‘ಮಹಿಳೆ ಅಪಾರ ಶಕ್ತಿ ಹೊಂದಿದ್ದಾಳೆ. ಈ ದೇಶದ ಮಣ್ಣಿನ ಸಂಸ್ಕೃತಿ ಉಳಿಸಿಕೊಂಡು ಹೋಗುವ ಜವಾಬ್ದಾರಿ ಅವರ ಮೇಲಿದೆ. ಸನಾತನ ಧರ್ಮ, ಪರಂಪರೆ ಉಳಿಸುವ ನಿಟ್ಟಿನಲ್ಲಿ ಮಕ್ಕಳನ್ನು ಸಶಕ್ತರಾಗಿ, ಶಿಕ್ಷಣವಂತರಾಗಿ ಸಜ್ಜುಗೊಳಿಸಬೇಕು. ಕುಟುಂಬ ಪ್ರಜ್ಞೆ ಮೂಡಿಸಬೇಕು. ಅವರಲ್ಲಿ ಜ್ಞಾನ, ಬಾಂಧವ್ಯವೇ ಇಲ್ಲ. ಹಣದ ಮೌಲ್ಯವೇ ಜಾಸ್ತಿಯಾಗಿದ್ದು, ಕೇವಲ ಕೆಲಸ ಹಾಗೂ ಹಣದ ಮುಂದೆ ಓಡುತ್ತಿದ್ದಾರೆ’ ಎಂದು ಬೇಸರ ವ್ಯಕ್ತಪಡಿಸಿದರು.