ಮೈಸೂರು: ಗ್ರೀನ್ ಆಸ್ಕರ್ ಪ್ರಶಸ್ತಿ ವಿಜೇತರಾದ ಕೃಪಾಕರ–ಸೇನಾನಿ ವಿರಚಿತ ‘ಕ್ಯಾಮರಾ v/s ಕುವೆಂಪು’ ಪುಸ್ತಕ ಬಿಡುಗಡೆ ಕಾರ್ಯಕ್ರಮವನ್ನು ಜ.29ರಂದು ಬೆಳಿಗ್ಗೆ 10.30ಕ್ಕೆ ಮಾನಸಗಂಗೋತ್ರಿಯ ಬಿಎಂಶ್ರೀ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದೆ.
ಮೈಸೂರಿನ ಶಾಂತವೇರಿ ಜನವೇದಿಕೆ ಕರ್ನಾಟಕ ಸಹಕಾರದಲ್ಲಿ ನಡೆಯಲಿದೆ. ಕವಿ ಮೂಡ್ನಾಕೂಡು ಚಿನ್ನಸ್ವಾಮಿ, ಚಲನಚಿತ್ರ ನಟ ಪ್ರಕಾಶ್ ರಾಜ್, ಪುಸ್ತಕ ಪ್ರಕಾಶನದ ಬಿ.ಎನ್.ಶ್ರೀರಾಮ್ ಭಾಗವಹಿಸಲಿದ್ದಾರೆ.