<p><strong>ಮೈಸೂರು:</strong> ಸ್ವಸ್ತಿ ಪ್ರಕಾಶನವು ಲೇಖಕ ಡಿ.ಕೆ.ಶ್ರೀನಿವಾಸನ್ ಅವರ ‘ಬಾಳ ಸಂಜೆಯಲ್ಲಿ ಬದುಕಿಗೊಂದು ಅರ್ಥ’ ಕೃತಿ ಬಿಡುಗಡೆ ಸಮಾರಂಭವನ್ನು ಮಾರ್ಚ್ 12ರಂದು ಬೆಳಿಗ್ಗೆ 10.30ಕ್ಕೆ ಇಲ್ಲಿನ ಸಿದ್ಧಾರ್ಥನಗರದ ವಿನಯ ಮಾರ್ಗದ ಬೃಂದಾವನ ಮಹಲ್ ಆವರಣದಲ್ಲಿ ಆಯೋಜಿಸಿದೆ.</p>.<p>‘ಇಸ್ರೆಲ್ ಹೈಫಾ ವಿಶ್ವವಿದ್ಯಾಲಯ ಪ್ರಾಧ್ಯಾಪಕ ಡೇವಿಡ್ ಗುಟ್ ಮನ್ ಅವರ ಮೂಲ ಇಂಗ್ಲಿಷ್ ಕೃತಿಯನ್ನು ಡಿ.ಕೆ.ಶ್ರೀನಿವಾಸನ್ ಕನ್ನಡಕ್ಕೆ ಅನುವಾದಿಸಿದ್ದಾರೆ. ಇದನ್ನು ಹಿರಿಯ ಅನುವಾದಕ ಪ್ರಧಾನ ಗುರುದತ್ತ ಬಿಡುಗಡೆ ಮಾಡುವರು. ಲೇಖಕರಾದ ಓ.ಎಲ್.ನಾಗಭೂಷಣ ಸ್ವಾಮಿ, ಜಿ..ಎಸ್.ಜಯದೇವ್, ಕೃಷ್ಣಮೂರ್ತಿ ಹನೂರು, ಪ್ರೊ.ಕೆ.ಕಿರಣಕುಮಾರ್ ಹಾಗೂ ಡಾ.ಎಚ್.ಎಲ್.ಚಂದ್ರಶೇಖರ್ ಕೃತಿ ಕುರಿತು ಮಾತನಾಡುವರು. ಪ್ರೊ.ಶಿವಾಜಿ ಜೋಯಿಸ್ ಎಸ್. ಉಪಸ್ಥಿತರಿರುವರು’ ಎಂದು ಲೇಖಕ ಗಣೇಶ ಅಮೀನಗಡ ಇಲ್ಲಿ ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.</p>.<p>‘ಹಿರಿಯರ ಸಂಕಟ, ಸಮಸ್ಯೆ ಹಾಗೂ ಸವಾಲುಗಳ ಕುರಿತ ಈ ಕೃತಿಯನ್ನು ಎರಡು ವರ್ಷಗಳಿಂದ ಅನುವಾದಿಸಿರುವೆ. ಹಿರಿಯರ ನೆಮ್ಮದಿಯ ಬದುಕಿಗೆ ಇದು ನೆರವಾಗಲಿದೆ’ ಎಂದು ಡಿ.ಕೆ.ಶ್ರೀನಿವಾಸನ್ ಹೇಳಿದರು.</p>.<p>ವಯಸ್ಕರ ಶಿಕ್ಷಣ ಇಲಾಖೆಯ ನಿವೃತ್ತ ಉದ್ಯೋಗಿ ವಿಶ್ವನಾಥ್ ಗುಪ್ತಾ, ನಿವೃತ್ತ ಪ್ರಾಂಶುಪಾಲರಾದ ಶಾಂತಮ್ಮ ಹಾಗೂ ಕಮಲೇಶ್ ಹಾಜರಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮೈಸೂರು:</strong> ಸ್ವಸ್ತಿ ಪ್ರಕಾಶನವು ಲೇಖಕ ಡಿ.ಕೆ.ಶ್ರೀನಿವಾಸನ್ ಅವರ ‘ಬಾಳ ಸಂಜೆಯಲ್ಲಿ ಬದುಕಿಗೊಂದು ಅರ್ಥ’ ಕೃತಿ ಬಿಡುಗಡೆ ಸಮಾರಂಭವನ್ನು ಮಾರ್ಚ್ 12ರಂದು ಬೆಳಿಗ್ಗೆ 10.30ಕ್ಕೆ ಇಲ್ಲಿನ ಸಿದ್ಧಾರ್ಥನಗರದ ವಿನಯ ಮಾರ್ಗದ ಬೃಂದಾವನ ಮಹಲ್ ಆವರಣದಲ್ಲಿ ಆಯೋಜಿಸಿದೆ.</p>.<p>‘ಇಸ್ರೆಲ್ ಹೈಫಾ ವಿಶ್ವವಿದ್ಯಾಲಯ ಪ್ರಾಧ್ಯಾಪಕ ಡೇವಿಡ್ ಗುಟ್ ಮನ್ ಅವರ ಮೂಲ ಇಂಗ್ಲಿಷ್ ಕೃತಿಯನ್ನು ಡಿ.ಕೆ.ಶ್ರೀನಿವಾಸನ್ ಕನ್ನಡಕ್ಕೆ ಅನುವಾದಿಸಿದ್ದಾರೆ. ಇದನ್ನು ಹಿರಿಯ ಅನುವಾದಕ ಪ್ರಧಾನ ಗುರುದತ್ತ ಬಿಡುಗಡೆ ಮಾಡುವರು. ಲೇಖಕರಾದ ಓ.ಎಲ್.ನಾಗಭೂಷಣ ಸ್ವಾಮಿ, ಜಿ..ಎಸ್.ಜಯದೇವ್, ಕೃಷ್ಣಮೂರ್ತಿ ಹನೂರು, ಪ್ರೊ.ಕೆ.ಕಿರಣಕುಮಾರ್ ಹಾಗೂ ಡಾ.ಎಚ್.ಎಲ್.ಚಂದ್ರಶೇಖರ್ ಕೃತಿ ಕುರಿತು ಮಾತನಾಡುವರು. ಪ್ರೊ.ಶಿವಾಜಿ ಜೋಯಿಸ್ ಎಸ್. ಉಪಸ್ಥಿತರಿರುವರು’ ಎಂದು ಲೇಖಕ ಗಣೇಶ ಅಮೀನಗಡ ಇಲ್ಲಿ ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.</p>.<p>‘ಹಿರಿಯರ ಸಂಕಟ, ಸಮಸ್ಯೆ ಹಾಗೂ ಸವಾಲುಗಳ ಕುರಿತ ಈ ಕೃತಿಯನ್ನು ಎರಡು ವರ್ಷಗಳಿಂದ ಅನುವಾದಿಸಿರುವೆ. ಹಿರಿಯರ ನೆಮ್ಮದಿಯ ಬದುಕಿಗೆ ಇದು ನೆರವಾಗಲಿದೆ’ ಎಂದು ಡಿ.ಕೆ.ಶ್ರೀನಿವಾಸನ್ ಹೇಳಿದರು.</p>.<p>ವಯಸ್ಕರ ಶಿಕ್ಷಣ ಇಲಾಖೆಯ ನಿವೃತ್ತ ಉದ್ಯೋಗಿ ವಿಶ್ವನಾಥ್ ಗುಪ್ತಾ, ನಿವೃತ್ತ ಪ್ರಾಂಶುಪಾಲರಾದ ಶಾಂತಮ್ಮ ಹಾಗೂ ಕಮಲೇಶ್ ಹಾಜರಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>