಮ’ ಕುರಿತ ರಾಷ್ಟ್ರೀಯ ಸಮ್ಮೇಳನ–ಭಾರತ 2026’ ಆಯೋಜಿಸಲಾಗಿದೆ.</p>.<p>‘ವಿವಿಧ ಸಂಘ–ಸಂಸ್ಥೆಗಳ ಸಹಯೋಗದಲ್ಲಿ ಸಮ್ಮೇಳನ ನಡೆಯಲಿದೆ. 12ರಂದು ಬೆಳಿಗ್ಗೆ 9ಕ್ಕೆ ಉದ್ಘಾಟನೆ ನಡೆಯಲಿದ್ದು, ಉಡುಪಿಯ ಪೇಜಾವರ ಮಠಾಧೀಶ ವಿಶ್ವಪ್ರಸನ್ನತೀರ್ಥ ಸ್ವಾಮೀಜಿ ಸಾನ್ನಿಧ್ಯ ವಹಿಸುವರು’ ಎಂದು ಫೌಂಡೇಷನ್ ಅಧ್ಯಕ್ಷೆ ದೇವಕಿ ಮಾಧವ್ ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.</p><p>‘ಮುಖ್ಯ ಅತಿಥಿಗಳಾಗಿ ಪದ್ಮಶ್ರೀ ಪುರಸ್ಕೃತರಾದ ಎಚ್.ಆರ್.ನಾಗೇಂದ್ರ, ವಿದ್ಯಾವರ್ಧಕ ಎಂಜಿನಿಯರಿಂಗ್ ಕಾಲೇಜಿನ ಪ್ರಾಂಶುಪಾಲ ಸದಾಶಿವಗೌಡ, ಜಿಲ್ಲಾ ಆಯುಷ್ ಅಧಿಕಾರಿ ಡಾ.ರೇಣುಕಾ ದೇವಿ, ಮೊರಾರ್ಜಿ ದೇಸಾಯಿ ರಾಷ್ಟ್ರೀಯ ಯೋಗ ಸಂಸ್ಥೆ ಮಾಜಿ ನಿರ್ದೇಶಕ ಈಶ್ವರ್ ವಿ.ಬಸವರೆಡ್ಡಿ, ಪತಂಜಲಿ ವಿವಿ ಪ್ರಾಧ್ಯಾಪಕ ವಿನೋದ್ ಕುಮಾರ್ ಕಟಿಯಾರ್ ಆಗಮಿಸುವರು. ಎಟಿಎಂಇ ಕಾಲೇಜಿನ ಅಧ್ಯಕ್ಷ ಎಲ್.ಅರುಣ್ ಕುಮಾರ್ ಅಧ್ಯಕ್ಷತೆ ವಹಿಸುವರು’ ಎಂದರು.</p><p>‘ಮಾರ್ಚ್ 13ರಂದು ಮಧ್ಯಾಹ್ನ 3.30ಕ್ಕೆ ಸಮಾರೋಪ ಸಮಾರಂಭ ನಡೆಯಲಿದ್ದು, ಸುತ್ತೂರು ಮಠಾಧೀಶ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಸಾನ್ನಿಧ್ಯ ವಹಿಸುವರು. ಮುಖ್ಯ ಅತಿಥಿಗಳಾಗಿ ಯೋಗ ಯೂನಿವರ್ಸಿಟಿ ಆಫ್ ಭಾರತ್ ಸಂಸ್ಥಾಪಕ ರಾಜಶೇಖರ ರೆಡ್ಡಿ ಪೋರೆಡ್ಡಿ, ಎಸ್ವಿವೈಎಎಸ್ಎ ಮಾಜಿ ಕುಲಪತಿ ಸುಬ್ರಮಣ್ಯ ಸ್ವಾಮಿ, ಕೈವಲ್ಯಧಾಮದ ಪ್ರಾಧ್ಯಾಪಕ ಶರಶ್ಚಂದ್ರ ಭಾಲೇಕರ್, ಕ್ರೀಡಾ ತರಬೇತಿ ವೈದ್ಯ ಪ್ರಹ್ಲಾದ ರಾವ್ ಆಗಮಿಸುವರು. ಯೋಗ ಪಟು ಖುಷಿ ಎಚ್. ಅವರು ಯೋಗ ಕಲೆ ಹಾಗೂ ವೈಜ್ಞಾನಿಕ ಪ್ರಾಣಾಯಾಮ ಪ್ರಾತ್ಯಕ್ಷಿಕೆ ಪ್ರಸ್ತುತಪಡಿಸುವರು’ ಎಂದು ತಿಳಿಸಿದರು.</p><p>ಎಲ್.ಬಸವರಾಜು, ಭಾಗ್ಯಶ್ರೀ, ಸೀತಾ ರಮೇಶ್ ಉಪಸ್ಥಿತರಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>