<p>ಹುಣಸೂರು: ‘22 ವರ್ಷಗಳ ಹಿಂದೆ ಶಾಸಕ ದಿ. ವಿ.ಪಾಪಣ್ಣ ಅವರ ಅವಧಿಯಲ್ಲಿ 868 ಫಲಾನುಭವಿಗಳಿಗೆ ನಿವೇಶನ ವಿತರಿಸಿದ್ದು, ಅವರಿಗೆ ನಿವೇಶನ ಹಸ್ತಾಂತರಿಸುವಲ್ಲಿ ಗೊಂದಲವಾಗಿದೆ. ಈ ಸಂಬಂಧ ಫಲಾನುಭವಿಗಳಿಂದ ದಾಖಲೆ ಸಂಗ್ರಹಿಸಿ ಏ.6 ರಂದು ನಡೆಯಲಿರುವ ಆಶ್ರಯ ಸಮಿತಿ ಸಭೆಯಲ್ಲಿ ವಿಷಯ ಪ್ರಸ್ತಾಪಿಸಲು ಆಯುಕ್ತರಿಗೆ ಸೂಚಿಸಿದ್ದೇನೆ’ ಎಂದು ಶಾಸಕ ಜಿ.ಡಿ.ಹರೀಶ್ ಗೌಡ ತಿಳಿಸಿದರು.</p>.<p>ನಗರಸಭೆ ಕಚೇರಿ ಮುಂಭಾಗ ಹುಣಸೂರು ನಾಗರಿಕರ ಹಿತರಕ್ಷಣಾ ಸಮಿತಿ ಅಧ್ಯಕ್ಷ ಸ್ವಾಮಿಗೌಡ ಮತ್ತು ಉಪಾಧ್ಯಕ್ಷ ಇಂಟೆಕ್ ರಾಜು ನೇತೃತ್ವದಲ್ಲಿ ಫಲಾನುಭವಿಗಳಿಂದ ಮನವಿ ಸ್ವೀಕರಿಸಿ ಅವರು ಮಾತನಾಡಿದರು.</p>.<p>‘ನಗರಸಭೆಯಿಂದ ವಿತರಿಸಿದ ನಿವೇಶನಕ್ಕೆ ಸಂಬಂಧಿಸಿದಂತೆ ಈವರೆಗೂ ನಿವೇಶನ ಗುರುತಿಸಿ ನೀಡಿಲ್ಲ. ಈ ಸಂಬಂಧ ಫಲಾನುಭವಿಗಳು ಸೂಕ್ತ ದಾಖಲೆಯೊಂದಿಗೆ ನಗರಸಭೆಗೆ ನೀಡಲು ಈ ಹಿಂದೆ ಸೂಚಿಸಿದ್ದೆ. ಅದರಂತೆ ಈವರೆಗೆ 248 ಫಲಾನುಭವಿಗಳು ಸೂಕ್ತ ದಾಖಲೆ ಸಲ್ಲಿಸಿದ್ದಾರೆ’ ಎಂದರು.</p>.<p>‘868 ಫಲಾನುಭವಿಗಳಲ್ಲಿ ಕೇವಲ 248 ಅರ್ಜಿದಾರರು ದಾಖಲೆ ಸಲ್ಲಿಸಿದ್ದು, ಉಳಿದ ಫಲಾನುಭವಿಗಳು ಸಲ್ಲಿಸಲು ಮತ್ತೊಮ್ಮೆ ಒಂದು ತಿಂಗಳ ಕಾಲಾವಕಾಶ ಕಲ್ಪಿಸಲು ನಗರಸಭೆಗೆ ತಿಳಿಸಿದ್ದೇನೆ. ಪ್ರಥಮ ಹಂತದಲ್ಲಿ ಈಗಾಗಲೇ ದಾಖಲೆ ನೀಡಿರುವ ಅರ್ಜಿದಾರರ ಪಟ್ಟಿ ಸಿದ್ಧಪಡಿಸಿ, ಈ ಹಿಂದೆ ಜಿಲ್ಲಾಧಿಕಾರಿ ಅನುಮೋದಿಸಿದ ಪಟ್ಟಿ ಎರಡನ್ನು ಪರಿಶೀಲಿಸಿ ಪ್ರತ್ಯೇಕ ಪಟ್ಟಿ ಸಿದ್ಧಪಡಿಸುವಂತೆ ತಿಳಿಸಲಾಗಿದೆ’ ಎಂದು ತಿಳಿಸಿದರು.</p>.<p>ಪುನಃ ಆಹ್ವಾನ: ಫಲಾನುಭವಿಗಳಿಗೆ ಒಂದು ತಿಂಗಳ ಕಾಲಾವಕಾಶ ನೀಡಿ, ನಗರಸಭೆಗೆ ಸೂಕ್ತ ದಾಖಲೆ ಸಲ್ಲಿಸಲು ಪ್ರಕಟಣೆ ಹೊರಡಿಸಲು ನಗರಸಭೆ ಆಯುಕ್ತೆ ಮಾನಸ ಅವರಿಗೆ ಸೂಚಿಸಿದರು.</p>.<p>ದಾಖಲಾತಿಯೊಂದಿಗೆ ಅರ್ಜಿ ಸಲ್ಲಿಸಿದಲ್ಲಿ ನಗರಸಭೆಯಿಂದ ಪರಿಶೀಲಿಸಿ ನ್ಯಾಯಬದ್ಧವಾಗಿ ನಿವೇಶನ ವಿತರಿಸಿ ಕಾನೂನಾತ್ಮಕವಾಗಿ ಹಸ್ತಾಂತರಿಸಲು ಬದ್ದ ಎಂದರು.</p>.<p>ತಂಡ: ‘ಈಗಾಗಲೇ ಅರ್ಜಿ ಸಲ್ಲಿಸಿದ ಅರ್ಜಿದಾರರ ಮನೆಗಳಿಗೆ ನಗರಸಭೆ ಸಿಬ್ಬಂದಿ ಶನಿವಾರ ಮತ್ತು ಭಾನುವಾರ ಭೇಟಿ ನೀಡಿ ದಾಖಲಾತಿ ಪರಿಶೀಲಿಸಿ ಅಧಿಕಾರಿಯೊಂದಿಗೆ ಫಲಾನುಭವಿ ಇರುವ ವಿಡಿಯೊ ಮತ್ತು ಫೋಟೊ ತೆಗೆದು ಖಾತ್ರಿಪಡಿಸಿ’ ಎಂದರು.</p>.<p>‘ನಗರದಲ್ಲಿ ವಾಸವಿಲ್ಲದವರ ಮತ್ತು ಸರ್ಕಾರಿ ಉದ್ಯೋಗಿಯಾಗಿದ್ದವರ ಹೆಸರನ್ನು ಪಟ್ಟಿಯಿಂದ ವಜಾಗೊಳಿಸಿ’ ಎಂದು ಅಧಿಕಾರಿಗೆ ಸೂಚಿಸಿದರು.</p>.<p>ನಗರಸಭೆ ಆಯುಕ್ತೆ ಮಾನಸ, ಕಂದಾಯ ಇಲಾಖೆ ಅಧಿಕಾರಿ ಸಿದ್ದರಾಜು, ಚಂದ್ರು ಹಾಗೂ ಫಲಾನುಭವಿಗಳು ಇದ್ದರು.</p>.<p><em>ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ</em><br />260401-38-1459584148</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಹುಣಸೂರು: ‘22 ವರ್ಷಗಳ ಹಿಂದೆ ಶಾಸಕ ದಿ. ವಿ.ಪಾಪಣ್ಣ ಅವರ ಅವಧಿಯಲ್ಲಿ 868 ಫಲಾನುಭವಿಗಳಿಗೆ ನಿವೇಶನ ವಿತರಿಸಿದ್ದು, ಅವರಿಗೆ ನಿವೇಶನ ಹಸ್ತಾಂತರಿಸುವಲ್ಲಿ ಗೊಂದಲವಾಗಿದೆ. ಈ ಸಂಬಂಧ ಫಲಾನುಭವಿಗಳಿಂದ ದಾಖಲೆ ಸಂಗ್ರಹಿಸಿ ಏ.6 ರಂದು ನಡೆಯಲಿರುವ ಆಶ್ರಯ ಸಮಿತಿ ಸಭೆಯಲ್ಲಿ ವಿಷಯ ಪ್ರಸ್ತಾಪಿಸಲು ಆಯುಕ್ತರಿಗೆ ಸೂಚಿಸಿದ್ದೇನೆ’ ಎಂದು ಶಾಸಕ ಜಿ.ಡಿ.ಹರೀಶ್ ಗೌಡ ತಿಳಿಸಿದರು.</p>.<p>ನಗರಸಭೆ ಕಚೇರಿ ಮುಂಭಾಗ ಹುಣಸೂರು ನಾಗರಿಕರ ಹಿತರಕ್ಷಣಾ ಸಮಿತಿ ಅಧ್ಯಕ್ಷ ಸ್ವಾಮಿಗೌಡ ಮತ್ತು ಉಪಾಧ್ಯಕ್ಷ ಇಂಟೆಕ್ ರಾಜು ನೇತೃತ್ವದಲ್ಲಿ ಫಲಾನುಭವಿಗಳಿಂದ ಮನವಿ ಸ್ವೀಕರಿಸಿ ಅವರು ಮಾತನಾಡಿದರು.</p>.<p>‘ನಗರಸಭೆಯಿಂದ ವಿತರಿಸಿದ ನಿವೇಶನಕ್ಕೆ ಸಂಬಂಧಿಸಿದಂತೆ ಈವರೆಗೂ ನಿವೇಶನ ಗುರುತಿಸಿ ನೀಡಿಲ್ಲ. ಈ ಸಂಬಂಧ ಫಲಾನುಭವಿಗಳು ಸೂಕ್ತ ದಾಖಲೆಯೊಂದಿಗೆ ನಗರಸಭೆಗೆ ನೀಡಲು ಈ ಹಿಂದೆ ಸೂಚಿಸಿದ್ದೆ. ಅದರಂತೆ ಈವರೆಗೆ 248 ಫಲಾನುಭವಿಗಳು ಸೂಕ್ತ ದಾಖಲೆ ಸಲ್ಲಿಸಿದ್ದಾರೆ’ ಎಂದರು.</p>.<p>‘868 ಫಲಾನುಭವಿಗಳಲ್ಲಿ ಕೇವಲ 248 ಅರ್ಜಿದಾರರು ದಾಖಲೆ ಸಲ್ಲಿಸಿದ್ದು, ಉಳಿದ ಫಲಾನುಭವಿಗಳು ಸಲ್ಲಿಸಲು ಮತ್ತೊಮ್ಮೆ ಒಂದು ತಿಂಗಳ ಕಾಲಾವಕಾಶ ಕಲ್ಪಿಸಲು ನಗರಸಭೆಗೆ ತಿಳಿಸಿದ್ದೇನೆ. ಪ್ರಥಮ ಹಂತದಲ್ಲಿ ಈಗಾಗಲೇ ದಾಖಲೆ ನೀಡಿರುವ ಅರ್ಜಿದಾರರ ಪಟ್ಟಿ ಸಿದ್ಧಪಡಿಸಿ, ಈ ಹಿಂದೆ ಜಿಲ್ಲಾಧಿಕಾರಿ ಅನುಮೋದಿಸಿದ ಪಟ್ಟಿ ಎರಡನ್ನು ಪರಿಶೀಲಿಸಿ ಪ್ರತ್ಯೇಕ ಪಟ್ಟಿ ಸಿದ್ಧಪಡಿಸುವಂತೆ ತಿಳಿಸಲಾಗಿದೆ’ ಎಂದು ತಿಳಿಸಿದರು.</p>.<p>ಪುನಃ ಆಹ್ವಾನ: ಫಲಾನುಭವಿಗಳಿಗೆ ಒಂದು ತಿಂಗಳ ಕಾಲಾವಕಾಶ ನೀಡಿ, ನಗರಸಭೆಗೆ ಸೂಕ್ತ ದಾಖಲೆ ಸಲ್ಲಿಸಲು ಪ್ರಕಟಣೆ ಹೊರಡಿಸಲು ನಗರಸಭೆ ಆಯುಕ್ತೆ ಮಾನಸ ಅವರಿಗೆ ಸೂಚಿಸಿದರು.</p>.<p>ದಾಖಲಾತಿಯೊಂದಿಗೆ ಅರ್ಜಿ ಸಲ್ಲಿಸಿದಲ್ಲಿ ನಗರಸಭೆಯಿಂದ ಪರಿಶೀಲಿಸಿ ನ್ಯಾಯಬದ್ಧವಾಗಿ ನಿವೇಶನ ವಿತರಿಸಿ ಕಾನೂನಾತ್ಮಕವಾಗಿ ಹಸ್ತಾಂತರಿಸಲು ಬದ್ದ ಎಂದರು.</p>.<p>ತಂಡ: ‘ಈಗಾಗಲೇ ಅರ್ಜಿ ಸಲ್ಲಿಸಿದ ಅರ್ಜಿದಾರರ ಮನೆಗಳಿಗೆ ನಗರಸಭೆ ಸಿಬ್ಬಂದಿ ಶನಿವಾರ ಮತ್ತು ಭಾನುವಾರ ಭೇಟಿ ನೀಡಿ ದಾಖಲಾತಿ ಪರಿಶೀಲಿಸಿ ಅಧಿಕಾರಿಯೊಂದಿಗೆ ಫಲಾನುಭವಿ ಇರುವ ವಿಡಿಯೊ ಮತ್ತು ಫೋಟೊ ತೆಗೆದು ಖಾತ್ರಿಪಡಿಸಿ’ ಎಂದರು.</p>.<p>‘ನಗರದಲ್ಲಿ ವಾಸವಿಲ್ಲದವರ ಮತ್ತು ಸರ್ಕಾರಿ ಉದ್ಯೋಗಿಯಾಗಿದ್ದವರ ಹೆಸರನ್ನು ಪಟ್ಟಿಯಿಂದ ವಜಾಗೊಳಿಸಿ’ ಎಂದು ಅಧಿಕಾರಿಗೆ ಸೂಚಿಸಿದರು.</p>.<p>ನಗರಸಭೆ ಆಯುಕ್ತೆ ಮಾನಸ, ಕಂದಾಯ ಇಲಾಖೆ ಅಧಿಕಾರಿ ಸಿದ್ದರಾಜು, ಚಂದ್ರು ಹಾಗೂ ಫಲಾನುಭವಿಗಳು ಇದ್ದರು.</p>.<p><em>ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ</em><br />260401-38-1459584148</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>