ಎಚ್.ಡಿ.ಕೋಟೆ ತಾಲ್ಲೂಕಿನಲ್ಲಿ ಗ್ರಾಮವಾಸ್ತವ್ಯಕ್ಕೆಂದು ಈಚೆಗೆ ಬಂದಿದ್ದ ಕಂದಾಯ ಸಚಿವ ಆರ್.ಅಶೋಕ್ ಅವರನ್ನು ಸ್ವಾಗತಿಸಿಕೊಂಡವರಲ್ಲಿ ಬೆತ್ತನಗೆರೆ ಶಂಕರ ಕೂಡ ಒಬ್ಬರಾಗಿದ್ದರು. ಆ ತಾಲ್ಲೂಕಿನಲ್ಲಿ ಸೇವಾ ಚಟುವಟಿಕೆಗಳಲ್ಲಿ ತೊಡಗಿಕೊಂಡು, ಹಲವರಿಗೆ ನೆರವು ನೀಡುತ್ತಿದ್ದಾನೆ ಹಾಗೂ ಹಳೇ ಮೈಸೂರು ಭಾಗದ ಪ್ರಮುಖ ಸ್ವಾಮೀಜಿಗಳನ್ನು ಭೇಟಿಯಾಗಿ ಆಶೀರ್ವಾದ ಪಡೆಯುತ್ತಿದ್ದಾನೆ.