<p><strong>ಎಚ್.ಡಿ.ಕೋಟೆ:</strong> ಆದಿವಾಸಿಗಳ ಅಭಿವೃದ್ಧಿ, ಶಿಕ್ಷಣ, ಅವರ ಪಾರಂಪರಿಕ ಹಕ್ಕುಗಳ ರಕ್ಷಣೆ ಜೊತೆಗೆ ರೈತರ ಪರವಾಗಿಯೂ ಪೀಪಲ್ ಟ್ರೀ ಸಂಸ್ಥೆಯು ಕೆಲಸ ಮಾಡುತ್ತಿರುವುದು ಶ್ಲಾಘನೀಯ ಎಂದು ಶಾಸಕ ಅನಿಲ್ ಚಿಕ್ಕಮಾದು ಮೆಚ್ಚುಗೆ ವ್ಯಕ್ತಪಡಿಸಿದರು.</p>.<p>ಪಟ್ಟಣದಲ್ಲಿ ಸಂಸ್ಥೆ ಆಯೋಜಿಸಿದ್ದ ಹವಾಮಾನ ಬದಲಾವಣೆ ನಿಭಾಯಿಸಲು ಒಗ್ಗೂಡುವಿಕೆ, ‘ತಾಲ್ಲೂಕು ವಾರ್ಷಿಕೋತ್ಸವ’ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.</p>.<p>ಇತ್ತೀಚಿಗೆ ನಮ್ಮ ತಾಲೂಕಿನ ರೈತರು ರಾಗಿ, ಭತ್ತ, ಜೋಳ ಬದಲಿಗೆ ಶುಂಠಿ ಬೆಳೆ ಮೊರೆ ಹೋಗಿದ್ದಾರೆ. ಆದಷ್ಟು ರೈತರು ಸಾವಯವ ಗೊಬ್ಬರ ಬಳಸಿ ಕೃಷಿ ಮಾಡಿ, ಮಣ್ಣಿನ ಫಲವತ್ತತೆ ಕಾಪಾಡಬೇಕು ಎಂದುರೈತರಿಗೆ ಸಲಹೆ ನೀಡಿದರು.</p>.<p>ಪೀಪಲ್ ಟ್ರೀ ಸಂಸ್ಥೆ ನೀಡಿರುವ ಮನವಿ ಪತ್ರ ಕುರಿತು ಪ್ರತಿಕ್ರಿಯಿಸಿದ ಶಾಸಕರು, ತಾಲೂಕಿನಲ್ಲಿ ನಾಲ್ಕು ಡ್ಯಾಮ್ಗಳಿದ್ದು, ಅವುಗಳ ಮೂಲಕ ಕೆರೆಗಳಿಗೆ ನೀರು ತುಂಬಿಸುವ ಯೋಜನೆಯನ್ನು ಕೈಗೆತ್ತಿಕೊಳ್ಳಲಾಗಿದೆ ಎಂದು ಹೇಳಿದರು.</p>.<p>ಪತ್ರಕರ್ತ ಮಹೇಶ್ ಮಾತನಾಡಿ, ಎನ್ಜಿಒಗಳು ಕೂಡ ತಾಲೂಕು ಅಭಿವೃದ್ಧಿಗೆ ಕೋಟಿಗಟ್ಟಲೆ ಹಣ ಖರ್ಚು ಮಾಡುತ್ತಿವೆ. ರಾಜಕೀಯ ಹೊರತುಪಡಿಸಿ ನೋಡಿದ್ರೆ ಶಾಸಕರು ತಾಲೂಕಿನ ಅಭಿವೃದ್ಧಿಗೆ ಶ್ರಮಿಸುತ್ತಿದ್ದಾರೆ ಎಂದು ಹೇಳಿದರು.</p>.<p>ಸಂಶೋಧಕ ಚೆನ್ನರಾಜು ಮಾತನಾಡಿ, ಬದಲಾಗುತ್ತಿರುವ ಈ ಸನ್ನಿವೇಶದಲ್ಲಿ ಹವಾಮಾನದ ಬದಲಾವಣೆ ಜನ ಜಾನುವಾರು ಮತ್ತು ಜೀವ ಸಂಕುಲಗಳ ಮೇಲೆ ಅತ್ಯಂತ ಕೆಟ್ಟ ಪರಿಣಾಮ ಬೀರುತ್ತಿದ್ದು, ನ ಆರೋಗ್ಯದ ಮೇಲೆ ತುಂಬಾ ದುಷ್ಪರಿಣಾಮ ಬೀರುತ್ತಿದೆ. ಹವಾಮಾನವನ್ನ ಕಾಪಾಡಿಕೊಳ್ಳುವ ಪ್ರಯತ್ನ ಮಾಡಬೇಕು ಎಂದು ತಿಳಿಸಿದರು.</p>.<p>ತಹಶಿಲ್ದಾರ್ ಶ್ರೀನಿವಾಸ್, ಬಿಕೆಎಸ್ ವಿಜಯ ಕುಮಾರ್, ಸುದೀಪ್, ನಾಗರಾಜ್, ಮಹೇಶ್, ಚೆನ್ನರಾಜ್, ಗುರುಸ್ವಾಮಿ, ಮರಿಲಿಂಗಣ್ಣ, ಲಿಂಗರಾಜ್, ಪ್ರಕಾಶ್, ರಾಜಹುಣಸೂರು, ಸಣ್ಣಸ್ವಾಮಿನಾಯಕ, ಮಂಜು, ಇಂದ್ರಮ್ಮ, ರೇಖಾ, ವಿಜಿಯಮ್ಮ, ಜವರೇಗೌಡ, ಸುರೇಶ್, ಚೆನ್ನಬಸಪ್ಪ, ರೀನಾ, ಫಣೀಶ್, ಶಿವಮ್ಮ, ಉಪಸ್ಥಿತರಿದ್ದರು.</p>.<p><em>ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ</em><br />260524-38-2047732180</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಎಚ್.ಡಿ.ಕೋಟೆ:</strong> ಆದಿವಾಸಿಗಳ ಅಭಿವೃದ್ಧಿ, ಶಿಕ್ಷಣ, ಅವರ ಪಾರಂಪರಿಕ ಹಕ್ಕುಗಳ ರಕ್ಷಣೆ ಜೊತೆಗೆ ರೈತರ ಪರವಾಗಿಯೂ ಪೀಪಲ್ ಟ್ರೀ ಸಂಸ್ಥೆಯು ಕೆಲಸ ಮಾಡುತ್ತಿರುವುದು ಶ್ಲಾಘನೀಯ ಎಂದು ಶಾಸಕ ಅನಿಲ್ ಚಿಕ್ಕಮಾದು ಮೆಚ್ಚುಗೆ ವ್ಯಕ್ತಪಡಿಸಿದರು.</p>.<p>ಪಟ್ಟಣದಲ್ಲಿ ಸಂಸ್ಥೆ ಆಯೋಜಿಸಿದ್ದ ಹವಾಮಾನ ಬದಲಾವಣೆ ನಿಭಾಯಿಸಲು ಒಗ್ಗೂಡುವಿಕೆ, ‘ತಾಲ್ಲೂಕು ವಾರ್ಷಿಕೋತ್ಸವ’ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.</p>.<p>ಇತ್ತೀಚಿಗೆ ನಮ್ಮ ತಾಲೂಕಿನ ರೈತರು ರಾಗಿ, ಭತ್ತ, ಜೋಳ ಬದಲಿಗೆ ಶುಂಠಿ ಬೆಳೆ ಮೊರೆ ಹೋಗಿದ್ದಾರೆ. ಆದಷ್ಟು ರೈತರು ಸಾವಯವ ಗೊಬ್ಬರ ಬಳಸಿ ಕೃಷಿ ಮಾಡಿ, ಮಣ್ಣಿನ ಫಲವತ್ತತೆ ಕಾಪಾಡಬೇಕು ಎಂದುರೈತರಿಗೆ ಸಲಹೆ ನೀಡಿದರು.</p>.<p>ಪೀಪಲ್ ಟ್ರೀ ಸಂಸ್ಥೆ ನೀಡಿರುವ ಮನವಿ ಪತ್ರ ಕುರಿತು ಪ್ರತಿಕ್ರಿಯಿಸಿದ ಶಾಸಕರು, ತಾಲೂಕಿನಲ್ಲಿ ನಾಲ್ಕು ಡ್ಯಾಮ್ಗಳಿದ್ದು, ಅವುಗಳ ಮೂಲಕ ಕೆರೆಗಳಿಗೆ ನೀರು ತುಂಬಿಸುವ ಯೋಜನೆಯನ್ನು ಕೈಗೆತ್ತಿಕೊಳ್ಳಲಾಗಿದೆ ಎಂದು ಹೇಳಿದರು.</p>.<p>ಪತ್ರಕರ್ತ ಮಹೇಶ್ ಮಾತನಾಡಿ, ಎನ್ಜಿಒಗಳು ಕೂಡ ತಾಲೂಕು ಅಭಿವೃದ್ಧಿಗೆ ಕೋಟಿಗಟ್ಟಲೆ ಹಣ ಖರ್ಚು ಮಾಡುತ್ತಿವೆ. ರಾಜಕೀಯ ಹೊರತುಪಡಿಸಿ ನೋಡಿದ್ರೆ ಶಾಸಕರು ತಾಲೂಕಿನ ಅಭಿವೃದ್ಧಿಗೆ ಶ್ರಮಿಸುತ್ತಿದ್ದಾರೆ ಎಂದು ಹೇಳಿದರು.</p>.<p>ಸಂಶೋಧಕ ಚೆನ್ನರಾಜು ಮಾತನಾಡಿ, ಬದಲಾಗುತ್ತಿರುವ ಈ ಸನ್ನಿವೇಶದಲ್ಲಿ ಹವಾಮಾನದ ಬದಲಾವಣೆ ಜನ ಜಾನುವಾರು ಮತ್ತು ಜೀವ ಸಂಕುಲಗಳ ಮೇಲೆ ಅತ್ಯಂತ ಕೆಟ್ಟ ಪರಿಣಾಮ ಬೀರುತ್ತಿದ್ದು, ನ ಆರೋಗ್ಯದ ಮೇಲೆ ತುಂಬಾ ದುಷ್ಪರಿಣಾಮ ಬೀರುತ್ತಿದೆ. ಹವಾಮಾನವನ್ನ ಕಾಪಾಡಿಕೊಳ್ಳುವ ಪ್ರಯತ್ನ ಮಾಡಬೇಕು ಎಂದು ತಿಳಿಸಿದರು.</p>.<p>ತಹಶಿಲ್ದಾರ್ ಶ್ರೀನಿವಾಸ್, ಬಿಕೆಎಸ್ ವಿಜಯ ಕುಮಾರ್, ಸುದೀಪ್, ನಾಗರಾಜ್, ಮಹೇಶ್, ಚೆನ್ನರಾಜ್, ಗುರುಸ್ವಾಮಿ, ಮರಿಲಿಂಗಣ್ಣ, ಲಿಂಗರಾಜ್, ಪ್ರಕಾಶ್, ರಾಜಹುಣಸೂರು, ಸಣ್ಣಸ್ವಾಮಿನಾಯಕ, ಮಂಜು, ಇಂದ್ರಮ್ಮ, ರೇಖಾ, ವಿಜಿಯಮ್ಮ, ಜವರೇಗೌಡ, ಸುರೇಶ್, ಚೆನ್ನಬಸಪ್ಪ, ರೀನಾ, ಫಣೀಶ್, ಶಿವಮ್ಮ, ಉಪಸ್ಥಿತರಿದ್ದರು.</p>.<p><em>ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ</em><br />260524-38-2047732180</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>