<p><strong>ಹುಣಸೂರು</strong>: ಮಠಗಳು ಶಿಕ್ಷಣ, ಸಂಸ್ಕಾರ, ಅಕ್ಷರ ದಾಸೋಹಗಳ ಮೂಲಕ ತಮ್ಮ ಸಮಾಜಮುಖಿ ಕಾಯಕ ಸೇವಾಕಾರ್ಯ ಶ್ಲಾಘನೀಯ ಎಂದು ಬಿಜೆಪಿ ಕೇಂದ್ರ ಸಂಸದೀಯ ಮಂಡಳಿಯ ಸದಸ್ಯ ಬಿ.ಎಸ್.ಯಡಿಯೂರಪ್ಪ ಹೇಳಿದರು.</p><p>ತಾಲ್ಲೂಕಿನ ಮಾದಹಳ್ಳಿ ಗ್ರಾಮದ ಗುರುಬೂದಿ ಉಕ್ಕಿನಕಂತೆ ಮಠದಲ್ಲಿ ಗುರುಬೂದಿ ಸ್ವಾಮಿಗಳ 397ನೇ ಆರಾಧನೆ, 63 ಪ್ರಮಥರ ಪೂಜೆ ಶ್ರೀಮಠದ ನೂತನ ಕಟ್ಟಡ ಹರಿನಾರು ಗದ್ದುಗೆಗಳ ಶತಾಯುಷಿ ಸಿದ್ದಲಿಂಗಸ್ವಾಮಿಗಳ ಸಭಾಂಗಣ ಮತ್ತು ಬಸವದ್ವಾರ ಉದ್ಘಾಟಿಸಿ ಅವರು ಮಾತನಾಡಿದರು.</p><p>‘ಶ್ರೀಮಠಕ್ಕೆ 600 ವರ್ಷಗಳ ಇತಿಹಾಸವಿದ್ದು, ಮಠ ಎಲ್ಲಾ ದಿಕ್ಕಿನಲ್ಲೂ ತನ್ನದೇ ಪಾರಮ್ಯ ಸಾಧಿಸಿಕೊಂಡಿದೆ. 2003ರಲ್ಲಿ ಮಠ ಮುನ್ನಡೆಸಲು ಸನ್ಯಾಸತ್ವ ದೀಕ್ಷೆ ಸ್ವೀಕರಿಸಿದ ಸಾಂಬಸದಾಶಿವ ಸ್ವಾಮೀಜಿಗಳ ಶ್ರಮ ಅಪಾರ’ ಎಂದರು.</p><p>‘ಮಠ ಧಾರ್ಮಿಕ ಕಾರ್ಯಗಳಿಗೆ ಸೀಮಿತಗೊಳ್ಳದೆ ಗ್ರಾಮೀಣ ಪರಿಸರದ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ, ಸಂಸ್ಕಾರ ಮತ್ತು ಸಂಸ್ಕೃತಿ ನೀಡಿ ಭವಿಷ್ಯದ ಆಸ್ತಿಯನ್ನಾಗಿ ರೂಪಿಸುವ ಕೇಂದ್ರವಾಗಿದೆ. ಧಾರ್ಮಿಕ, ಶೈಕ್ಷಣಿಕ ಮತ್ತು ಸಾಮಾಜಿಕ ಅಭಿವೃದ್ಧಿಗೂ ಒತ್ತು ನೀಡಿವೆ’ ಎಂದು ಹೇಳಿದರು.</p><p>‘ಪ್ರಧಾನಿ ನರೇಂದ್ರ ಮೋದಿ ಅವರ ದಿಟ್ಟ ನಿಲುವು ಮತ್ತು ವಿಶ್ವದ ಎಲ್ಲರೊಂದಿಗಿನ ಸ್ನೇಹ ಭಾರತವನ್ನು ಉನ್ನತ ಸ್ಥಾನದಲ್ಲಿ ನಿಲ್ಲಿಸಲು ಸಹಕಾರಿಯಾಗಿದ್ದು, ಭವಿಷ್ಯದಲ್ಲೂ ದೇಶದ ಅಭಿವೃದ್ಧಿಗೆ ಮೋದಿ ನಾಯಕತ್ವದಲ್ಲಿ ಭಾರತ ತನ್ನದೇ ಶಕ್ತಿ ಸಾಮರ್ಥ್ಯವನ್ನು ಹೊಂದಲು ಸಹಕಾರವಾಗಲಿದೆ. ಮಠಗಳು ಅವರ ಶ್ರೇಯಸ್ಸು ಬಯಸಬೇಕು’ ಎಂದು ಮನವಿ ಮಾಡಿದರು.</p><p>ಬೇಬಿ ಮಠದ ತ್ರಿನೇತ್ರಮಹಾಂತ ಶಿವಯೋಗಿ ಸ್ವಾಮೀಜಿ ಮಾತನಾಡಿ, ‘ಸಂಸ್ಕೃತಿ, ಸಂಸ್ಕಾರ, ಜ್ಞಾನ ನೀಡುವ ಮಠ ಮತ್ತು ಮನೆ ಎರಡನ್ನು ಜೋಪಾನವಾಗಿ ಕಾಯ್ದುಕೊಂಡಲ್ಲಿ ದೇಶ ಸಮೃದ್ಧಿಯಾಗಿ ಉಳಿಯಲಿದೆ. ಮಠಗಳು ಭಕ್ತರ ಸರ್ವತೋಮುಖ ಒಳಿತು ಬಯಸಲಿವೆ’ ಎಂದು ಹೇಳಿದರು.</p><p>ಮಾಜಿ ಶಾಸಕ ಎಚ್.ಪಿ.ಮಂಜುನಾಥ್ ಮಾತನಾಡಿ, ‘ಕ್ಷೇತ್ರದ ಧಾರ್ಮಿಕ ಅಸ್ಮಿತೆಯಾದ ಮಾದಹಳ್ಳಿ ಮಠ ಭಕ್ತರ ನೆಮ್ಮದಿ ಶಾಂತಿ ನೀಡುವ ಕೇಂದ್ರವಾಗಿದ್ದು, ಅಭಿವೃದ್ಧಿ ದಿಕ್ಕಿನಲ್ಲಿ ದಾಪುಗಾಲು ಹಾಕಿ ಮತ್ತಷ್ಟು ಜನಸಾಮಾನ್ಯರ ಹತ್ತಿರವಾಗಿದೆ ಎಂದರು.</p><p>ಗುರುಲಿಂಗ ಜಂಗಮಮಠದ ನಟರಾಜ ಸ್ವಾಮೀಜಿ ಮಾತನಾಡಿದರು. ಸುತ್ತೂರು ಮಠದ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ, ಕನಕಪುರ ದೇಗುಲ ಮಠದ ಮುಮ್ಮಡಿ ನಿರ್ವಾಣ ಮಹಾಸ್ವಾಮೀಜಿ, ಅಖಿಲ ಭಾರತ ವೀರಶೈವ ಲಿಂಗಾಯತ ತಾಲ್ಲೂಕು ಘಟಕದ ಅಧ್ಯಕ್ಷ ಹಂದನಹಳ್ಳಿ ಸೋಮಶೇಖರ್, ಯು.ಎಸ್.ಬಸವರಾಜು. ರಮೇಶ್ ಕುಮಾರ್ ಸಿ.ಪಿ., ಸಮುದಾಯದ ಮುಖಂಡರಾದ ಶೇಖರ್, ಎಚ್.ಎಸ್.ರಮೇಶ, ಹರವೆ ಶ್ರೀಧರ್, ರುದ್ರೇಶ್, ಅಶೋಕ್, ಮಹದೇವಸ್ವಾಮಿ, ಕಾಂತರಾಜು ಶಿವಮೂರ್ತಿ, ಗಣೇಶ್ ಕುಮಾರಸ್ವಾಮಿ, ಡಾ.ವಿ.ವೃಷಭೇಂದ್ರ, ಜಾಬಗೆರೆ ರಮೇಶ್ ಹಾಜರಿದ್ದರು.</p>.<div><div class="bigfact-title">‘₹ 1ಕೋಟಿ ಅನುದಾನ ನೀಡಿದ್ದೆ’</div><div class="bigfact-description">‘₹ 1ಕೋಟಿ ಅನುದಾನ ನೀಡಿದ್ದೆ’ನಾನು ಮುಖ್ಯಮಂತ್ರಿ ಆಗಿದ್ದ ಅವಧಿಯಲ್ಲಿ ಮಠದ ಅಭಿವೃದ್ಧಿಗೆ ₹1 ಕೋಟಿ ಅನುದಾನ ನೀಡಿದ್ದು, ಅಭಿವೃದ್ಧಿಗೆ ಪೂರಕವಾಗಿ ಸ್ಪಂದಿಸಿ ಮಠ ತನ್ನ ಹಳೆಯ ಸ್ವರೂಪ ಬದಲಿಸಿ ಹೊಸ ರೂಪದಲ್ಲಿ ಸಾಗಿದೆ’ ಎಂದು ಯಡಿಯೂರಪ್ಪ ಹೇಳಿದರು.</div></div>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಹುಣಸೂರು</strong>: ಮಠಗಳು ಶಿಕ್ಷಣ, ಸಂಸ್ಕಾರ, ಅಕ್ಷರ ದಾಸೋಹಗಳ ಮೂಲಕ ತಮ್ಮ ಸಮಾಜಮುಖಿ ಕಾಯಕ ಸೇವಾಕಾರ್ಯ ಶ್ಲಾಘನೀಯ ಎಂದು ಬಿಜೆಪಿ ಕೇಂದ್ರ ಸಂಸದೀಯ ಮಂಡಳಿಯ ಸದಸ್ಯ ಬಿ.ಎಸ್.ಯಡಿಯೂರಪ್ಪ ಹೇಳಿದರು.</p><p>ತಾಲ್ಲೂಕಿನ ಮಾದಹಳ್ಳಿ ಗ್ರಾಮದ ಗುರುಬೂದಿ ಉಕ್ಕಿನಕಂತೆ ಮಠದಲ್ಲಿ ಗುರುಬೂದಿ ಸ್ವಾಮಿಗಳ 397ನೇ ಆರಾಧನೆ, 63 ಪ್ರಮಥರ ಪೂಜೆ ಶ್ರೀಮಠದ ನೂತನ ಕಟ್ಟಡ ಹರಿನಾರು ಗದ್ದುಗೆಗಳ ಶತಾಯುಷಿ ಸಿದ್ದಲಿಂಗಸ್ವಾಮಿಗಳ ಸಭಾಂಗಣ ಮತ್ತು ಬಸವದ್ವಾರ ಉದ್ಘಾಟಿಸಿ ಅವರು ಮಾತನಾಡಿದರು.</p><p>‘ಶ್ರೀಮಠಕ್ಕೆ 600 ವರ್ಷಗಳ ಇತಿಹಾಸವಿದ್ದು, ಮಠ ಎಲ್ಲಾ ದಿಕ್ಕಿನಲ್ಲೂ ತನ್ನದೇ ಪಾರಮ್ಯ ಸಾಧಿಸಿಕೊಂಡಿದೆ. 2003ರಲ್ಲಿ ಮಠ ಮುನ್ನಡೆಸಲು ಸನ್ಯಾಸತ್ವ ದೀಕ್ಷೆ ಸ್ವೀಕರಿಸಿದ ಸಾಂಬಸದಾಶಿವ ಸ್ವಾಮೀಜಿಗಳ ಶ್ರಮ ಅಪಾರ’ ಎಂದರು.</p><p>‘ಮಠ ಧಾರ್ಮಿಕ ಕಾರ್ಯಗಳಿಗೆ ಸೀಮಿತಗೊಳ್ಳದೆ ಗ್ರಾಮೀಣ ಪರಿಸರದ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ, ಸಂಸ್ಕಾರ ಮತ್ತು ಸಂಸ್ಕೃತಿ ನೀಡಿ ಭವಿಷ್ಯದ ಆಸ್ತಿಯನ್ನಾಗಿ ರೂಪಿಸುವ ಕೇಂದ್ರವಾಗಿದೆ. ಧಾರ್ಮಿಕ, ಶೈಕ್ಷಣಿಕ ಮತ್ತು ಸಾಮಾಜಿಕ ಅಭಿವೃದ್ಧಿಗೂ ಒತ್ತು ನೀಡಿವೆ’ ಎಂದು ಹೇಳಿದರು.</p><p>‘ಪ್ರಧಾನಿ ನರೇಂದ್ರ ಮೋದಿ ಅವರ ದಿಟ್ಟ ನಿಲುವು ಮತ್ತು ವಿಶ್ವದ ಎಲ್ಲರೊಂದಿಗಿನ ಸ್ನೇಹ ಭಾರತವನ್ನು ಉನ್ನತ ಸ್ಥಾನದಲ್ಲಿ ನಿಲ್ಲಿಸಲು ಸಹಕಾರಿಯಾಗಿದ್ದು, ಭವಿಷ್ಯದಲ್ಲೂ ದೇಶದ ಅಭಿವೃದ್ಧಿಗೆ ಮೋದಿ ನಾಯಕತ್ವದಲ್ಲಿ ಭಾರತ ತನ್ನದೇ ಶಕ್ತಿ ಸಾಮರ್ಥ್ಯವನ್ನು ಹೊಂದಲು ಸಹಕಾರವಾಗಲಿದೆ. ಮಠಗಳು ಅವರ ಶ್ರೇಯಸ್ಸು ಬಯಸಬೇಕು’ ಎಂದು ಮನವಿ ಮಾಡಿದರು.</p><p>ಬೇಬಿ ಮಠದ ತ್ರಿನೇತ್ರಮಹಾಂತ ಶಿವಯೋಗಿ ಸ್ವಾಮೀಜಿ ಮಾತನಾಡಿ, ‘ಸಂಸ್ಕೃತಿ, ಸಂಸ್ಕಾರ, ಜ್ಞಾನ ನೀಡುವ ಮಠ ಮತ್ತು ಮನೆ ಎರಡನ್ನು ಜೋಪಾನವಾಗಿ ಕಾಯ್ದುಕೊಂಡಲ್ಲಿ ದೇಶ ಸಮೃದ್ಧಿಯಾಗಿ ಉಳಿಯಲಿದೆ. ಮಠಗಳು ಭಕ್ತರ ಸರ್ವತೋಮುಖ ಒಳಿತು ಬಯಸಲಿವೆ’ ಎಂದು ಹೇಳಿದರು.</p><p>ಮಾಜಿ ಶಾಸಕ ಎಚ್.ಪಿ.ಮಂಜುನಾಥ್ ಮಾತನಾಡಿ, ‘ಕ್ಷೇತ್ರದ ಧಾರ್ಮಿಕ ಅಸ್ಮಿತೆಯಾದ ಮಾದಹಳ್ಳಿ ಮಠ ಭಕ್ತರ ನೆಮ್ಮದಿ ಶಾಂತಿ ನೀಡುವ ಕೇಂದ್ರವಾಗಿದ್ದು, ಅಭಿವೃದ್ಧಿ ದಿಕ್ಕಿನಲ್ಲಿ ದಾಪುಗಾಲು ಹಾಕಿ ಮತ್ತಷ್ಟು ಜನಸಾಮಾನ್ಯರ ಹತ್ತಿರವಾಗಿದೆ ಎಂದರು.</p><p>ಗುರುಲಿಂಗ ಜಂಗಮಮಠದ ನಟರಾಜ ಸ್ವಾಮೀಜಿ ಮಾತನಾಡಿದರು. ಸುತ್ತೂರು ಮಠದ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ, ಕನಕಪುರ ದೇಗುಲ ಮಠದ ಮುಮ್ಮಡಿ ನಿರ್ವಾಣ ಮಹಾಸ್ವಾಮೀಜಿ, ಅಖಿಲ ಭಾರತ ವೀರಶೈವ ಲಿಂಗಾಯತ ತಾಲ್ಲೂಕು ಘಟಕದ ಅಧ್ಯಕ್ಷ ಹಂದನಹಳ್ಳಿ ಸೋಮಶೇಖರ್, ಯು.ಎಸ್.ಬಸವರಾಜು. ರಮೇಶ್ ಕುಮಾರ್ ಸಿ.ಪಿ., ಸಮುದಾಯದ ಮುಖಂಡರಾದ ಶೇಖರ್, ಎಚ್.ಎಸ್.ರಮೇಶ, ಹರವೆ ಶ್ರೀಧರ್, ರುದ್ರೇಶ್, ಅಶೋಕ್, ಮಹದೇವಸ್ವಾಮಿ, ಕಾಂತರಾಜು ಶಿವಮೂರ್ತಿ, ಗಣೇಶ್ ಕುಮಾರಸ್ವಾಮಿ, ಡಾ.ವಿ.ವೃಷಭೇಂದ್ರ, ಜಾಬಗೆರೆ ರಮೇಶ್ ಹಾಜರಿದ್ದರು.</p>.<div><div class="bigfact-title">‘₹ 1ಕೋಟಿ ಅನುದಾನ ನೀಡಿದ್ದೆ’</div><div class="bigfact-description">‘₹ 1ಕೋಟಿ ಅನುದಾನ ನೀಡಿದ್ದೆ’ನಾನು ಮುಖ್ಯಮಂತ್ರಿ ಆಗಿದ್ದ ಅವಧಿಯಲ್ಲಿ ಮಠದ ಅಭಿವೃದ್ಧಿಗೆ ₹1 ಕೋಟಿ ಅನುದಾನ ನೀಡಿದ್ದು, ಅಭಿವೃದ್ಧಿಗೆ ಪೂರಕವಾಗಿ ಸ್ಪಂದಿಸಿ ಮಠ ತನ್ನ ಹಳೆಯ ಸ್ವರೂಪ ಬದಲಿಸಿ ಹೊಸ ರೂಪದಲ್ಲಿ ಸಾಗಿದೆ’ ಎಂದು ಯಡಿಯೂರಪ್ಪ ಹೇಳಿದರು.</div></div>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>