<p><strong>ಮೈಸೂರು</strong>: ‘ವಾಣಿಜ್ಯ ಬಳಕೆಯ ಎಲ್ಪಿಜಿ ಸಿಲಿಂಡರ್ ದರವನ್ನು ಭಾರಿ ಪ್ರಮಾಣದಲ್ಲಿ ಏರಿಸುವ ಮೂಲಕ ಕೇಂದ್ರ ಸರ್ಕಾರವು ಜನಸಾಮಾನ್ಯರ ಮೇಲೆ ಬರೆ ಎಳೆದಿದೆ’ ಎಂದು ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ ವಾಗ್ದಾಳಿ ನಡೆಸಿದರು.</p><p>‘ಒಮ್ಮೆಲೇ ₹ 993 ಜಾಸ್ತಿ ಮಾಡಲಾಗಿದೆ. ಜನವರಿ 1ರಿಂದ ಈವರೆಗೆ 5 ಬಾರಿ ಬೆಲೆ ಏರಿಸಲಾಗಿದೆ. ಈಗ ವಾಣಿಜ್ಯ ಸಿಲಿಂಡರ್ ಬೆಲೆ ₹ 3,155 ತಲುಪಿದ್ದು, ಜೊತೆಗೆ ಶೇ 18ರಷ್ಟು ತೆರಿಗೆಯನ್ನೂ ಪಾವತಿಸಬೇಕಾಗಿದೆ’ ಎಂದು ಇಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.</p><p>‘ಯುದ್ಧದ ನೆಪವೊಡ್ಡಿ ಅಡುಗೆ ಅನಿಲ ಸಿಲಿಂಡರ್ ಅಭಾವ ಸೃಷ್ಟಿಸಲಾಯಿತು. ಈ ನಡುವೆ, 5 ಕೆ.ಜಿ. ಎಲ್ಪಿಜಿ ಸಿಲಿಂಡರ್ ಬಿಡಲಾಯಿತು. ಅದರ ಬೆಲೆಯನ್ನೂ ₹ 240 ಹೆಚ್ಚಿಸಿದ್ದಾರೆ. ನಾಲ್ಕು ರಾಜ್ಯಗಳು ಮತ್ತು ಒಂದು ಕೇಂದ್ರಾಡಳಿತ ಪ್ರದೇಶದ ವಿಧಾನಸಭಾ ಚುನಾವಣೆ ಫಲಿತಾಂಶ ಹೊರಬಿದ್ದ ಮೇಲೆ ಪೆಟ್ರೋಲ್, ಡೀಸೆಲ್, ಅಡುಗೆ ಅನಿಲ ಸಿಲಿಂಡರ್ ಬೆಲೆಯನ್ನೂ ಜಾಸ್ತಿ ಮಾಡುತ್ತಾರೆ. ಜನರು ಇನ್ನಷ್ಟು ಸಂಕಷ್ಟ ಎದುರಿಸಬೇಕಾಗುತ್ತದೆ’ ಎಂದು ಕಳವಳ ವ್ಯಕ್ತಪಡಿಸಿದರು.</p><p>‘ವಿಮಾನಗಳಿಗೆ ಬಳಸುವ ಇಂಧನದ ಬೆಲೆಯೂ ಜಾಸ್ತಿಯಾಗಿದೆ. ದೇಶದಿಂದ ಡೀಸೆಲ್, ಪೆಟ್ರೋಲ್ ಮೊದಲಾದವುಗಳನ್ನು (ರಿಫೈನ್ಡ್) ರಫ್ತು ಮಾಡಲಾಗುವ ಬೆಲೆಯನ್ನು ಲೀಟರ್ಗೆ ₹23 ಇಳಿಸಿದ್ದಾರೆ. ಆದರೆ, ದೇಶದ ಜನರಿಗೆ ಹೊರೆ ಹೊರಿಸುತ್ತಿದ್ದಾರೆ. ಭಾರತೀಯರೇನು ಕರ್ಮ ಮಾಡಿದ್ದಾರೆ?. ಪ್ರಧಾನಿ ನರೇಂದ್ರ ಮೋದಿ ಅವರು ಜನರಿಗೆ ಕೊಟ್ಟಿರುವ ‘ಚುನಾವಣಾ ಬಿಲ್’ ಇದಾಗಿದೆ’ ಎಂದು ಆರೋಪಿಸಿದರು.</p><p>‘ಪಶ್ಚಿಮ ಏಷ್ಯಾ ಸಂಘರ್ಷದಿಂದ ಯುದ್ಧದಿಂದಾಗಿ ನಿಜವಾಗಿಯೂ ಕೇಂದ್ರ ಸರ್ಕಾರಕ್ಕೆ ನಷ್ಟ ಆಗುತ್ತಿದೆಯೇ? 19 ಕೆ.ಜಿ. ವಾಣಿಜ್ಯ ಅನಿಲ ಸಿಲಿಂಡರ್ ಉತ್ಪಾದನೆಗೆ ₹ 2,370 ಆಗುತ್ತದೆ. ಆದರೆ, ಮಾರುತ್ತಿರುವುದು ₹ 3,155ಕ್ಕೆ. ಅಂದರೆ, ₹ 785 ಲಾಭವಿದೆ. ಇದನ್ನೇಕೆ ಕೇಂದ್ರ ನಷ್ಟ ಎನ್ನುತ್ತಿದೆ? ಲಾಭದಲ್ಲಿ ಕಡಿಮೆ ಆಗಿದೆಯಷ್ಟೆ. ಆದರೆ, ಜನರನ್ನು ದಿಕ್ಕು ತಪ್ಪಿಸುವ ಕೆಲಸವನ್ನು ಮಾಡುತ್ತಿದೆ’ ಎಂದು ವಾಗ್ದಾಳಿ ನಡೆಸಿದರು.</p><p>‘ಬಡವರ ರಕ್ತ ಹೀರುವ ಕೆಲಸವನ್ನು ಕೇಂದ್ರ ಮಾಡುತ್ತಿದ್ದರೂ, ಜನರು ದಂಗೆ ಏಳುತ್ತಿಲ್ಲವೇಕೆ? ಹೋಟೆಲ್ ಉದ್ಯಮಿಗಳಲ್ಲಿ ಬಹುತೇಕರು ಕಠಿಣವಾದ ಹೇಳಿಕೆ ನೀಡುತ್ತಿಲ್ಲವೇಕೆ? ಬೆಲೆ ಏರಿಕೆಯ ಹೊರೆಯನ್ನು ವರ್ಗಾಯಿಸುವ ಸಾಧ್ಯತೆ ಇರುವುದರಿಂದ, ಅಂತಿಮವಾಗಿ ಜನಸಾಮಾನ್ಯರು ತೊಂದರೆ ಅನುಭವಿಸಬೇಕಾಗುತ್ತದೆ’ ಎಂದು ತಿಳಿಸಿದರು.</p><p>‘ದೇಶದಲ್ಲಿ 35 ಲಕ್ಷ ನೋಂದಾಯಿತ ಹೋಟೆಲ್ಗಳಿವೆ. ಇವುಗಳಲ್ಲಿ 9 ಕೋಟಿ ಮಂದಿ ಕಾರ್ಮಿಕರು ಕೆಲಸ ಮಾಡುತ್ತಿದ್ದಾರೆ. ಇವುಗಳಲ್ಲಿ ಬಹಳಷ್ಟು ಹೋಟೆಲ್ಗಳು ಮುಚ್ಚುತ್ತಿವೆ. ಅವುಗಳನ್ನೇ ನಂಬಿಕೊಂಡಿದ್ದವರು ಅತಂತ್ರವಾಗಿದ್ದಾರೆ. ಇದು ಕೇಂದ್ರದ ಕೊಡುಗೆಯಾಗಿದೆ’ ಎಂದು ದೂರಿದರು.</p><p>‘ಯುಪಿಎ ಸರ್ಕಾರ ಇದ್ದಾಗ ಕೆಲವೇ ರೂಪಾಯಿ ಬೆಲೆ ಏರಿಕೆಯಾದರೆ ಬೀದಿಗಿಳಿದು ಪ್ರತಿಭಟಿಸುತ್ತಿದ್ದ ಬಿಜೆಪಿಯ ನಾಯಕರು ಈಗ ಏನು ಮಾಡುತ್ತಿದ್ದಾರೆ? ಈಗೇಕೆ ದನಿ ಎತ್ತುತ್ತಿಲ್ಲ?’ ಎಂದು ಕೇಳಿದರು.</p><p>ಕಾಂಗ್ರೆಸ್ ನಗರ ಜಿಲ್ಲಾ ಸಮಿತಿಯ ಅಧ್ಯಕ್ಷ ಆರ್.ಮೂರ್ತಿ, ಪ್ರಧಾನ ಕಾರ್ಯದರ್ಶಿ ಎಂ.ಶಿವಣ್ಣ, ವಕ್ತಾರ ಕೆ.ಮಹೇಶ್ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮೈಸೂರು</strong>: ‘ವಾಣಿಜ್ಯ ಬಳಕೆಯ ಎಲ್ಪಿಜಿ ಸಿಲಿಂಡರ್ ದರವನ್ನು ಭಾರಿ ಪ್ರಮಾಣದಲ್ಲಿ ಏರಿಸುವ ಮೂಲಕ ಕೇಂದ್ರ ಸರ್ಕಾರವು ಜನಸಾಮಾನ್ಯರ ಮೇಲೆ ಬರೆ ಎಳೆದಿದೆ’ ಎಂದು ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ ವಾಗ್ದಾಳಿ ನಡೆಸಿದರು.</p><p>‘ಒಮ್ಮೆಲೇ ₹ 993 ಜಾಸ್ತಿ ಮಾಡಲಾಗಿದೆ. ಜನವರಿ 1ರಿಂದ ಈವರೆಗೆ 5 ಬಾರಿ ಬೆಲೆ ಏರಿಸಲಾಗಿದೆ. ಈಗ ವಾಣಿಜ್ಯ ಸಿಲಿಂಡರ್ ಬೆಲೆ ₹ 3,155 ತಲುಪಿದ್ದು, ಜೊತೆಗೆ ಶೇ 18ರಷ್ಟು ತೆರಿಗೆಯನ್ನೂ ಪಾವತಿಸಬೇಕಾಗಿದೆ’ ಎಂದು ಇಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.</p><p>‘ಯುದ್ಧದ ನೆಪವೊಡ್ಡಿ ಅಡುಗೆ ಅನಿಲ ಸಿಲಿಂಡರ್ ಅಭಾವ ಸೃಷ್ಟಿಸಲಾಯಿತು. ಈ ನಡುವೆ, 5 ಕೆ.ಜಿ. ಎಲ್ಪಿಜಿ ಸಿಲಿಂಡರ್ ಬಿಡಲಾಯಿತು. ಅದರ ಬೆಲೆಯನ್ನೂ ₹ 240 ಹೆಚ್ಚಿಸಿದ್ದಾರೆ. ನಾಲ್ಕು ರಾಜ್ಯಗಳು ಮತ್ತು ಒಂದು ಕೇಂದ್ರಾಡಳಿತ ಪ್ರದೇಶದ ವಿಧಾನಸಭಾ ಚುನಾವಣೆ ಫಲಿತಾಂಶ ಹೊರಬಿದ್ದ ಮೇಲೆ ಪೆಟ್ರೋಲ್, ಡೀಸೆಲ್, ಅಡುಗೆ ಅನಿಲ ಸಿಲಿಂಡರ್ ಬೆಲೆಯನ್ನೂ ಜಾಸ್ತಿ ಮಾಡುತ್ತಾರೆ. ಜನರು ಇನ್ನಷ್ಟು ಸಂಕಷ್ಟ ಎದುರಿಸಬೇಕಾಗುತ್ತದೆ’ ಎಂದು ಕಳವಳ ವ್ಯಕ್ತಪಡಿಸಿದರು.</p><p>‘ವಿಮಾನಗಳಿಗೆ ಬಳಸುವ ಇಂಧನದ ಬೆಲೆಯೂ ಜಾಸ್ತಿಯಾಗಿದೆ. ದೇಶದಿಂದ ಡೀಸೆಲ್, ಪೆಟ್ರೋಲ್ ಮೊದಲಾದವುಗಳನ್ನು (ರಿಫೈನ್ಡ್) ರಫ್ತು ಮಾಡಲಾಗುವ ಬೆಲೆಯನ್ನು ಲೀಟರ್ಗೆ ₹23 ಇಳಿಸಿದ್ದಾರೆ. ಆದರೆ, ದೇಶದ ಜನರಿಗೆ ಹೊರೆ ಹೊರಿಸುತ್ತಿದ್ದಾರೆ. ಭಾರತೀಯರೇನು ಕರ್ಮ ಮಾಡಿದ್ದಾರೆ?. ಪ್ರಧಾನಿ ನರೇಂದ್ರ ಮೋದಿ ಅವರು ಜನರಿಗೆ ಕೊಟ್ಟಿರುವ ‘ಚುನಾವಣಾ ಬಿಲ್’ ಇದಾಗಿದೆ’ ಎಂದು ಆರೋಪಿಸಿದರು.</p><p>‘ಪಶ್ಚಿಮ ಏಷ್ಯಾ ಸಂಘರ್ಷದಿಂದ ಯುದ್ಧದಿಂದಾಗಿ ನಿಜವಾಗಿಯೂ ಕೇಂದ್ರ ಸರ್ಕಾರಕ್ಕೆ ನಷ್ಟ ಆಗುತ್ತಿದೆಯೇ? 19 ಕೆ.ಜಿ. ವಾಣಿಜ್ಯ ಅನಿಲ ಸಿಲಿಂಡರ್ ಉತ್ಪಾದನೆಗೆ ₹ 2,370 ಆಗುತ್ತದೆ. ಆದರೆ, ಮಾರುತ್ತಿರುವುದು ₹ 3,155ಕ್ಕೆ. ಅಂದರೆ, ₹ 785 ಲಾಭವಿದೆ. ಇದನ್ನೇಕೆ ಕೇಂದ್ರ ನಷ್ಟ ಎನ್ನುತ್ತಿದೆ? ಲಾಭದಲ್ಲಿ ಕಡಿಮೆ ಆಗಿದೆಯಷ್ಟೆ. ಆದರೆ, ಜನರನ್ನು ದಿಕ್ಕು ತಪ್ಪಿಸುವ ಕೆಲಸವನ್ನು ಮಾಡುತ್ತಿದೆ’ ಎಂದು ವಾಗ್ದಾಳಿ ನಡೆಸಿದರು.</p><p>‘ಬಡವರ ರಕ್ತ ಹೀರುವ ಕೆಲಸವನ್ನು ಕೇಂದ್ರ ಮಾಡುತ್ತಿದ್ದರೂ, ಜನರು ದಂಗೆ ಏಳುತ್ತಿಲ್ಲವೇಕೆ? ಹೋಟೆಲ್ ಉದ್ಯಮಿಗಳಲ್ಲಿ ಬಹುತೇಕರು ಕಠಿಣವಾದ ಹೇಳಿಕೆ ನೀಡುತ್ತಿಲ್ಲವೇಕೆ? ಬೆಲೆ ಏರಿಕೆಯ ಹೊರೆಯನ್ನು ವರ್ಗಾಯಿಸುವ ಸಾಧ್ಯತೆ ಇರುವುದರಿಂದ, ಅಂತಿಮವಾಗಿ ಜನಸಾಮಾನ್ಯರು ತೊಂದರೆ ಅನುಭವಿಸಬೇಕಾಗುತ್ತದೆ’ ಎಂದು ತಿಳಿಸಿದರು.</p><p>‘ದೇಶದಲ್ಲಿ 35 ಲಕ್ಷ ನೋಂದಾಯಿತ ಹೋಟೆಲ್ಗಳಿವೆ. ಇವುಗಳಲ್ಲಿ 9 ಕೋಟಿ ಮಂದಿ ಕಾರ್ಮಿಕರು ಕೆಲಸ ಮಾಡುತ್ತಿದ್ದಾರೆ. ಇವುಗಳಲ್ಲಿ ಬಹಳಷ್ಟು ಹೋಟೆಲ್ಗಳು ಮುಚ್ಚುತ್ತಿವೆ. ಅವುಗಳನ್ನೇ ನಂಬಿಕೊಂಡಿದ್ದವರು ಅತಂತ್ರವಾಗಿದ್ದಾರೆ. ಇದು ಕೇಂದ್ರದ ಕೊಡುಗೆಯಾಗಿದೆ’ ಎಂದು ದೂರಿದರು.</p><p>‘ಯುಪಿಎ ಸರ್ಕಾರ ಇದ್ದಾಗ ಕೆಲವೇ ರೂಪಾಯಿ ಬೆಲೆ ಏರಿಕೆಯಾದರೆ ಬೀದಿಗಿಳಿದು ಪ್ರತಿಭಟಿಸುತ್ತಿದ್ದ ಬಿಜೆಪಿಯ ನಾಯಕರು ಈಗ ಏನು ಮಾಡುತ್ತಿದ್ದಾರೆ? ಈಗೇಕೆ ದನಿ ಎತ್ತುತ್ತಿಲ್ಲ?’ ಎಂದು ಕೇಳಿದರು.</p><p>ಕಾಂಗ್ರೆಸ್ ನಗರ ಜಿಲ್ಲಾ ಸಮಿತಿಯ ಅಧ್ಯಕ್ಷ ಆರ್.ಮೂರ್ತಿ, ಪ್ರಧಾನ ಕಾರ್ಯದರ್ಶಿ ಎಂ.ಶಿವಣ್ಣ, ವಕ್ತಾರ ಕೆ.ಮಹೇಶ್ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>