<p>ಹುಣಸೂರು (ಮೈಸೂರು ಜಿಲ್ಲೆ): ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಅಳಿವಿನಂಚಿನ ವಿವಿಧ ಪ್ರಭೇದದ 23 ರಣಹದ್ದುಗಳು ಪತ್ತೆಯಾಗಿವೆ. </p>.<p>‘ಐಯುಸಿಎನ್’ ಕೆಂಪುಪಟ್ಟಿಯಲ್ಲಿರುವ ಬಿಳಿ ಗರಿಯ ರಣಹದ್ದು (ವೈಟ್ ರಂಪ್ಡ್ ವಲ್ಚರ್), ಕೆಂಪು ತಲೆಯ ರಣಹದ್ದು, ನೀಳಕೊಕ್ಕಿನ ರಣಹದ್ದು (ಇಂಡಿಯನ್ ವಲ್ಚರ್) ಮತ್ತು ಈಜಿಪ್ಟ್ ತಳಿಯ ರಣಹದ್ದುಗಳು ಫೆಬ್ರುವರಿಯಲ್ಲಿ ನಡೆದ ಗಣತಿಯಲ್ಲಿ ಕಾಣಿಸಿಕೊಂಡಿವೆ. </p>.<p>8 ವೀಕ್ಷಣಾ ಗೋಪುರಗಳಲ್ಲಿ ಕಂಡ ಬಿಳಿ ಗರಿಯ 11, ನೀಳಕೊಕ್ಕಿನ 2 ಮತ್ತು ಕೆಂಪು ತಲೆಯ 7, ಭಾರತದ 2 ಮತ್ತು ಈಜಿಪ್ಟ್ನ 1 ಹದ್ದು ಕಾಣಿಸಿದೆ. </p>.<p>‘ದೇಶದಲ್ಲಿ 9 ಜಾತಿ ರಣಹದ್ದುಗಳಿವೆ. ರಾಮನಗರದ ರಾಮದೇವರಬೆಟ್ಟದ ರಣಹದ್ದು ಪಕ್ಷಿಧಾಮದಲ್ಲಿ ಅತಿ ಹೆಚ್ಚು, ಅಂದರೆ 65 ಇವೆ. ಹುಲಿ ಸಂರಕ್ಷಣೆ ಯೋಜನೆಗಳ ಪ್ರಭಾವದಿಂದ ನಾಗರಹೊಳೆಯಲ್ಲೂ ಅವುಗಳ ಸಂತತಿ ಹೆಚ್ಚಿದೆ’ ಎನ್ನುತ್ತಾರೆ ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶದ ಎಸಿಎಫ್ ಲಕ್ಷ್ಮಿಕಾಂತ್.</p>.<p>ತಮಿಳುನಾಡಿನ ಮುದುಮಲೈ, ಸತ್ಯಮಂಗಲ ಅರಣ್ಯ ಪ್ರದೇಶ, ರಾಜ್ಯದ ಬಿಳಿಗಿರಿ ರಂಗಯ್ಯನಬೆಟ್ಟ, ಬಂಡಿಪುರ, ನಾಗರಹೊಳೆ, ರಾಮನಗರ ಸೇರಿ ವಿವಿಧೆಡೆ 213 ರಣಹದ್ದುಗಳಿದ್ದು, ಆ ಪೈಕಿ ರಾಜ್ಯದಲ್ಲಿ 117 ಇವೆ.</p>.<p>‘ಅಧ್ಯಯನಕ್ಕಾಗಿ ಮಧ್ಯ ಭಾರತದ ಅರಣ್ಯ ಪ್ರದೇಶದಲ್ಲಿ ರಣಹದ್ದಿಗೆ ರೇಡಿಯೊ ಕಾಲರ್ ಅಳವಡಿಸಲಾಗುತ್ತದೆ. ರಣಹದ್ದುಗಳು ದಿನಕ್ಕೆ ಸುಮಾರು 300 ಕಿ.ಮೀವರೆಗೆ ಚಲಿಸುತ್ತವೆ. 6 ಗಂಟೆಯಿಂದ 8 ಗಂಟೆ ಹಾರಾಟ ನಡೆಸುತ್ತವೆ’ ಎಂದು ವನ್ಯಜೀವಿ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.</p>.<p>‘ಹುಲಿ, ಆನೆ ಗಣತಿಯಂತೆ ಹದ್ದುಗಳ ಗಣತಿ ಸುಲಭವಲ್ಲ. ಅಟ್ಟಣಿಗೆ ಮೇಲೆ ಕುಳಿತು ಎತ್ತರ ಪ್ರದೇಶದಲ್ಲಿ ಹದ್ದುಗಳನ್ನು ಗುರುತಿಸಿ ದಾಖಲಿಸುತ್ತೇವೆ’ ಎನ್ನುತ್ತಾರೆ ಅಧಿಕಾರಿಗಳು.</p>.<div><blockquote>ರಣಹದ್ದು ಸಂತತಿ ಹೆಚ್ಚಾಗಲು ಪೂರಕ ವಾತಾವರಣ ನಾಗರಹೊಳೆಯಲ್ಲಿದೆ. ಗಣತಿಯಲ್ಲಿ ಎರಡು ಗೂಡುಗಳಲ್ಲಿ ಮರಿ ಹಾಗೂ ಮೊಟ್ಟೆಗಳು ಕಂಡುಬಂದಿವೆ </blockquote><span class="attribution">ಸೀಮಾ ಡಿಸಿಎಫ್ ನಾಗರಹೊಳೆ</span></div>.<h2>‘ಔಷಧ ನಿಷೇಧ: ಸಂತತಿ ಹೆಚ್ಚಳ’</h2>.<p> ‘ಅರಣ್ಯದಂಚಿನಲ್ಲಿ ರೋಗಗ್ರಸ್ತ ಜಾನುವಾರುಗಳ ಚಿಕಿತ್ಸೆಗೆ ಡೈಕ್ಲೋಫಿನಾಕ್ ಸೋಡಿಯಂ ಔಷಧ ಬಳಸಲಾಗುತ್ತಿತ್ತು. ಅದರ ಅಂಶ ಪ್ರಾಣಿ ಸತ್ತ ನಂತರವೂ ಕಳೇಬರದಲ್ಲಿ ಉಳಿಯುತ್ತಿತ್ತು. ದೇಹ ತಿನ್ನುತ್ತಿದ್ದ ರಣಹದ್ದುಗಳು ಸಾಯುತ್ತಿದ್ದವು. ಈಗ ಔಷಧವನ್ನು ದೇಶದಲ್ಲಿ ನಿಷೇಧಿಸಿದ್ದು ಅವುಗಳ ಸಂತತಿ ಉಳಿಯಲು ಸಹಕಾರಿಯಾಗಿದೆ’ ಎಂದು ಎಸಿಎಫ್ ಲಕ್ಷ್ಮಿಕಾಂತ್ ‘ಪ್ರಜಾವಾಣಿ’ಗೆ ತಿಳಿಸಿದರು. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಹುಣಸೂರು (ಮೈಸೂರು ಜಿಲ್ಲೆ): ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಅಳಿವಿನಂಚಿನ ವಿವಿಧ ಪ್ರಭೇದದ 23 ರಣಹದ್ದುಗಳು ಪತ್ತೆಯಾಗಿವೆ. </p>.<p>‘ಐಯುಸಿಎನ್’ ಕೆಂಪುಪಟ್ಟಿಯಲ್ಲಿರುವ ಬಿಳಿ ಗರಿಯ ರಣಹದ್ದು (ವೈಟ್ ರಂಪ್ಡ್ ವಲ್ಚರ್), ಕೆಂಪು ತಲೆಯ ರಣಹದ್ದು, ನೀಳಕೊಕ್ಕಿನ ರಣಹದ್ದು (ಇಂಡಿಯನ್ ವಲ್ಚರ್) ಮತ್ತು ಈಜಿಪ್ಟ್ ತಳಿಯ ರಣಹದ್ದುಗಳು ಫೆಬ್ರುವರಿಯಲ್ಲಿ ನಡೆದ ಗಣತಿಯಲ್ಲಿ ಕಾಣಿಸಿಕೊಂಡಿವೆ. </p>.<p>8 ವೀಕ್ಷಣಾ ಗೋಪುರಗಳಲ್ಲಿ ಕಂಡ ಬಿಳಿ ಗರಿಯ 11, ನೀಳಕೊಕ್ಕಿನ 2 ಮತ್ತು ಕೆಂಪು ತಲೆಯ 7, ಭಾರತದ 2 ಮತ್ತು ಈಜಿಪ್ಟ್ನ 1 ಹದ್ದು ಕಾಣಿಸಿದೆ. </p>.<p>‘ದೇಶದಲ್ಲಿ 9 ಜಾತಿ ರಣಹದ್ದುಗಳಿವೆ. ರಾಮನಗರದ ರಾಮದೇವರಬೆಟ್ಟದ ರಣಹದ್ದು ಪಕ್ಷಿಧಾಮದಲ್ಲಿ ಅತಿ ಹೆಚ್ಚು, ಅಂದರೆ 65 ಇವೆ. ಹುಲಿ ಸಂರಕ್ಷಣೆ ಯೋಜನೆಗಳ ಪ್ರಭಾವದಿಂದ ನಾಗರಹೊಳೆಯಲ್ಲೂ ಅವುಗಳ ಸಂತತಿ ಹೆಚ್ಚಿದೆ’ ಎನ್ನುತ್ತಾರೆ ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶದ ಎಸಿಎಫ್ ಲಕ್ಷ್ಮಿಕಾಂತ್.</p>.<p>ತಮಿಳುನಾಡಿನ ಮುದುಮಲೈ, ಸತ್ಯಮಂಗಲ ಅರಣ್ಯ ಪ್ರದೇಶ, ರಾಜ್ಯದ ಬಿಳಿಗಿರಿ ರಂಗಯ್ಯನಬೆಟ್ಟ, ಬಂಡಿಪುರ, ನಾಗರಹೊಳೆ, ರಾಮನಗರ ಸೇರಿ ವಿವಿಧೆಡೆ 213 ರಣಹದ್ದುಗಳಿದ್ದು, ಆ ಪೈಕಿ ರಾಜ್ಯದಲ್ಲಿ 117 ಇವೆ.</p>.<p>‘ಅಧ್ಯಯನಕ್ಕಾಗಿ ಮಧ್ಯ ಭಾರತದ ಅರಣ್ಯ ಪ್ರದೇಶದಲ್ಲಿ ರಣಹದ್ದಿಗೆ ರೇಡಿಯೊ ಕಾಲರ್ ಅಳವಡಿಸಲಾಗುತ್ತದೆ. ರಣಹದ್ದುಗಳು ದಿನಕ್ಕೆ ಸುಮಾರು 300 ಕಿ.ಮೀವರೆಗೆ ಚಲಿಸುತ್ತವೆ. 6 ಗಂಟೆಯಿಂದ 8 ಗಂಟೆ ಹಾರಾಟ ನಡೆಸುತ್ತವೆ’ ಎಂದು ವನ್ಯಜೀವಿ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.</p>.<p>‘ಹುಲಿ, ಆನೆ ಗಣತಿಯಂತೆ ಹದ್ದುಗಳ ಗಣತಿ ಸುಲಭವಲ್ಲ. ಅಟ್ಟಣಿಗೆ ಮೇಲೆ ಕುಳಿತು ಎತ್ತರ ಪ್ರದೇಶದಲ್ಲಿ ಹದ್ದುಗಳನ್ನು ಗುರುತಿಸಿ ದಾಖಲಿಸುತ್ತೇವೆ’ ಎನ್ನುತ್ತಾರೆ ಅಧಿಕಾರಿಗಳು.</p>.<div><blockquote>ರಣಹದ್ದು ಸಂತತಿ ಹೆಚ್ಚಾಗಲು ಪೂರಕ ವಾತಾವರಣ ನಾಗರಹೊಳೆಯಲ್ಲಿದೆ. ಗಣತಿಯಲ್ಲಿ ಎರಡು ಗೂಡುಗಳಲ್ಲಿ ಮರಿ ಹಾಗೂ ಮೊಟ್ಟೆಗಳು ಕಂಡುಬಂದಿವೆ </blockquote><span class="attribution">ಸೀಮಾ ಡಿಸಿಎಫ್ ನಾಗರಹೊಳೆ</span></div>.<h2>‘ಔಷಧ ನಿಷೇಧ: ಸಂತತಿ ಹೆಚ್ಚಳ’</h2>.<p> ‘ಅರಣ್ಯದಂಚಿನಲ್ಲಿ ರೋಗಗ್ರಸ್ತ ಜಾನುವಾರುಗಳ ಚಿಕಿತ್ಸೆಗೆ ಡೈಕ್ಲೋಫಿನಾಕ್ ಸೋಡಿಯಂ ಔಷಧ ಬಳಸಲಾಗುತ್ತಿತ್ತು. ಅದರ ಅಂಶ ಪ್ರಾಣಿ ಸತ್ತ ನಂತರವೂ ಕಳೇಬರದಲ್ಲಿ ಉಳಿಯುತ್ತಿತ್ತು. ದೇಹ ತಿನ್ನುತ್ತಿದ್ದ ರಣಹದ್ದುಗಳು ಸಾಯುತ್ತಿದ್ದವು. ಈಗ ಔಷಧವನ್ನು ದೇಶದಲ್ಲಿ ನಿಷೇಧಿಸಿದ್ದು ಅವುಗಳ ಸಂತತಿ ಉಳಿಯಲು ಸಹಕಾರಿಯಾಗಿದೆ’ ಎಂದು ಎಸಿಎಫ್ ಲಕ್ಷ್ಮಿಕಾಂತ್ ‘ಪ್ರಜಾವಾಣಿ’ಗೆ ತಿಳಿಸಿದರು. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>