<p><strong>ಹುಣಸೂರು:</strong> ತಾಲ್ಲೂಕಿನ ಕಸಬಾ, ಹನಗೋಡು ಹೋಬಳಿ ಭಾಗದಲ್ಲಿ ಗುಡುಗು ಸಿಡಿಲಿಂದ ಕೂಡಿದ ಭಾರಿ ಮಳೆಯಾಗಿದ್ದು, ಶಾಲೆ, ಮನೆಗಳ ಚಾವಣಿ ಹಾರಿ ಹೋಗಿವೆ, ಆಲಿಕಲ್ಲು ಮಳೆಯಿಂದ ತಂಬಾಕು ಸಸಿಗಳ ಮಡಿಗಳೂ ನಾಶವಾಗಿವೆ.</p><p>ಬುಧವಾರ ಮಧ್ಯಾಹ್ನ 3.30ಕ್ಕೆ ಆರಂಭವಾದ ಮಳೆ ಹುಣಸೂರು ನಗರ ಸೇರಿದಂತೆ ಹನಗೋಡು ಹೋಬಳಿ ಭಾಗದಲ್ಲಿ ಒಂದು ಗಂಟೆಗೂ ಹೆಚ್ಚು ಅವಧಿ ಸುರಿಯಿತು. ಹನಗೋಡು ಹೋಬಳಿ ದಾಸನಪುರ ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಚಾವಣಿ ಗಾಳಿಯಲ್ಲಿ ಹಾರಿ ಹೋಗಿದ್ದು, ಶಿಕ್ಷಕಿಯರ ಸಮಯ ಪ್ರಜ್ಞೆಯಿಂದಾಗಿ ಮಕ್ಕಳು ಅನಾಹುತದಿಂದ ಪಾರಾಗಿದ್ದಾರೆ.</p><p>ಶಾಲೆಯ ತರಗತಿಯಲ್ಲಿ 22ರಿಂದ 25 ವಿದ್ಯಾರ್ಥಿಗಳಿದ್ದು, ಆ ಸಮಯದಲ್ಲಿ ಬಿರುಗಾಳಿ ಸಮೇತ ಆರಂಭವಾದ ಮಳೆಯಿಂದಾಗಿ ಶಾಲೆಯ ಚಾವಣಿ ಹಾರಿ ಹೋಗಿದೆ. ತರಗತಿಯಲ್ಲಿದ್ದ ಶಿಕ್ಷಕಿ ಸುಮಾ ಮತ್ತು ಉಷಾ ಇಬ್ಬರೂ ವಿದ್ಯಾರ್ಥಿಗಳನ್ನು ಬೆಂಚ್ ಅಡಿಯಲ್ಲಿ ಕೂರಿಸಿ ಚಾವಣಿ ಹೆಂಚು ಮಕ್ಕಳ ಮೇಲೆ ಬೀಳದಂತೆ ಎಚ್ಚರವಹಿಸಲಾಗಿದ್ದು, ಯಾವುದೇ ಗಾಯವಿಲ್ಲದಂತೆ ರಕ್ಷಿಸಿ ಮನೆಗೆ ಕಳುಹಿಸಿದ್ದಾರೆ.</p><p>ಮಳೆಯಿಂದಾಗಿ ಮಾದೇಗೌಡ, ಮಾದಯ್ಯ ಅವರ ಮನೆ ಮೇಲೆ ಮರ ಉರುಳಿದೆ. ರಸ್ತೆಯಲ್ಲಿ ನಿಲ್ಲಿಸಿದ್ದ ದ್ವಿಚಕ್ರ ವಾಹನವೂ ಜಖಂಗೊಂಡಿದೆ. ಗಣೇಶ್, ಪ್ರಕಾಶ್, ಶೇಖರ್, ಸೋಮಶೇಖರ್, ಕುಮಾರ್, ಮದು ಮಲ್ಲಯ್ಯ, ರವಿ ಮಾದೇಗೌಡ ಅವರಿಗೆ ಸೇರಿದ ಮನೆಗಳ ಚಾವಣಿಯೂ ಹಾರಿ ಹೋಗಿದೆ.</p><p>ಆಲಿಕಲ್ಲು: ಕಡೆಮನುಗನಹಳ್ಳಿ ಗ್ರಾಮದಲ್ಲಿ ಬಿದ್ದ ಆಲಿಕಲ್ಲು ಸಹಿತ ಮಳೆಯಿಂದಾಗಿ ರೈತರಾದ<br>ಕುಮಾರ್, ಸಾವಿತ್ರಮ್ಮ, ಕೃಷ್ಣನಾಯಕ, ಮಣಿಗೌಡ ಮತ್ತು ಸ್ವಾಮಿ ನಾಯಕ ಹಾಗೂ ಸತೀಶ್ ಎನ್ನುವರಿಗೆ ಸೇರಿದ 2 ಲಕ್ಷ ತಂಬಾಕು ಸಸಿ ಮಡಿ ನಾಶವಾಗಿದೆ. ರಸ್ತೆ ಅಂಚಿನ ಮರಗಳು ಉರುಳಿದ ಕಾರಣ ವಿದ್ಯುತ್ ತಂತಿ ಕಂಬಗಳು ಧರೆಗೆ ಉರುಳಿ ಗ್ರಾಮಗಳಲ್ಲಿ ವಿದ್ಯುತ್ ವ್ಯತ್ಯಯವಾಗಿದೆ.</p><p>ಕ್ಷೇತ್ರದಲ್ಲಿ ಸಂಭವಿಸಿದ ಪ್ರಾಕೃತಿಕ ವಿಕೋಪದಲ್ಲಿ ನೊಂದ ನಾಗರಿಕರು ಮತ್ತು ವಿದ್ಯಾರ್ಥಿಗಳಿಗೆ ಶಾಸಕ ಜಿ.ಡಿ.ಹರೀಶ್ ಗೌಡ ದೂರವಾಣಿ ಮೂಲಕ ಸಂಪರ್ಕಿಸಿ ಸಾಂತ್ವನ ತಿಳಿಸಿ ಧೈರ್ಯ<br>ತುಂಬಿದರು. ಕ್ಷೇತ್ರಕ್ಕೆ ಗುರುವಾರ ಬರುತ್ತಿತ್ತು ಗ್ರಾಮಕ್ಕೆ ಭೇಟಿ ನೀಡುವ ಭರವಸೆ ನೀಡಿದ್ದಾರೆ.</p><p>ಘಟನಾ ಸ್ಥಳಕ್ಕೆ ಕಂದಾಯ ಇಲಾಖೆ ಅಧಿಕಾರಿಗಳ ತಂಡ ಭೇಟಿ ನೀಡಿ ವಿಕೋಪದಲ್ಲಿ ಆಗಿರುವ ಅನಾಹುತದ ವರದಿಯನ್ನು ತಹಶೀಲ್ದಾರ್ಗೆ ಸಲ್ಲಿಸಿದ ಬಳಿಕ ಪರಿಹಾರ ನೀಡುವುದಾಗಿ<br>ತಿಳಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಹುಣಸೂರು:</strong> ತಾಲ್ಲೂಕಿನ ಕಸಬಾ, ಹನಗೋಡು ಹೋಬಳಿ ಭಾಗದಲ್ಲಿ ಗುಡುಗು ಸಿಡಿಲಿಂದ ಕೂಡಿದ ಭಾರಿ ಮಳೆಯಾಗಿದ್ದು, ಶಾಲೆ, ಮನೆಗಳ ಚಾವಣಿ ಹಾರಿ ಹೋಗಿವೆ, ಆಲಿಕಲ್ಲು ಮಳೆಯಿಂದ ತಂಬಾಕು ಸಸಿಗಳ ಮಡಿಗಳೂ ನಾಶವಾಗಿವೆ.</p><p>ಬುಧವಾರ ಮಧ್ಯಾಹ್ನ 3.30ಕ್ಕೆ ಆರಂಭವಾದ ಮಳೆ ಹುಣಸೂರು ನಗರ ಸೇರಿದಂತೆ ಹನಗೋಡು ಹೋಬಳಿ ಭಾಗದಲ್ಲಿ ಒಂದು ಗಂಟೆಗೂ ಹೆಚ್ಚು ಅವಧಿ ಸುರಿಯಿತು. ಹನಗೋಡು ಹೋಬಳಿ ದಾಸನಪುರ ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಚಾವಣಿ ಗಾಳಿಯಲ್ಲಿ ಹಾರಿ ಹೋಗಿದ್ದು, ಶಿಕ್ಷಕಿಯರ ಸಮಯ ಪ್ರಜ್ಞೆಯಿಂದಾಗಿ ಮಕ್ಕಳು ಅನಾಹುತದಿಂದ ಪಾರಾಗಿದ್ದಾರೆ.</p><p>ಶಾಲೆಯ ತರಗತಿಯಲ್ಲಿ 22ರಿಂದ 25 ವಿದ್ಯಾರ್ಥಿಗಳಿದ್ದು, ಆ ಸಮಯದಲ್ಲಿ ಬಿರುಗಾಳಿ ಸಮೇತ ಆರಂಭವಾದ ಮಳೆಯಿಂದಾಗಿ ಶಾಲೆಯ ಚಾವಣಿ ಹಾರಿ ಹೋಗಿದೆ. ತರಗತಿಯಲ್ಲಿದ್ದ ಶಿಕ್ಷಕಿ ಸುಮಾ ಮತ್ತು ಉಷಾ ಇಬ್ಬರೂ ವಿದ್ಯಾರ್ಥಿಗಳನ್ನು ಬೆಂಚ್ ಅಡಿಯಲ್ಲಿ ಕೂರಿಸಿ ಚಾವಣಿ ಹೆಂಚು ಮಕ್ಕಳ ಮೇಲೆ ಬೀಳದಂತೆ ಎಚ್ಚರವಹಿಸಲಾಗಿದ್ದು, ಯಾವುದೇ ಗಾಯವಿಲ್ಲದಂತೆ ರಕ್ಷಿಸಿ ಮನೆಗೆ ಕಳುಹಿಸಿದ್ದಾರೆ.</p><p>ಮಳೆಯಿಂದಾಗಿ ಮಾದೇಗೌಡ, ಮಾದಯ್ಯ ಅವರ ಮನೆ ಮೇಲೆ ಮರ ಉರುಳಿದೆ. ರಸ್ತೆಯಲ್ಲಿ ನಿಲ್ಲಿಸಿದ್ದ ದ್ವಿಚಕ್ರ ವಾಹನವೂ ಜಖಂಗೊಂಡಿದೆ. ಗಣೇಶ್, ಪ್ರಕಾಶ್, ಶೇಖರ್, ಸೋಮಶೇಖರ್, ಕುಮಾರ್, ಮದು ಮಲ್ಲಯ್ಯ, ರವಿ ಮಾದೇಗೌಡ ಅವರಿಗೆ ಸೇರಿದ ಮನೆಗಳ ಚಾವಣಿಯೂ ಹಾರಿ ಹೋಗಿದೆ.</p><p>ಆಲಿಕಲ್ಲು: ಕಡೆಮನುಗನಹಳ್ಳಿ ಗ್ರಾಮದಲ್ಲಿ ಬಿದ್ದ ಆಲಿಕಲ್ಲು ಸಹಿತ ಮಳೆಯಿಂದಾಗಿ ರೈತರಾದ<br>ಕುಮಾರ್, ಸಾವಿತ್ರಮ್ಮ, ಕೃಷ್ಣನಾಯಕ, ಮಣಿಗೌಡ ಮತ್ತು ಸ್ವಾಮಿ ನಾಯಕ ಹಾಗೂ ಸತೀಶ್ ಎನ್ನುವರಿಗೆ ಸೇರಿದ 2 ಲಕ್ಷ ತಂಬಾಕು ಸಸಿ ಮಡಿ ನಾಶವಾಗಿದೆ. ರಸ್ತೆ ಅಂಚಿನ ಮರಗಳು ಉರುಳಿದ ಕಾರಣ ವಿದ್ಯುತ್ ತಂತಿ ಕಂಬಗಳು ಧರೆಗೆ ಉರುಳಿ ಗ್ರಾಮಗಳಲ್ಲಿ ವಿದ್ಯುತ್ ವ್ಯತ್ಯಯವಾಗಿದೆ.</p><p>ಕ್ಷೇತ್ರದಲ್ಲಿ ಸಂಭವಿಸಿದ ಪ್ರಾಕೃತಿಕ ವಿಕೋಪದಲ್ಲಿ ನೊಂದ ನಾಗರಿಕರು ಮತ್ತು ವಿದ್ಯಾರ್ಥಿಗಳಿಗೆ ಶಾಸಕ ಜಿ.ಡಿ.ಹರೀಶ್ ಗೌಡ ದೂರವಾಣಿ ಮೂಲಕ ಸಂಪರ್ಕಿಸಿ ಸಾಂತ್ವನ ತಿಳಿಸಿ ಧೈರ್ಯ<br>ತುಂಬಿದರು. ಕ್ಷೇತ್ರಕ್ಕೆ ಗುರುವಾರ ಬರುತ್ತಿತ್ತು ಗ್ರಾಮಕ್ಕೆ ಭೇಟಿ ನೀಡುವ ಭರವಸೆ ನೀಡಿದ್ದಾರೆ.</p><p>ಘಟನಾ ಸ್ಥಳಕ್ಕೆ ಕಂದಾಯ ಇಲಾಖೆ ಅಧಿಕಾರಿಗಳ ತಂಡ ಭೇಟಿ ನೀಡಿ ವಿಕೋಪದಲ್ಲಿ ಆಗಿರುವ ಅನಾಹುತದ ವರದಿಯನ್ನು ತಹಶೀಲ್ದಾರ್ಗೆ ಸಲ್ಲಿಸಿದ ಬಳಿಕ ಪರಿಹಾರ ನೀಡುವುದಾಗಿ<br>ತಿಳಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>