‘ವರ್ಣಾಶ್ರಮವನ್ನು ಧಿಕ್ಕರಿಸಿ, ಜಾತಿ ಪ್ರಜ್ಞೆಯನ್ನು ನಿರಾಕರಿಸಿ ಎಂದು ಕುವೆಂಪು ಹೇಳಿದ್ದರು. ಆದರೆ, ಅದು ಆಗುತ್ತಿಲ್ಲ. ಅಧ್ಯಾತ್ಮವನ್ನು ವೈಜ್ಞಾನಿಕವಾಗಿ ಗ್ರಹಿಸಬೇಕು ಎಂದಿದ್ದರು. ಅದು ಸಾಧ್ಯವೇ ಆಗುತ್ತಿಲ್ಲ. ವಿಶ್ವಮಾನವರೂ ಆಗುತ್ತಿಲ್ಲ. ಭಗವದ್ಗೀತೆ, ಕುರಾನ್ ಅಥವಾ ಬೈಬಲ್ ಈ ಯಾವುದೂ ಏಕೈಕ ಪರಮಪೂಜ್ಯ ಗ್ರಂಥವಾಗಬಾರದು. ಆದರೆ, ಈಗ ಅದಕ್ಕೆ ವಿರುದ್ಧವಾಗಿ ಎಲ್ಲವೂ ನಡೆಯುತ್ತಿದೆ. ಒಂದು ಗ್ರಂಥವನ್ನು ಪರಮಪೂಜ್ಯ ಎನ್ನಲಾಗುತ್ತಿದೆ’ ಎಂದು ಹೇಳಿದರು.