ನಂತರ ದಶದಾನಗಳನ್ನು ಋತ್ವಿಕರಿಗೆ ಸ್ವಾಮೀಜಿ ನೀಡಿದರು. ಗಣಪತಿ ಸೇರಿ ಎಲ್ಲಾ ದೇವರಿಗೆ ಗಣಪತಿ ಸ್ವಾಮೀಜಿ ಹಾಗೂ ದತ್ತ ವಿಜಯಾನಂದ ತೀರ್ಥ ಸ್ವಾಮೀಜಿ ಧನ ಕನಕ ಸಹಿತ ಪೂಜೆ ನೆರವೇರಿಸಿದರು. ವಿಷ್ಣುಸಹಸ್ರ ನಾಮ ಪಾರಾಯಣವೂ ನಡೆಯಿತು. ಅತ್ಯಂತ ಪ್ರಮುಖವಾದ ಕನಕಾಭಿಷೇಕವನ್ನು ಭಕ್ತರ ಪರವಾಗಿ ಗಣಪತಿ ಸಚ್ಚಿದಾನಂದ ಸ್ವಾಮೀಜಿ ಅವರಿಗೆ ಕಿರಿಯ ಶ್ರೀಗಳು ನೆರವೇರಿಸಿದರು.