<p><strong>ಮೈಸೂರು</strong>: ಸದಾ ಗಂಭೀರ ರಂಗಪ್ರಯೋಗಗಳು ನಡೆಯುವ ರಂಗಾಯಣದಲ್ಲಿ ಭಾನುವಾರ ಸಂತೆಯ ಸದ್ದು ಜೋರಾಗಿತ್ತು. ‘ನೀರು ಮಜ್ಜಿಗೆ ಬರೀ ₹5. ಬನ್ನಿ ದಾಹ ನೀಗಿಸಿಕೊಳ್ಳಿ’ ಎಂದು ಚಿಣ್ಣರು ಗ್ರಾಹಕರನ್ನು ತಮ್ಮತ್ತ ಸೆಳೆಯಲು ಪೈಪೋಟಿಗೆ ಬಿದ್ದಿದ್ದರು.</p>.<p>ಚುರುಮುರಿ, ಹುರಿದ ಮಂಡಕ್ಕಿ, ಕೊಬ್ಬರಿ ಮಿಠಾಯಿ, ಚಕ್ಕುಲಿ–ಕೋಡುಬಳೆ, ಬಿಡಿಸಿದ ಹಲಸಿನ ತೊಳೆ, ಸಣ್ಣಗೆ ಕೊಯ್ಡು ಉಪ್ಪುಖಾರ ಸೇರಿಸಿದ ತೋತಾಪುರಿ ಮಾವು... ಬಗೆ ಬಗೆಯ ಬಿಸ್ಕತ್ತು... ಹೀಗೆ ನಾನಾ ಬಗೆಯ ತಿನಿಸುಗಳು ಸಂತೆಯಲ್ಲಿದ್ದವು. ಬಿಸಿಲಿನಿಂದ ಬಳಲಿದವರಿಗೆ ಮಜ್ಜಿಗೆ, ನಿಂಬೆ ಷರಬತ್ತು, ಖರ್ಬೂಜ ಜ್ಯೂಸ್ ಸಹಿತ ವಿವಿಧ ಪಾನೀಯಗಳನ್ನು ಇಡಲಾಗಿತ್ತು.</p>.<p>ರಂಗಾಯಣದಲ್ಲಿ ಕಳೆದ ನಾಲ್ಕು ವಾರಗಳ ಕಾಲ ನಡೆದ ‘ಚಿಣ್ಣರ ಮೇಳ’ದ ಸಮಾರೋಪವಾಗಿ ಭಾನುವಾರ ಆಯೋಜಿಸಲಾಗಿದ್ದ ಮಕ್ಕಳ ಸಂತೆಯಲ್ಲಿ, ಮಕ್ಕಳೇ ಖುದ್ದು ವ್ಯಾಪಾರಕ್ಕಿಳಿದು ತಮ್ಮ ಸಾಮರ್ಥ್ಯ ಪ್ರದರ್ಶಿಸಿದರು. ಪೋಷಕರೂ ಮಕ್ಕಳೊಡಗೂಡಿ ಸಂತೆಯಲ್ಲಿ ಪಾಲ್ಗೊಂಡರು.</p>.<p>ಕೆಲವರು ಮನೆಯಿಂದಲೇ ರವೆ ಉಂಡೆ, ಚಕ್ಕುಲಿ, ಕುಕ್ಕೀಸ್ ಮೊದಲಾದ ತಿನಿಸುಗಳನ್ನು ಸಿದ್ಧಪಡಿಸಿಕೊಂಡು ತಂದಿದ್ದರು. ಇನ್ನೂ ಕೆಲವರು ಸ್ಥಳದಲ್ಲೇ ಒಂದಿಷ್ಟು ತಿನಿಸು ಸಿದ್ಧಪಡಿಸಿ ಸಂತೆಯಲ್ಲಿಟ್ಟರು. ಮಕ್ಕಳು ವ್ಯಾಪಾರಿಗಳಂತೆಯೇ ಕೂಗುತ್ತ, ಗ್ರಾಹಕರನ್ನು ಆಕರ್ಷಿಸುವ ಪ್ರಯತ್ನ ಮಾಡಿದರು. ಪೋಷಕರೂ ಹೆಚ್ಚಿನ ಸಂಖ್ಯೆಯಲ್ಲಿ ಬಂದು ಮಕ್ಕಳನ್ನು ಪ್ರೋತ್ಸಾಹಿಸಿದರು.</p>.<p>ಸಂತೆಗೆ ಬಂದವರನ್ನು ರಂಜಿಸಲೆಂದು ಗಾನ–ಬಜಾನವೂ ಇತ್ತು. ಹಳ್ಳಿ ಸಂತೆಗಳಲ್ಲಿ ನಡೆಯುವ ಮಾದರಿಯಲ್ಲೇ ಆರ್ಕೆಸ್ಟ್ರಾ ನಡೆದಿದ್ದು, ಮಕ್ಕಳು ಹಾಡಿನ ಮೋಜು ಸವಿದರು. ನಡುವೆ ಆಗಾಗ್ಗೆ ವಿವಿಧ ವೇಷಧಾರಿಗಳು ಕಾಣಿಸಿಕೊಂಡು ನೆರೆದವರನ್ನು ರಂಜಿಸಿದರು.</p>.<div><blockquote>ಹಳ್ಳಿ ಸಂತೆ ಬಗ್ಗೆ ಪೋಷಕರಿಂದ ಕೇಳಿದ್ದೆವು. ಆದರೆ ಇಂದು ನಾವೇ ವ್ಯಾಪಾರಿಗಳಾಗಿ ಸಂತೆಯಲ್ಲಿ ನಿಂತಿರುವುದು ಖುಷಿ ಕೊಟ್ಟಿದೆ. ಇದೊಂದು ವಿಶಿಷ್ಟ ಅನುಭವ</blockquote><span class="attribution">ಧನ್ವಿತ್ ಶಿಬಿರಾರ್ಥಿ</span></div>.<div><blockquote>ಅಜ್ಜಿ ಮನೆಯ ಅನುಕೂಲಗಳಿಲ್ಲದ ನಗರ ಪ್ರದೇಶದ ಮಕ್ಕಳಿಗೆ ಚಿಣ್ಣರ ಮೇಳ ಬೇಸಿಗೆ ರಜೆಯಲ್ಲಿ ವಿಶಿಷ್ಟ ಅನುಭವ ಕಟ್ಟಿಕೊಟ್ಟಿತು. ಮಕ್ಕಳು ಖುಷಿಯಾಗಿದ್ದಾರೆ </blockquote><span class="attribution">ಸುಮನಾ ಪೋಷಕರು</span></div>.<p>ಓಕುಳಿ ಮೂಲಕ ಸಂಭ್ರಮದ ತೆರೆ ಸಂತೆ ಮುಕ್ತಾಯದ ಬಳಿಕ ಮಕ್ಕಳು ಅರಿಸಿನ ನೀರಿನಲ್ಲಿ ಓಕುಳಿ ಆಡಿ ಸಂಭ್ರಮಿಸಿದರು. ಪಾಲಿಕೆಯ ನೀರಿನ ಟ್ಯಾಂಕರ್ ಮೂಲಕ ದೊಡ್ಡ ಪಾತ್ರೆಗಳಲ್ಲಿ ನೀರನ್ನು ತುಂಬಿಸಲಾಯಿತು. ಅದರೊಳಗೆ ನೈಸರ್ಗಿಕ ಬಣ್ಣಗಳನ್ನು ಅದ್ದಿದ್ದು ಮಕ್ಕಳು ಪರಸ್ಪರ ನೀರನ್ನು ಎರೆಚುತ್ತ ಕುಣಿದು ಕುಪ್ಪಳಿಸಿದರು. ಎತ್ತಿನ ಬಂಡಿ ಮಾದರಿಯಲ್ಲಿ ಮಕ್ಕಳಿಂದ ಮೆರವಣಿಗೆ ನಡೆಯಿತು. ತಮಟೆ ಸದ್ದಿಗೆ ಮಕ್ಕಳು ಹುಚ್ಚೆದ್ದು ಕುಣಿದರು. ಸುಮಾರು ಒಂದು ಗಂಟೆ ಕಾಲ ಈ ಸಂಭ್ರಮ ಮುಂದುವರಿದಿದ್ದು ಮಕ್ಕಳ ಖುಷಿ ಕಂಡು ಪೋಷಕರೂ ಆನಂದಪಟ್ಟರು. ಈ ಮೂಲಕ ಚಿಣ್ಣರ ಮೇಳಕ್ಕೆ ಸಂಭ್ರಮದ ತೆರೆ ಬಿದ್ದಿತು. 26ನೇ ಚಿಣ್ಣರ ಮೇಳ ಇದಾಗಿದ್ದು ಏ.14ರಂದು ವನ್ಯಜೀವಿ ತಜ್ಞ ಕೃಪಾಕರ್ ಚಾಲನೆ ನೀಡಿದ್ದರು. ಮಕ್ಕಳಿಗಾಗಿ ಮನೋರಂಜನೆಯ ಮೂಲಕ ಕಲಿಕೆಯ ವಿವಿಧ ಚಟುವಟಿಕೆಗಳು ನಡೆದಿದ್ದು ಅನಿಲ ರೇವೂರ ಶಿಬಿರದ ನಿರ್ದೇಶಕರಾಗಿ ಕಾರ್ಯ ನಿರ್ವಹಿಸಿದರು. ಕೋಟಿಗಾನಹಳ್ಳಿ ರಾಮಯ್ಯ ಅವರ 12 ನಾಟಕಗಳನ್ನು ಮಕ್ಕಳು ಕಲಿತು ಅಭಿನಯಿಸಿದ್ದು ಈ ಬಾರಿಯ ಮೇಳದ ವಿಶೇಷವಾಗಿತ್ತು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮೈಸೂರು</strong>: ಸದಾ ಗಂಭೀರ ರಂಗಪ್ರಯೋಗಗಳು ನಡೆಯುವ ರಂಗಾಯಣದಲ್ಲಿ ಭಾನುವಾರ ಸಂತೆಯ ಸದ್ದು ಜೋರಾಗಿತ್ತು. ‘ನೀರು ಮಜ್ಜಿಗೆ ಬರೀ ₹5. ಬನ್ನಿ ದಾಹ ನೀಗಿಸಿಕೊಳ್ಳಿ’ ಎಂದು ಚಿಣ್ಣರು ಗ್ರಾಹಕರನ್ನು ತಮ್ಮತ್ತ ಸೆಳೆಯಲು ಪೈಪೋಟಿಗೆ ಬಿದ್ದಿದ್ದರು.</p>.<p>ಚುರುಮುರಿ, ಹುರಿದ ಮಂಡಕ್ಕಿ, ಕೊಬ್ಬರಿ ಮಿಠಾಯಿ, ಚಕ್ಕುಲಿ–ಕೋಡುಬಳೆ, ಬಿಡಿಸಿದ ಹಲಸಿನ ತೊಳೆ, ಸಣ್ಣಗೆ ಕೊಯ್ಡು ಉಪ್ಪುಖಾರ ಸೇರಿಸಿದ ತೋತಾಪುರಿ ಮಾವು... ಬಗೆ ಬಗೆಯ ಬಿಸ್ಕತ್ತು... ಹೀಗೆ ನಾನಾ ಬಗೆಯ ತಿನಿಸುಗಳು ಸಂತೆಯಲ್ಲಿದ್ದವು. ಬಿಸಿಲಿನಿಂದ ಬಳಲಿದವರಿಗೆ ಮಜ್ಜಿಗೆ, ನಿಂಬೆ ಷರಬತ್ತು, ಖರ್ಬೂಜ ಜ್ಯೂಸ್ ಸಹಿತ ವಿವಿಧ ಪಾನೀಯಗಳನ್ನು ಇಡಲಾಗಿತ್ತು.</p>.<p>ರಂಗಾಯಣದಲ್ಲಿ ಕಳೆದ ನಾಲ್ಕು ವಾರಗಳ ಕಾಲ ನಡೆದ ‘ಚಿಣ್ಣರ ಮೇಳ’ದ ಸಮಾರೋಪವಾಗಿ ಭಾನುವಾರ ಆಯೋಜಿಸಲಾಗಿದ್ದ ಮಕ್ಕಳ ಸಂತೆಯಲ್ಲಿ, ಮಕ್ಕಳೇ ಖುದ್ದು ವ್ಯಾಪಾರಕ್ಕಿಳಿದು ತಮ್ಮ ಸಾಮರ್ಥ್ಯ ಪ್ರದರ್ಶಿಸಿದರು. ಪೋಷಕರೂ ಮಕ್ಕಳೊಡಗೂಡಿ ಸಂತೆಯಲ್ಲಿ ಪಾಲ್ಗೊಂಡರು.</p>.<p>ಕೆಲವರು ಮನೆಯಿಂದಲೇ ರವೆ ಉಂಡೆ, ಚಕ್ಕುಲಿ, ಕುಕ್ಕೀಸ್ ಮೊದಲಾದ ತಿನಿಸುಗಳನ್ನು ಸಿದ್ಧಪಡಿಸಿಕೊಂಡು ತಂದಿದ್ದರು. ಇನ್ನೂ ಕೆಲವರು ಸ್ಥಳದಲ್ಲೇ ಒಂದಿಷ್ಟು ತಿನಿಸು ಸಿದ್ಧಪಡಿಸಿ ಸಂತೆಯಲ್ಲಿಟ್ಟರು. ಮಕ್ಕಳು ವ್ಯಾಪಾರಿಗಳಂತೆಯೇ ಕೂಗುತ್ತ, ಗ್ರಾಹಕರನ್ನು ಆಕರ್ಷಿಸುವ ಪ್ರಯತ್ನ ಮಾಡಿದರು. ಪೋಷಕರೂ ಹೆಚ್ಚಿನ ಸಂಖ್ಯೆಯಲ್ಲಿ ಬಂದು ಮಕ್ಕಳನ್ನು ಪ್ರೋತ್ಸಾಹಿಸಿದರು.</p>.<p>ಸಂತೆಗೆ ಬಂದವರನ್ನು ರಂಜಿಸಲೆಂದು ಗಾನ–ಬಜಾನವೂ ಇತ್ತು. ಹಳ್ಳಿ ಸಂತೆಗಳಲ್ಲಿ ನಡೆಯುವ ಮಾದರಿಯಲ್ಲೇ ಆರ್ಕೆಸ್ಟ್ರಾ ನಡೆದಿದ್ದು, ಮಕ್ಕಳು ಹಾಡಿನ ಮೋಜು ಸವಿದರು. ನಡುವೆ ಆಗಾಗ್ಗೆ ವಿವಿಧ ವೇಷಧಾರಿಗಳು ಕಾಣಿಸಿಕೊಂಡು ನೆರೆದವರನ್ನು ರಂಜಿಸಿದರು.</p>.<div><blockquote>ಹಳ್ಳಿ ಸಂತೆ ಬಗ್ಗೆ ಪೋಷಕರಿಂದ ಕೇಳಿದ್ದೆವು. ಆದರೆ ಇಂದು ನಾವೇ ವ್ಯಾಪಾರಿಗಳಾಗಿ ಸಂತೆಯಲ್ಲಿ ನಿಂತಿರುವುದು ಖುಷಿ ಕೊಟ್ಟಿದೆ. ಇದೊಂದು ವಿಶಿಷ್ಟ ಅನುಭವ</blockquote><span class="attribution">ಧನ್ವಿತ್ ಶಿಬಿರಾರ್ಥಿ</span></div>.<div><blockquote>ಅಜ್ಜಿ ಮನೆಯ ಅನುಕೂಲಗಳಿಲ್ಲದ ನಗರ ಪ್ರದೇಶದ ಮಕ್ಕಳಿಗೆ ಚಿಣ್ಣರ ಮೇಳ ಬೇಸಿಗೆ ರಜೆಯಲ್ಲಿ ವಿಶಿಷ್ಟ ಅನುಭವ ಕಟ್ಟಿಕೊಟ್ಟಿತು. ಮಕ್ಕಳು ಖುಷಿಯಾಗಿದ್ದಾರೆ </blockquote><span class="attribution">ಸುಮನಾ ಪೋಷಕರು</span></div>.<p>ಓಕುಳಿ ಮೂಲಕ ಸಂಭ್ರಮದ ತೆರೆ ಸಂತೆ ಮುಕ್ತಾಯದ ಬಳಿಕ ಮಕ್ಕಳು ಅರಿಸಿನ ನೀರಿನಲ್ಲಿ ಓಕುಳಿ ಆಡಿ ಸಂಭ್ರಮಿಸಿದರು. ಪಾಲಿಕೆಯ ನೀರಿನ ಟ್ಯಾಂಕರ್ ಮೂಲಕ ದೊಡ್ಡ ಪಾತ್ರೆಗಳಲ್ಲಿ ನೀರನ್ನು ತುಂಬಿಸಲಾಯಿತು. ಅದರೊಳಗೆ ನೈಸರ್ಗಿಕ ಬಣ್ಣಗಳನ್ನು ಅದ್ದಿದ್ದು ಮಕ್ಕಳು ಪರಸ್ಪರ ನೀರನ್ನು ಎರೆಚುತ್ತ ಕುಣಿದು ಕುಪ್ಪಳಿಸಿದರು. ಎತ್ತಿನ ಬಂಡಿ ಮಾದರಿಯಲ್ಲಿ ಮಕ್ಕಳಿಂದ ಮೆರವಣಿಗೆ ನಡೆಯಿತು. ತಮಟೆ ಸದ್ದಿಗೆ ಮಕ್ಕಳು ಹುಚ್ಚೆದ್ದು ಕುಣಿದರು. ಸುಮಾರು ಒಂದು ಗಂಟೆ ಕಾಲ ಈ ಸಂಭ್ರಮ ಮುಂದುವರಿದಿದ್ದು ಮಕ್ಕಳ ಖುಷಿ ಕಂಡು ಪೋಷಕರೂ ಆನಂದಪಟ್ಟರು. ಈ ಮೂಲಕ ಚಿಣ್ಣರ ಮೇಳಕ್ಕೆ ಸಂಭ್ರಮದ ತೆರೆ ಬಿದ್ದಿತು. 26ನೇ ಚಿಣ್ಣರ ಮೇಳ ಇದಾಗಿದ್ದು ಏ.14ರಂದು ವನ್ಯಜೀವಿ ತಜ್ಞ ಕೃಪಾಕರ್ ಚಾಲನೆ ನೀಡಿದ್ದರು. ಮಕ್ಕಳಿಗಾಗಿ ಮನೋರಂಜನೆಯ ಮೂಲಕ ಕಲಿಕೆಯ ವಿವಿಧ ಚಟುವಟಿಕೆಗಳು ನಡೆದಿದ್ದು ಅನಿಲ ರೇವೂರ ಶಿಬಿರದ ನಿರ್ದೇಶಕರಾಗಿ ಕಾರ್ಯ ನಿರ್ವಹಿಸಿದರು. ಕೋಟಿಗಾನಹಳ್ಳಿ ರಾಮಯ್ಯ ಅವರ 12 ನಾಟಕಗಳನ್ನು ಮಕ್ಕಳು ಕಲಿತು ಅಭಿನಯಿಸಿದ್ದು ಈ ಬಾರಿಯ ಮೇಳದ ವಿಶೇಷವಾಗಿತ್ತು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>