<blockquote>‘ಕಾರ್ಯಕರ್ತರ ಅಭಿಪ್ರಾಯ ಪಡೆದು ಮುಂದಿನ ನಿರ್ಧಾರ’ | ‘ಪೌತಿಖಾತೆ ಮಾಡದೇ ತೊಂದರೆ ಕೊಡಬೇಡಿ’ | ‘ಮುಂದಿನ ಚುನಾವಣೆಯಲ್ಲಿ ಗೆಲ್ಲಿಸುವ ಜವಾಬ್ದಾರಿ ನಮ್ಮದು’</blockquote>.<p><strong>ಜಯಪುರ:</strong> ‘ಚಾಮುಂಡೇಶ್ವರಿ ವಿಧಾನ ಕ್ಷೇತ್ರದಿಂದ 2028ರ ಚುನಾವಣೆಯನ್ನು ಜೆಡಿಎಸ್ ಪಕ್ಷದಿಂದಲೇ ಸ್ಪರ್ಧಿಸುವೆ, ನಾನು ಜೆಡಿಎಸ್ ಪಕ್ಷ ಬಿಡುವ ಮಾತೇ ಇಲ್ಲ’ ಎಂದು ಶಾಸಕ ಜಿ.ಟಿ. ದೇವೇಗೌಡ ಹೇಳಿದರು.</p>.<p>ತಾಲ್ಲೂಕಿನ ಜಯಪುರ ಗ್ರಾಮದ ಮಲೆಯಋಷಿ ಕೋಣಪ್ಪಸ್ವಾಮಿ ದೇವಾಲಯ ಹತ್ತಿರ ₹2.64 ಕೋಟಿ ವೆಚ್ಚದ ಜಯಪುರದಿಂದ ಬರಡನಪುರ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ರಸ್ತೆ, ಮತ್ತು ಜಯಪುರ ಗ್ರಾಮದಲ್ಲಿ ಚರಂಡಿ, ರಸ್ತೆ ನಿರ್ಮಾಣ ಕಾಮಗಾರಿಗೆ ಸೋಮವಾರ ಭೂಮಿಪೂಜೆ ನೆರವೇರಿಸಿ ಅವರು ಮಾತನಾಡಿದರು.</p>.<p>‘ನಮ್ಮ ಪಕ್ಷದ ವರಿಷ್ಠರು ನನಗೆ ಟಿಕೆಟ್ ನೀಡದೇ ಇದ್ದಾಗ ಕ್ಷೇತ್ರದ ಮತದಾರರು ತೆಗೆದುಕೊಳ್ಳುವ ತೀರ್ಮಾನಕ್ಕೆ ಬದ್ಧನಾಗಿದ್ದೇನೆ. ಕ್ಷೇತ್ರದ ಮತದಾರರು ನನಗೆ ಚುನಾವಣೆಗೆ ಅರ್ಜಿ ಹಾಕಿ ಅಂದರೆ ಹಾಕುತ್ತೇನೆ ಎಂದು ಹೇಳಿ ನೆರೆದಿದ್ದ ಕಾರ್ಯಕರ್ತರನ್ನು ಏನ್ರಪ್ಪ ನಿಮ್ ಅಭಿಪ್ರಾಯ’ ಎಂದರು.</p>.<p>ಶಾಸಕರ ಮಾತಿಗೆ ಧ್ವನಿಗೂಡಿಸಿದ ಕಾರ್ಯಕರ್ತರು ‘ಅರ್ಜಿ ಹಾಕಲೇಬೇಕು, ಮುಂದಿನ ಚುನಾವಣೆಯಲ್ಲಿ ನಿಮ್ಮನ್ನು ಗೆಲ್ಲಿಸುವ ಜವಾಬ್ದಾರಿ ನಮ್ಮದು’ ಎಂದರು.</p>.<p>‘ಮುಂದಿನ ಚುನಾವಣೆಯಲ್ಲಿ ನಾನು ಸ್ಪರ್ಧಿಸುವ ವಿಚಾರವನ್ನು ಕ್ಷೇತ್ರದ ಕಾರ್ಯಕರ್ತರಿಗೆ ಬಿಡುತ್ತೇನೆ. ಮುಂದಿನ ದಿನಗಳಲ್ಲಿ ಕ್ಷೇತ್ರದ ಜನರ ಸಭೆ ಕರೆದು ನಿಲ್ಲಬೇಕೋ ಅಥವಾ ಬೇಡವೋ ಎಂದು ನಿಮ್ಮನ್ನು ನಾನು ಕೇಳುತ್ತೇನೆ. ನೀವು ನಿಲ್ಲಿ ಅಂದ್ರೆ ನಿಲ್ತೇನೆ. ಬೇಡ ಅಂದ್ರೆ ಬಿಡ್ತೇನೆ. ಕ್ಷೇತ್ರದ ಜನರ ತೀರ್ಮಾನವೇ ಅಂತಿಮ’ ಎಂದರು.</p>.<p>ಸಮಾಜ ಸೇವಕ ಹಾಗೂ ಉದ್ಯಮಿ ಎಸ್. ಶ್ರೀಕಾಂತ್, ಮುಖಂಡರಾದ ದಾರಿಪುರ ಬಸವಣ್ಣ, ಬರಡನಪುರ ಬಸವಣ್ಣ, ಮರಿಸಿದ್ದೇಗೌಡ, ಲಾಯರ್ ತಿಮ್ಮೇಗೌಡ, ಎಂ.ನಾಗರಾಜು, ಮೂಗನಾಯಕ ಸೇರಿದಂತೆ ಅಧಿಕಾರಿಗಳು, ಗ್ರಾಮಸ್ಥರು ಭಾಗವಹಿಸಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<blockquote>‘ಕಾರ್ಯಕರ್ತರ ಅಭಿಪ್ರಾಯ ಪಡೆದು ಮುಂದಿನ ನಿರ್ಧಾರ’ | ‘ಪೌತಿಖಾತೆ ಮಾಡದೇ ತೊಂದರೆ ಕೊಡಬೇಡಿ’ | ‘ಮುಂದಿನ ಚುನಾವಣೆಯಲ್ಲಿ ಗೆಲ್ಲಿಸುವ ಜವಾಬ್ದಾರಿ ನಮ್ಮದು’</blockquote>.<p><strong>ಜಯಪುರ:</strong> ‘ಚಾಮುಂಡೇಶ್ವರಿ ವಿಧಾನ ಕ್ಷೇತ್ರದಿಂದ 2028ರ ಚುನಾವಣೆಯನ್ನು ಜೆಡಿಎಸ್ ಪಕ್ಷದಿಂದಲೇ ಸ್ಪರ್ಧಿಸುವೆ, ನಾನು ಜೆಡಿಎಸ್ ಪಕ್ಷ ಬಿಡುವ ಮಾತೇ ಇಲ್ಲ’ ಎಂದು ಶಾಸಕ ಜಿ.ಟಿ. ದೇವೇಗೌಡ ಹೇಳಿದರು.</p>.<p>ತಾಲ್ಲೂಕಿನ ಜಯಪುರ ಗ್ರಾಮದ ಮಲೆಯಋಷಿ ಕೋಣಪ್ಪಸ್ವಾಮಿ ದೇವಾಲಯ ಹತ್ತಿರ ₹2.64 ಕೋಟಿ ವೆಚ್ಚದ ಜಯಪುರದಿಂದ ಬರಡನಪುರ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ರಸ್ತೆ, ಮತ್ತು ಜಯಪುರ ಗ್ರಾಮದಲ್ಲಿ ಚರಂಡಿ, ರಸ್ತೆ ನಿರ್ಮಾಣ ಕಾಮಗಾರಿಗೆ ಸೋಮವಾರ ಭೂಮಿಪೂಜೆ ನೆರವೇರಿಸಿ ಅವರು ಮಾತನಾಡಿದರು.</p>.<p>‘ನಮ್ಮ ಪಕ್ಷದ ವರಿಷ್ಠರು ನನಗೆ ಟಿಕೆಟ್ ನೀಡದೇ ಇದ್ದಾಗ ಕ್ಷೇತ್ರದ ಮತದಾರರು ತೆಗೆದುಕೊಳ್ಳುವ ತೀರ್ಮಾನಕ್ಕೆ ಬದ್ಧನಾಗಿದ್ದೇನೆ. ಕ್ಷೇತ್ರದ ಮತದಾರರು ನನಗೆ ಚುನಾವಣೆಗೆ ಅರ್ಜಿ ಹಾಕಿ ಅಂದರೆ ಹಾಕುತ್ತೇನೆ ಎಂದು ಹೇಳಿ ನೆರೆದಿದ್ದ ಕಾರ್ಯಕರ್ತರನ್ನು ಏನ್ರಪ್ಪ ನಿಮ್ ಅಭಿಪ್ರಾಯ’ ಎಂದರು.</p>.<p>ಶಾಸಕರ ಮಾತಿಗೆ ಧ್ವನಿಗೂಡಿಸಿದ ಕಾರ್ಯಕರ್ತರು ‘ಅರ್ಜಿ ಹಾಕಲೇಬೇಕು, ಮುಂದಿನ ಚುನಾವಣೆಯಲ್ಲಿ ನಿಮ್ಮನ್ನು ಗೆಲ್ಲಿಸುವ ಜವಾಬ್ದಾರಿ ನಮ್ಮದು’ ಎಂದರು.</p>.<p>‘ಮುಂದಿನ ಚುನಾವಣೆಯಲ್ಲಿ ನಾನು ಸ್ಪರ್ಧಿಸುವ ವಿಚಾರವನ್ನು ಕ್ಷೇತ್ರದ ಕಾರ್ಯಕರ್ತರಿಗೆ ಬಿಡುತ್ತೇನೆ. ಮುಂದಿನ ದಿನಗಳಲ್ಲಿ ಕ್ಷೇತ್ರದ ಜನರ ಸಭೆ ಕರೆದು ನಿಲ್ಲಬೇಕೋ ಅಥವಾ ಬೇಡವೋ ಎಂದು ನಿಮ್ಮನ್ನು ನಾನು ಕೇಳುತ್ತೇನೆ. ನೀವು ನಿಲ್ಲಿ ಅಂದ್ರೆ ನಿಲ್ತೇನೆ. ಬೇಡ ಅಂದ್ರೆ ಬಿಡ್ತೇನೆ. ಕ್ಷೇತ್ರದ ಜನರ ತೀರ್ಮಾನವೇ ಅಂತಿಮ’ ಎಂದರು.</p>.<p>ಸಮಾಜ ಸೇವಕ ಹಾಗೂ ಉದ್ಯಮಿ ಎಸ್. ಶ್ರೀಕಾಂತ್, ಮುಖಂಡರಾದ ದಾರಿಪುರ ಬಸವಣ್ಣ, ಬರಡನಪುರ ಬಸವಣ್ಣ, ಮರಿಸಿದ್ದೇಗೌಡ, ಲಾಯರ್ ತಿಮ್ಮೇಗೌಡ, ಎಂ.ನಾಗರಾಜು, ಮೂಗನಾಯಕ ಸೇರಿದಂತೆ ಅಧಿಕಾರಿಗಳು, ಗ್ರಾಮಸ್ಥರು ಭಾಗವಹಿಸಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>