<p><strong>ಮೈಸೂರು:</strong> ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಎಲ್ಪಿಜಿ ವಾಣಿಜ್ಯ ಸಿಲಿಂಡರ್ಗಳ ಪೂರೈಕೆ ಬಂದ್ ಆಗಿದ್ದು, ಮದುವೆ ಸೇರಿ ಶುಭ ಸಮಾರಂಭಗಳಿಗೂ ತೊಂದರೆ ಎದುರಾಗಿದೆ. </p>.<p>ಯುದ್ಧದ ಕಾರಣಕ್ಕೆ ಏಕಾಏಕಿ ಸಿಲಿಂಡರ್ಗಳ ಪೂರೈಕೆಯೇ ನಿಂತುಹೋಗಿರುವುದರಿಂದ ದುಡ್ಡು ಕೊಟ್ಟರೂ ಸಿಲಿಂಡರ್ಗಳು ಸಿಗುತ್ತಿಲ್ಲ. ತಿಂಗಳುಗಳ ಮುಂಚೆಯೇ ಕಲ್ಯಾಣ ಮಂಟಪ, ಊಟೋಪಚಾರಕ್ಕೆ ಬೇಕಾದ ಎಲ್ಲ ವ್ಯವಸ್ಥೆಗಳನ್ನೂ ಕಾಯ್ದಿರಿಸಿಕೊಂಡು ನೆಮ್ಮದಿಯಿಂದ ಇದ್ದ ಕುಟುಂಬಗಳು, ಕಡೆಯ ಕ್ಷಣದಲ್ಲಿ ಪೇಚಿಗೆ ಸಿಲುಕಿವೆ. ‘ಹೇಗಾದರೂ ಮಾಡಿ ಸಿಲಿಂಡರ್ ಕೊಡಿ’ ಎಂದು ಗ್ಯಾಸ್ ಏಜೆನ್ಸಿಗಳ ಮಾಲೀಕರಿಗೆ ದುಂಬಾಲು ಬೀಳುತ್ತಿವೆ.</p>.<p>ಮೈಸೂರಿನಲ್ಲಿ ಬುಧವಾರವೂ ಇಂತಹ ಕಾರ್ಯಕ್ರಮಗಳಿಗೆ ಸಿಲಿಂಡರ್ಗಳ ಕೊರತೆ ಎದುರಾಗಿ, ಜನ ಗ್ಯಾಸ್ ಏಜೆನ್ಸಿ ಮುಂದೆ ನಿಂತಿದ್ದರು. ಅಧಿಕಾರಿಗಳು ಮಧ್ಯಪ್ರವೇಶಿಸಿ ತತ್ಕಾಲದ ವ್ಯವಸ್ಥೆ ಮಾಡಿಕೊಟ್ಟಿದ್ದಾರೆ. ದಾಸ್ತಾನು ಖಾಲಿಯಾಗಿರುವುದರಿಂದ ಜಿಲ್ಲಾಡಳಿತವೂ ಅಸಹಾಯಕವಾಗಿದೆ.</p>.<p>‘ಬುಧವಾರದಿಂದಲೇ ಜಿಲ್ಲೆಯಲ್ಲಿ ವಾಣಿಜ್ಯ ಸಿಲಿಂಡರ್ಗಳ ಪೂರೈಕೆ ಸ್ಥಗಿತಗೊಂಡಿದೆ. ಹೋಟೆಲ್, ಕಲ್ಯಾಣ ಮಂಟಪಗಳಿಗೂ ಪೂರೈಕೆ ಇಲ್ಲ. ಆಸ್ಪತ್ರೆ, ಹಾಸ್ಟೆಲ್ನಂತಹ ತುರ್ತು ಅಗತ್ಯಗಳಿಗಷ್ಟೇ ನೀಡಲಾಗುತ್ತಿದೆ. ದಾಸ್ತಾನು ಇಲ್ಲ ಎಂದು ಮೂರು ಕಂಪನಿಗಳು ಮಾಹಿತಿ ನೀಡಿವೆ’ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಜಂಟಿ ನಿರ್ದೇಶಕ ಮಂಟೇಸ್ವಾಮಿ ‘ಪ್ರಜಾವಾಣಿ’ಗೆ ತಿಳಿಸಿದರು.</p>.<p>ಗೃಹಬಳಕೆ ಸಿಲಿಂಡರ್ ಬಳಸುವಂತಿಲ್ಲ: ಗೃಹ ಬಳಕೆ ಸಿಲಿಂಡರ್ಗಳ ಪೂರೈಕೆ ಎಂದಿನಂತೆ ಇದ್ದು, ಕಡ್ಡಾಯವಾಗಿ ಮನೆಗಳಲ್ಲಷ್ಟೇ ಬಳಸಬೇಕು. ಹೋಟೆಲ್, ಕಲ್ಯಾಣ ಮಂಟಪ ಸೇರಿ ವಾಣಿಜ್ಯ ಉದ್ದೇಶಕ್ಕೆ ಬಳಸುವವರ ವಿರುದ್ಧ ಕ್ರಮಕ್ಕೆ ಜಿಲ್ಲಾಡಳಿತ ಮುಂದಾಗಿದೆ.</p>.<p>‘ಗೃಹ ಬಳಕೆ ಸಿಲಿಂಡರ್ಗಳ ಪೂರೈಕೆ ಹಾಗೂ ಬಳಕೆ ಮೇಲೆ ಆಹಾರ ಇಲಾಖೆ ಹಾಗೂ ಪೊಲೀಸರು ಕಣ್ಣಿಟ್ಟಿದ್ದಾರೆ. ಅಕ್ರಮ ಸಂಗ್ರಹ ಹಾಗೂ ಬಳಕೆ ಕಂಡರೆ ಕ್ರಮ ಕೈಗೊಳ್ಳಲಿದ್ದೇವೆ’ ಎನ್ನುತ್ತಾರೆ ಅಧಿಕಾರಿಗಳು.</p>.<p>ಸೌದೆ ಒಲೆ ಅನಿವಾರ್ಯ: ಸಿಲಿಂಡರ್ಗಳ ಕೊರತೆ ಬೆನ್ನಲ್ಲೇ ಶುಭ ಸಮಾರಂಭಗಳಿಗೆ ಸೌದೆ ಒಲೆಗಳ ಬಳಕೆಗೆ ಸಿದ್ಧತೆ ನಡೆದಿದೆ. ಗ್ರಾಮೀಣ ಭಾಗದಲ್ಲಿ ಸೌದೆ ಬಳಕೆ ರೂಢಿಯಲ್ಲಿದೆ. ಆದರೆ ನಗರದ ಕಲ್ಯಾಣ ಮಂಟಪಗಳಲ್ಲಿ, ಸ್ಟಾರ್ ಹೋಟೆಲ್ಗಳಲ್ಲಿ ಸೌದೆ ಒಲೆಗಳಿಲ್ಲ. ಬಳಕೆಗೆ ಬೇಕಾದ ಸೌಲಭ್ಯವೂ ಇಲ್ಲ. ದಟ್ಟೆ ಹೊಗೆ, ಸ್ವಚ್ಛತೆಯ ಸಮಸ್ಯೆಗಳಿವೆ. </p>.<div><blockquote>ಭಾನುವಾರ ಕಾರ್ಯಕ್ರಮವಿದ್ದು ದಿಢೀರ್ ಸಿಲಿಂಡರ್ ಕೊರತೆ ಬೇಸರ ಮೂಡಿಸಿದೆ. ಅನುಮತಿ ನೀಡಿದರೆ ಗೃಹ ಬಳಕೆ ಸಿಲಿಂಡರ್ ಬಳಸುತ್ತೇವೆ. ಸೌದೆ ಒಲೆಗೂ ಸಿದ್ಧತೆ ಮಾಡಿಕೊಂಡಿದ್ದೇವೆ</blockquote><span class="attribution">ಪ್ರಶಾಂತ್ ಮೈಸೂರು ನಿವಾಸಿ</span></div>.<div><blockquote>ಸದ್ಯ ಗೃಹಬಳಕೆ ಅಡುಗೆ ಅನಿಲ ಸಿಲಿಂಡರ್ಗಳ ಪೂರೈಕೆಯಲ್ಲಿ ಯಾವುದೇ ತೊಂದರೆ ಆಗಿಲ್ಲ. ಗ್ರಾಹಕರು ಆತಂಕಕ್ಕೆ ಒಳಗಾಗದೇ ಎಂದಿನಂತೆ ಅಗತ್ಯವಿದ್ದ ಸಂದರ್ಭದಲ್ಲಷ್ಟೇ ಖರೀದಿಸಬೇಕು</blockquote><span class="attribution">ಮಂಟೇಸ್ವಾಮಿ ಜಂಟಿ ನಿರ್ದೇಶಕ ಆಹಾರ ಇಲಾಖೆ</span></div>.<h2>ಕಾಳಸಂತೆಯಲ್ಲಿ ಮಾರಿದರೆ ಕ್ರಮ </h2>.<p>ಮೈಸೂರು: ಮಾರುಕಟ್ಟೆಯಲ್ಲಿ ಅಡುಗೆ ಅನಿಲ ಸಿಲಿಂಡರ್ಗೆ ಅಭಾವ ಸೃಷ್ಟಿಯಾಗುತ್ತಿದ್ದಂತೆಯೇ ಗೃಹ ಬಳಕೆಯ ಸಿಲಿಂಡರ್ಗಳನ್ನು ಹೆಚ್ಚಿನ ದರಕ್ಕೆ ಅಕ್ರಮವಾಗಿ ಮಾರಾಟ ಮಾಡುತ್ತಿರುವ ಆರೋಪ ಕೇಳಿಬಂದಿದೆ. ವಾಣಿಜ್ಯ ಬಳಕೆಯ ಸಿಲಿಂಡರ್ಗಳ ಪೂರೈಕೆ ಬಂದ್ ಆಗಿದ್ದು ಕೆಲವು ಸಣ್ಣ ಹೋಟೆಲ್ಗಳ ವರ್ತಕರು ಬೀದಿಬದಿ ತಿನಿಸುಗಳ ವ್ಯಾಪಾರಿಗಳು ವಾಮ ಮಾರ್ಗದ ಮೂಲಕ ಗೃಹ ಬಳಕೆಯ ಸಿಲಿಂಡರ್ ಖರೀದಿಸಲು ಮುಂದಾಗಿದ್ದಾರೆ. ಸದ್ಯ ಮಾರುಕಟ್ಟೆಯಲ್ಲಿ ಈ ಸಿಲಿಂಡರ್ನ ಬೆಲೆ ₹917 ಇದೆ. ಆದರೆ ಕಾಳಸಂತೆಯಲ್ಲಿ ₹1300–1500ವರೆಗೂ ಮಾರಾಟಕ್ಕೆ ಯತ್ನ ನಡೆದಿದೆ. ಕ್ರಮಕ್ಕೆ ಮುಂದಾದ ಜಿಲ್ಲಾಡಳಿತ: ಸಿಲಿಂಡರ್ಗಳ ಅಕ್ರಮ ದಾಸ್ತಾನು ಹಾಗೂ ಮಾರಾಟದ ಮೇಲೆ ಕಣ್ಣಿಟ್ಟಿರುವ ಜಿಲ್ಲಾಡಳಿತವು ಕಾಳಸಂತೆಯಲ್ಲಿ ಎಲ್ಪಿಜಿ ಮಾರಾಟ ತಡೆಗೆ ಕಟ್ಟುನಿಟ್ಟಿನ ಕ್ರಮಕ್ಕೆ ಮುಂದಾಗಿದೆ. ‘ ಜಿಲ್ಲೆಯಲ್ಲಿ 69 ಏಜೆನ್ಸಿಗಳಿದ್ದು ನಿತ್ಯ ಅವುಗಳಲ್ಲಿನ ಮಾರಾಟ ಮತ್ತು ಉಳಿಕೆ ದಾಸ್ತಾನು ಪರಿಶೀಲಿಸುತ್ತಿದ್ದೇವೆ. ಜಿಲ್ಲಾಧಿಕಾರಿ ಸಭೆ ನಡೆಸಿ ಸೂಚನೆ ನೀಡಿದ್ದಾರೆ. ಕಾಳಸಂತೆಯಲ್ಲಿ ಮಾರಾಟಕ್ಕೆ ಮುಂದಾದಲ್ಲಿ ಅಂತಹ ಸಿಲಿಂಡರ್ಗಳನ್ನು ಜಪ್ತಿ ಮಾಡಿ ಕಾನೂನು ಕ್ರಮ ಜರುಗಿಸುತ್ತೇವೆ’ ಎಂದು ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಜಂಟಿ ನಿರ್ದೇಶಕ ಮಂಟೇಸ್ವಾಮಿ ಎಚ್ಚರಿಸಿದರು.</p>.<h2>ಬಂಕ್ಗಳಲ್ಲಿ ಸರದಿ ಸಾಲು</h2>.<p> ಜನರು ಆತಂಕದಿಂದ ಪೆಟ್ರೋಲ್–ಡೀಸೆಲ್ ಖರೀದಿಗೆ ಮುಂದಾಗಿದ್ದು ಬಂಕ್ಗಳಲ್ಲಿ ವಾಹನಗಳ ಸಾಲು ಹೆಚ್ಚುತ್ತಿದೆ. ಬೆಲೆ ಏರಬಹುದು ಹಾಗೂ ಕೊರತೆ ಉಂಟಾಗಬಹುದು ಎನ್ನುವ ಆತಂಕದಿಂದ ಜನರು ತಮ್ಮ ವಾಹನಗಳಿಗೆ ಇಂಧನ ಭರ್ತಿ ಮಾಡಿಸಿಕೊಳ್ಳುತ್ತಿದ್ದಾರೆ. ಹುಣಸೂರು ರಸ್ತೆಯಲ್ಲಿರುವ ಇಂಡಿಯನ್ ಆಯಿಲ್ ಬಂಕ್ನಲ್ಲಿ ಬುಧವಾರ ದಾಸ್ತಾನು ಖಾಲಿ ಆಗಿದ್ದು ಗ್ರಾಹಕರು ವಾಪಸ್ ಆದರು. ಆಟೊ ಎಲ್ಪಿಜಿ ಸಿಎನ್ಜಿ ಮೊದಲಾದ ಮಾದರಿಯ ಇಂಧನ ಪೂರೈಕೆಯಲ್ಲೂ ವ್ಯತ್ಯಯ ಆಗಿದೆ. ಅಧಿಕಾರಿಗಳು ಈ ಬಗ್ಗೆ ಸ್ಪಷ್ಟನೆ ನೀಡಿದ್ದು ‘ ಪೆಟ್ರೋಲ್–ಡೀಸೆಲ್ ಪೂರೈಕೆಯಲ್ಲಿ ಯಾವುದೇ ಸಮಸ್ಯೆಯಾಗಿಲ್ಲ. ಈ ಬಗ್ಗೆ ಆತಂಕ ಪಡುವ ಅಗತ್ಯವೂ ಇಲ್ಲ’ ಎಂದಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮೈಸೂರು:</strong> ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಎಲ್ಪಿಜಿ ವಾಣಿಜ್ಯ ಸಿಲಿಂಡರ್ಗಳ ಪೂರೈಕೆ ಬಂದ್ ಆಗಿದ್ದು, ಮದುವೆ ಸೇರಿ ಶುಭ ಸಮಾರಂಭಗಳಿಗೂ ತೊಂದರೆ ಎದುರಾಗಿದೆ. </p>.<p>ಯುದ್ಧದ ಕಾರಣಕ್ಕೆ ಏಕಾಏಕಿ ಸಿಲಿಂಡರ್ಗಳ ಪೂರೈಕೆಯೇ ನಿಂತುಹೋಗಿರುವುದರಿಂದ ದುಡ್ಡು ಕೊಟ್ಟರೂ ಸಿಲಿಂಡರ್ಗಳು ಸಿಗುತ್ತಿಲ್ಲ. ತಿಂಗಳುಗಳ ಮುಂಚೆಯೇ ಕಲ್ಯಾಣ ಮಂಟಪ, ಊಟೋಪಚಾರಕ್ಕೆ ಬೇಕಾದ ಎಲ್ಲ ವ್ಯವಸ್ಥೆಗಳನ್ನೂ ಕಾಯ್ದಿರಿಸಿಕೊಂಡು ನೆಮ್ಮದಿಯಿಂದ ಇದ್ದ ಕುಟುಂಬಗಳು, ಕಡೆಯ ಕ್ಷಣದಲ್ಲಿ ಪೇಚಿಗೆ ಸಿಲುಕಿವೆ. ‘ಹೇಗಾದರೂ ಮಾಡಿ ಸಿಲಿಂಡರ್ ಕೊಡಿ’ ಎಂದು ಗ್ಯಾಸ್ ಏಜೆನ್ಸಿಗಳ ಮಾಲೀಕರಿಗೆ ದುಂಬಾಲು ಬೀಳುತ್ತಿವೆ.</p>.<p>ಮೈಸೂರಿನಲ್ಲಿ ಬುಧವಾರವೂ ಇಂತಹ ಕಾರ್ಯಕ್ರಮಗಳಿಗೆ ಸಿಲಿಂಡರ್ಗಳ ಕೊರತೆ ಎದುರಾಗಿ, ಜನ ಗ್ಯಾಸ್ ಏಜೆನ್ಸಿ ಮುಂದೆ ನಿಂತಿದ್ದರು. ಅಧಿಕಾರಿಗಳು ಮಧ್ಯಪ್ರವೇಶಿಸಿ ತತ್ಕಾಲದ ವ್ಯವಸ್ಥೆ ಮಾಡಿಕೊಟ್ಟಿದ್ದಾರೆ. ದಾಸ್ತಾನು ಖಾಲಿಯಾಗಿರುವುದರಿಂದ ಜಿಲ್ಲಾಡಳಿತವೂ ಅಸಹಾಯಕವಾಗಿದೆ.</p>.<p>‘ಬುಧವಾರದಿಂದಲೇ ಜಿಲ್ಲೆಯಲ್ಲಿ ವಾಣಿಜ್ಯ ಸಿಲಿಂಡರ್ಗಳ ಪೂರೈಕೆ ಸ್ಥಗಿತಗೊಂಡಿದೆ. ಹೋಟೆಲ್, ಕಲ್ಯಾಣ ಮಂಟಪಗಳಿಗೂ ಪೂರೈಕೆ ಇಲ್ಲ. ಆಸ್ಪತ್ರೆ, ಹಾಸ್ಟೆಲ್ನಂತಹ ತುರ್ತು ಅಗತ್ಯಗಳಿಗಷ್ಟೇ ನೀಡಲಾಗುತ್ತಿದೆ. ದಾಸ್ತಾನು ಇಲ್ಲ ಎಂದು ಮೂರು ಕಂಪನಿಗಳು ಮಾಹಿತಿ ನೀಡಿವೆ’ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಜಂಟಿ ನಿರ್ದೇಶಕ ಮಂಟೇಸ್ವಾಮಿ ‘ಪ್ರಜಾವಾಣಿ’ಗೆ ತಿಳಿಸಿದರು.</p>.<p>ಗೃಹಬಳಕೆ ಸಿಲಿಂಡರ್ ಬಳಸುವಂತಿಲ್ಲ: ಗೃಹ ಬಳಕೆ ಸಿಲಿಂಡರ್ಗಳ ಪೂರೈಕೆ ಎಂದಿನಂತೆ ಇದ್ದು, ಕಡ್ಡಾಯವಾಗಿ ಮನೆಗಳಲ್ಲಷ್ಟೇ ಬಳಸಬೇಕು. ಹೋಟೆಲ್, ಕಲ್ಯಾಣ ಮಂಟಪ ಸೇರಿ ವಾಣಿಜ್ಯ ಉದ್ದೇಶಕ್ಕೆ ಬಳಸುವವರ ವಿರುದ್ಧ ಕ್ರಮಕ್ಕೆ ಜಿಲ್ಲಾಡಳಿತ ಮುಂದಾಗಿದೆ.</p>.<p>‘ಗೃಹ ಬಳಕೆ ಸಿಲಿಂಡರ್ಗಳ ಪೂರೈಕೆ ಹಾಗೂ ಬಳಕೆ ಮೇಲೆ ಆಹಾರ ಇಲಾಖೆ ಹಾಗೂ ಪೊಲೀಸರು ಕಣ್ಣಿಟ್ಟಿದ್ದಾರೆ. ಅಕ್ರಮ ಸಂಗ್ರಹ ಹಾಗೂ ಬಳಕೆ ಕಂಡರೆ ಕ್ರಮ ಕೈಗೊಳ್ಳಲಿದ್ದೇವೆ’ ಎನ್ನುತ್ತಾರೆ ಅಧಿಕಾರಿಗಳು.</p>.<p>ಸೌದೆ ಒಲೆ ಅನಿವಾರ್ಯ: ಸಿಲಿಂಡರ್ಗಳ ಕೊರತೆ ಬೆನ್ನಲ್ಲೇ ಶುಭ ಸಮಾರಂಭಗಳಿಗೆ ಸೌದೆ ಒಲೆಗಳ ಬಳಕೆಗೆ ಸಿದ್ಧತೆ ನಡೆದಿದೆ. ಗ್ರಾಮೀಣ ಭಾಗದಲ್ಲಿ ಸೌದೆ ಬಳಕೆ ರೂಢಿಯಲ್ಲಿದೆ. ಆದರೆ ನಗರದ ಕಲ್ಯಾಣ ಮಂಟಪಗಳಲ್ಲಿ, ಸ್ಟಾರ್ ಹೋಟೆಲ್ಗಳಲ್ಲಿ ಸೌದೆ ಒಲೆಗಳಿಲ್ಲ. ಬಳಕೆಗೆ ಬೇಕಾದ ಸೌಲಭ್ಯವೂ ಇಲ್ಲ. ದಟ್ಟೆ ಹೊಗೆ, ಸ್ವಚ್ಛತೆಯ ಸಮಸ್ಯೆಗಳಿವೆ. </p>.<div><blockquote>ಭಾನುವಾರ ಕಾರ್ಯಕ್ರಮವಿದ್ದು ದಿಢೀರ್ ಸಿಲಿಂಡರ್ ಕೊರತೆ ಬೇಸರ ಮೂಡಿಸಿದೆ. ಅನುಮತಿ ನೀಡಿದರೆ ಗೃಹ ಬಳಕೆ ಸಿಲಿಂಡರ್ ಬಳಸುತ್ತೇವೆ. ಸೌದೆ ಒಲೆಗೂ ಸಿದ್ಧತೆ ಮಾಡಿಕೊಂಡಿದ್ದೇವೆ</blockquote><span class="attribution">ಪ್ರಶಾಂತ್ ಮೈಸೂರು ನಿವಾಸಿ</span></div>.<div><blockquote>ಸದ್ಯ ಗೃಹಬಳಕೆ ಅಡುಗೆ ಅನಿಲ ಸಿಲಿಂಡರ್ಗಳ ಪೂರೈಕೆಯಲ್ಲಿ ಯಾವುದೇ ತೊಂದರೆ ಆಗಿಲ್ಲ. ಗ್ರಾಹಕರು ಆತಂಕಕ್ಕೆ ಒಳಗಾಗದೇ ಎಂದಿನಂತೆ ಅಗತ್ಯವಿದ್ದ ಸಂದರ್ಭದಲ್ಲಷ್ಟೇ ಖರೀದಿಸಬೇಕು</blockquote><span class="attribution">ಮಂಟೇಸ್ವಾಮಿ ಜಂಟಿ ನಿರ್ದೇಶಕ ಆಹಾರ ಇಲಾಖೆ</span></div>.<h2>ಕಾಳಸಂತೆಯಲ್ಲಿ ಮಾರಿದರೆ ಕ್ರಮ </h2>.<p>ಮೈಸೂರು: ಮಾರುಕಟ್ಟೆಯಲ್ಲಿ ಅಡುಗೆ ಅನಿಲ ಸಿಲಿಂಡರ್ಗೆ ಅಭಾವ ಸೃಷ್ಟಿಯಾಗುತ್ತಿದ್ದಂತೆಯೇ ಗೃಹ ಬಳಕೆಯ ಸಿಲಿಂಡರ್ಗಳನ್ನು ಹೆಚ್ಚಿನ ದರಕ್ಕೆ ಅಕ್ರಮವಾಗಿ ಮಾರಾಟ ಮಾಡುತ್ತಿರುವ ಆರೋಪ ಕೇಳಿಬಂದಿದೆ. ವಾಣಿಜ್ಯ ಬಳಕೆಯ ಸಿಲಿಂಡರ್ಗಳ ಪೂರೈಕೆ ಬಂದ್ ಆಗಿದ್ದು ಕೆಲವು ಸಣ್ಣ ಹೋಟೆಲ್ಗಳ ವರ್ತಕರು ಬೀದಿಬದಿ ತಿನಿಸುಗಳ ವ್ಯಾಪಾರಿಗಳು ವಾಮ ಮಾರ್ಗದ ಮೂಲಕ ಗೃಹ ಬಳಕೆಯ ಸಿಲಿಂಡರ್ ಖರೀದಿಸಲು ಮುಂದಾಗಿದ್ದಾರೆ. ಸದ್ಯ ಮಾರುಕಟ್ಟೆಯಲ್ಲಿ ಈ ಸಿಲಿಂಡರ್ನ ಬೆಲೆ ₹917 ಇದೆ. ಆದರೆ ಕಾಳಸಂತೆಯಲ್ಲಿ ₹1300–1500ವರೆಗೂ ಮಾರಾಟಕ್ಕೆ ಯತ್ನ ನಡೆದಿದೆ. ಕ್ರಮಕ್ಕೆ ಮುಂದಾದ ಜಿಲ್ಲಾಡಳಿತ: ಸಿಲಿಂಡರ್ಗಳ ಅಕ್ರಮ ದಾಸ್ತಾನು ಹಾಗೂ ಮಾರಾಟದ ಮೇಲೆ ಕಣ್ಣಿಟ್ಟಿರುವ ಜಿಲ್ಲಾಡಳಿತವು ಕಾಳಸಂತೆಯಲ್ಲಿ ಎಲ್ಪಿಜಿ ಮಾರಾಟ ತಡೆಗೆ ಕಟ್ಟುನಿಟ್ಟಿನ ಕ್ರಮಕ್ಕೆ ಮುಂದಾಗಿದೆ. ‘ ಜಿಲ್ಲೆಯಲ್ಲಿ 69 ಏಜೆನ್ಸಿಗಳಿದ್ದು ನಿತ್ಯ ಅವುಗಳಲ್ಲಿನ ಮಾರಾಟ ಮತ್ತು ಉಳಿಕೆ ದಾಸ್ತಾನು ಪರಿಶೀಲಿಸುತ್ತಿದ್ದೇವೆ. ಜಿಲ್ಲಾಧಿಕಾರಿ ಸಭೆ ನಡೆಸಿ ಸೂಚನೆ ನೀಡಿದ್ದಾರೆ. ಕಾಳಸಂತೆಯಲ್ಲಿ ಮಾರಾಟಕ್ಕೆ ಮುಂದಾದಲ್ಲಿ ಅಂತಹ ಸಿಲಿಂಡರ್ಗಳನ್ನು ಜಪ್ತಿ ಮಾಡಿ ಕಾನೂನು ಕ್ರಮ ಜರುಗಿಸುತ್ತೇವೆ’ ಎಂದು ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಜಂಟಿ ನಿರ್ದೇಶಕ ಮಂಟೇಸ್ವಾಮಿ ಎಚ್ಚರಿಸಿದರು.</p>.<h2>ಬಂಕ್ಗಳಲ್ಲಿ ಸರದಿ ಸಾಲು</h2>.<p> ಜನರು ಆತಂಕದಿಂದ ಪೆಟ್ರೋಲ್–ಡೀಸೆಲ್ ಖರೀದಿಗೆ ಮುಂದಾಗಿದ್ದು ಬಂಕ್ಗಳಲ್ಲಿ ವಾಹನಗಳ ಸಾಲು ಹೆಚ್ಚುತ್ತಿದೆ. ಬೆಲೆ ಏರಬಹುದು ಹಾಗೂ ಕೊರತೆ ಉಂಟಾಗಬಹುದು ಎನ್ನುವ ಆತಂಕದಿಂದ ಜನರು ತಮ್ಮ ವಾಹನಗಳಿಗೆ ಇಂಧನ ಭರ್ತಿ ಮಾಡಿಸಿಕೊಳ್ಳುತ್ತಿದ್ದಾರೆ. ಹುಣಸೂರು ರಸ್ತೆಯಲ್ಲಿರುವ ಇಂಡಿಯನ್ ಆಯಿಲ್ ಬಂಕ್ನಲ್ಲಿ ಬುಧವಾರ ದಾಸ್ತಾನು ಖಾಲಿ ಆಗಿದ್ದು ಗ್ರಾಹಕರು ವಾಪಸ್ ಆದರು. ಆಟೊ ಎಲ್ಪಿಜಿ ಸಿಎನ್ಜಿ ಮೊದಲಾದ ಮಾದರಿಯ ಇಂಧನ ಪೂರೈಕೆಯಲ್ಲೂ ವ್ಯತ್ಯಯ ಆಗಿದೆ. ಅಧಿಕಾರಿಗಳು ಈ ಬಗ್ಗೆ ಸ್ಪಷ್ಟನೆ ನೀಡಿದ್ದು ‘ ಪೆಟ್ರೋಲ್–ಡೀಸೆಲ್ ಪೂರೈಕೆಯಲ್ಲಿ ಯಾವುದೇ ಸಮಸ್ಯೆಯಾಗಿಲ್ಲ. ಈ ಬಗ್ಗೆ ಆತಂಕ ಪಡುವ ಅಗತ್ಯವೂ ಇಲ್ಲ’ ಎಂದಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>