<p><strong>ಹಂಪಾಪುರ:</strong> ಕಾಯಿ ಕಚ್ಚುತ್ತಿದ್ದ ಮಾವಿನ ಮರಗಳಿಗೆ ಕೆಲ ದಿನಗಳ ಹಿಂದೆ ಸುರಿದ ಆಲಿಕಲ್ಲು ಸಹಿತ ಮಳೆಯು ಶಾಪವಾಗಿ ಕಾಡಿದೆ. ಇನ್ನೂ ಕಾಯಿ ಕಚ್ಚದ ಹೂವಿಗೆ ಇಬ್ಬನಿ ಮುಳುವಾಗಿದೆ.</p>.<p>ಹೆಚ್ಚು ಹೂ ಬಿಟ್ಟು ರೈತರಿಗೆ ಉತ್ತಮ ಇಳುವರಿಯ ಮುನ್ಸೂಚನೆ ನೀಡಿದ್ದ ಮಾವಿನ ಮರಗಳು ಸಂತಸ ಮೂಡಿಸಿದ್ದವು. ಆದರೆ, ತಾಲ್ಲೂಕಿನಲ್ಲಿ ಸುರಿದ ಧಾರಾಕಾರ ಮಳೆ, ಆಲಿಕಲ್ಲು ಇಳುವರಿಗೆ ತೀವ್ರ ಹೊಡೆತ ನೀಡಿವೆ.</p>.<p>ಹವಾಮಾನ ಏರಿಳಿತದಿಂದಲೂ ಕಾಯಿಯಾಗದೇ ಉಳಿದಿದ್ದ ಮಾವಿನ ಹೂವುಗಳು ಉದುರಿದ್ದು, ಇಬ್ಬನಿಯು ಇದಕ್ಕೆ ಕಾರಣವಾಗಿದೆ. ಸಾಮಾನ್ಯವಾಗಿ ಎಲ್ಲ ಹೂವುಗಳು ಕಾಯಿ ಬಿಡುವುದಿಲ್ಲ. ಶೇ 25ರಿಂದ 30ರಷ್ಟು ಉದುರುತ್ತವೆ. ಆದರೇ, ಈ ಬಾರಿ ಶೇ 90ರಷ್ಟು ಉದುರುವ ಸಾಧ್ಯತೆ ಇದೆ ಎನ್ನುತ್ತಾರೆ ರೈತರು.</p>.<p>ಕಳೆದ ನಾಲೈದು ವರ್ಷಗಳಿಂದ ಮಾವಿನ ತೋಟಗಳು ಕಡಿಮೆಯಾಗುತ್ತಿದ್ದು, ಅವುಗಳ ಜಾಗದಲ್ಲಿ ಅಡಿಕೆ ಸ್ಥಾನ ಪಡೆದುಕೊಂಡಿದೆ. ಮಾವು ಉಳಿಸಿಕೊಂಡು ಪೋಷಿಸುತ್ತಿರುವ ರೈತರಿಗೆ, ಹವಾಮಾನ ವೈಪರೀತ್ಯವು ಮಾವಿನ ಸಹವಾಸವೇ ಬೇಡ ಎನ್ನುವಂತೆ ಮಾಡುತ್ತಿದೆ. ಸಮರ್ಪಕ ಪರಿಹಾರವೂ ಸಿಗುವುದಿಲ್ಲ ಎಂದು ಬೆಳಗನಹಳ್ಳಿ ಗ್ರಾಮದ ರೈತ ಉಮೇಶ್ ಬೇಸರಿಸಿದರು.</p>.<p>‘ತಾಲ್ಲೂಕಿನಲ್ಲಿ 480 ಹೆಕ್ಟೇರ್ ಪ್ರದೇಶದಲ್ಲಿ ಮಾವು ಬೆಳೆ ಇದೆ. ಪ್ರಮುಖವಾಗಿ ಹಂಪಾಪುರ ಭಾಗದ ಕಣಿಯನಹುಂಡಿ ಮತ್ತು ಬೆಟ್ಟದಬೀಡು ಗ್ರಾಮಗಳಲ್ಲಿ ಮಾವು ಹೆಚ್ಚಾಗಿ ಕಂಡುಬರುತ್ತದೆ. ಇಬ್ಬನಿಯಿಂದಾಗಿ ಹೂವಿಗೆ ಸ್ವಲ್ಪ ಮಟ್ಟಿಗೆ ಹಾನಿಯಾಗಿರಬಹುದು. ಸಕಾಲದಲ್ಲಿ ರಾಸಾಯನಿಕ ಸಿಂಪರಣೆ ಮಾಡಲು ತಿಳಿಸಲಾಗಿತ್ತು. ಸಮರ್ಪಕವಾಗಿ ಸಿಂಪರಣೆ ಮಾಡದವರು ಹಾಗೂ ಬೇರೆಯವರಿಗೆ ತೋಟ ನಿರ್ವಹಣೆ ಮಾಡಲು ನೀಡಿದ್ದಲ್ಲಿ ಸಮಸ್ಯೆ ಉದ್ಭವಿಸಿದೆ’ ಎಂದು ತೋಟಗಾರಿಕಾ ಇಲಾಖೆ ಸಹಾಯಕ ನಿರ್ದೇಶಕಿ ನೇತ್ರಾವತಿ ಹೇಳಿದರು.</p>.<p>‘ಮಾವು ಬೆಳೆಗೂ ವಿಮೆ ಸೌಲಭ್ಯವಿದ್ದು, ಹವಾಮಾನ ಆಧಾರಿತ ವಿಮೆ ಪರಿಹಾರ ನಿರ್ಧರಿಸಲಾಗುತ್ತದೆ. ಜೂನ್ ಮತ್ತು ಜುಲೈ ತಿಂಗಳಲ್ಲಿ ಫಸಲ್ ಭೀಮಾ ಯೋಜನೆಯಡಿ ಹತ್ತಿರದ ಬ್ಯಾಂಕ್ ಅಥವಾ ಗ್ರಾಮ್ ಒನ್ ಕೇಂದ್ರಗಳಲ್ಲಿ ವಿಮೆಯನ್ನು ರೈತರು ಮಾಡಿಸಬಹುದಾಗಿದೆ’ ಎಂದರು.</p>.<div><blockquote>ಕಳೆದ 10 ವರ್ಷಗಳಲ್ಲಿ ಮಾವು ಬೆಳೆಯಲ್ಲಿ ಈ ಸಮಸ್ಯೆ ಕಂಡಿರಲಿಲ್ಲ, ಸರ್ಕಾರದಿಂದ ವಿಶೇಷ ಪ್ಯಾಕೇಜ್ ನೀಡಿ ಸೂಕ್ತ ಪರಿಹಾರ ದೊರಕಿಸಲು ತೋಟಗಾರಿಕೆ ಇಲಾಖೆ ಶ್ರಮವಹಿಸಬೇಕು </blockquote><span class="attribution">ದಿಲೀಪ್, ಬೆಳಗನಹಳ್ಳಿ ರೈತ</span></div>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಹಂಪಾಪುರ:</strong> ಕಾಯಿ ಕಚ್ಚುತ್ತಿದ್ದ ಮಾವಿನ ಮರಗಳಿಗೆ ಕೆಲ ದಿನಗಳ ಹಿಂದೆ ಸುರಿದ ಆಲಿಕಲ್ಲು ಸಹಿತ ಮಳೆಯು ಶಾಪವಾಗಿ ಕಾಡಿದೆ. ಇನ್ನೂ ಕಾಯಿ ಕಚ್ಚದ ಹೂವಿಗೆ ಇಬ್ಬನಿ ಮುಳುವಾಗಿದೆ.</p>.<p>ಹೆಚ್ಚು ಹೂ ಬಿಟ್ಟು ರೈತರಿಗೆ ಉತ್ತಮ ಇಳುವರಿಯ ಮುನ್ಸೂಚನೆ ನೀಡಿದ್ದ ಮಾವಿನ ಮರಗಳು ಸಂತಸ ಮೂಡಿಸಿದ್ದವು. ಆದರೆ, ತಾಲ್ಲೂಕಿನಲ್ಲಿ ಸುರಿದ ಧಾರಾಕಾರ ಮಳೆ, ಆಲಿಕಲ್ಲು ಇಳುವರಿಗೆ ತೀವ್ರ ಹೊಡೆತ ನೀಡಿವೆ.</p>.<p>ಹವಾಮಾನ ಏರಿಳಿತದಿಂದಲೂ ಕಾಯಿಯಾಗದೇ ಉಳಿದಿದ್ದ ಮಾವಿನ ಹೂವುಗಳು ಉದುರಿದ್ದು, ಇಬ್ಬನಿಯು ಇದಕ್ಕೆ ಕಾರಣವಾಗಿದೆ. ಸಾಮಾನ್ಯವಾಗಿ ಎಲ್ಲ ಹೂವುಗಳು ಕಾಯಿ ಬಿಡುವುದಿಲ್ಲ. ಶೇ 25ರಿಂದ 30ರಷ್ಟು ಉದುರುತ್ತವೆ. ಆದರೇ, ಈ ಬಾರಿ ಶೇ 90ರಷ್ಟು ಉದುರುವ ಸಾಧ್ಯತೆ ಇದೆ ಎನ್ನುತ್ತಾರೆ ರೈತರು.</p>.<p>ಕಳೆದ ನಾಲೈದು ವರ್ಷಗಳಿಂದ ಮಾವಿನ ತೋಟಗಳು ಕಡಿಮೆಯಾಗುತ್ತಿದ್ದು, ಅವುಗಳ ಜಾಗದಲ್ಲಿ ಅಡಿಕೆ ಸ್ಥಾನ ಪಡೆದುಕೊಂಡಿದೆ. ಮಾವು ಉಳಿಸಿಕೊಂಡು ಪೋಷಿಸುತ್ತಿರುವ ರೈತರಿಗೆ, ಹವಾಮಾನ ವೈಪರೀತ್ಯವು ಮಾವಿನ ಸಹವಾಸವೇ ಬೇಡ ಎನ್ನುವಂತೆ ಮಾಡುತ್ತಿದೆ. ಸಮರ್ಪಕ ಪರಿಹಾರವೂ ಸಿಗುವುದಿಲ್ಲ ಎಂದು ಬೆಳಗನಹಳ್ಳಿ ಗ್ರಾಮದ ರೈತ ಉಮೇಶ್ ಬೇಸರಿಸಿದರು.</p>.<p>‘ತಾಲ್ಲೂಕಿನಲ್ಲಿ 480 ಹೆಕ್ಟೇರ್ ಪ್ರದೇಶದಲ್ಲಿ ಮಾವು ಬೆಳೆ ಇದೆ. ಪ್ರಮುಖವಾಗಿ ಹಂಪಾಪುರ ಭಾಗದ ಕಣಿಯನಹುಂಡಿ ಮತ್ತು ಬೆಟ್ಟದಬೀಡು ಗ್ರಾಮಗಳಲ್ಲಿ ಮಾವು ಹೆಚ್ಚಾಗಿ ಕಂಡುಬರುತ್ತದೆ. ಇಬ್ಬನಿಯಿಂದಾಗಿ ಹೂವಿಗೆ ಸ್ವಲ್ಪ ಮಟ್ಟಿಗೆ ಹಾನಿಯಾಗಿರಬಹುದು. ಸಕಾಲದಲ್ಲಿ ರಾಸಾಯನಿಕ ಸಿಂಪರಣೆ ಮಾಡಲು ತಿಳಿಸಲಾಗಿತ್ತು. ಸಮರ್ಪಕವಾಗಿ ಸಿಂಪರಣೆ ಮಾಡದವರು ಹಾಗೂ ಬೇರೆಯವರಿಗೆ ತೋಟ ನಿರ್ವಹಣೆ ಮಾಡಲು ನೀಡಿದ್ದಲ್ಲಿ ಸಮಸ್ಯೆ ಉದ್ಭವಿಸಿದೆ’ ಎಂದು ತೋಟಗಾರಿಕಾ ಇಲಾಖೆ ಸಹಾಯಕ ನಿರ್ದೇಶಕಿ ನೇತ್ರಾವತಿ ಹೇಳಿದರು.</p>.<p>‘ಮಾವು ಬೆಳೆಗೂ ವಿಮೆ ಸೌಲಭ್ಯವಿದ್ದು, ಹವಾಮಾನ ಆಧಾರಿತ ವಿಮೆ ಪರಿಹಾರ ನಿರ್ಧರಿಸಲಾಗುತ್ತದೆ. ಜೂನ್ ಮತ್ತು ಜುಲೈ ತಿಂಗಳಲ್ಲಿ ಫಸಲ್ ಭೀಮಾ ಯೋಜನೆಯಡಿ ಹತ್ತಿರದ ಬ್ಯಾಂಕ್ ಅಥವಾ ಗ್ರಾಮ್ ಒನ್ ಕೇಂದ್ರಗಳಲ್ಲಿ ವಿಮೆಯನ್ನು ರೈತರು ಮಾಡಿಸಬಹುದಾಗಿದೆ’ ಎಂದರು.</p>.<div><blockquote>ಕಳೆದ 10 ವರ್ಷಗಳಲ್ಲಿ ಮಾವು ಬೆಳೆಯಲ್ಲಿ ಈ ಸಮಸ್ಯೆ ಕಂಡಿರಲಿಲ್ಲ, ಸರ್ಕಾರದಿಂದ ವಿಶೇಷ ಪ್ಯಾಕೇಜ್ ನೀಡಿ ಸೂಕ್ತ ಪರಿಹಾರ ದೊರಕಿಸಲು ತೋಟಗಾರಿಕೆ ಇಲಾಖೆ ಶ್ರಮವಹಿಸಬೇಕು </blockquote><span class="attribution">ದಿಲೀಪ್, ಬೆಳಗನಹಳ್ಳಿ ರೈತ</span></div>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>