<p><strong>ಹುಣಸೂರು:</strong> ನಗರದ ಶಬ್ಬೀರ್ ನಗರದಲ್ಲಿ ನ.6 ರಂದು ಸಾಲಿಗ್ರಾಮ ತಾಲ್ಲೂಕಿನ ಹೊನ್ನೇನಹಳ್ಳಿ ಪಂಚಾಯಿತಿ ಸದಸ್ಯ ಕಿಜರ್ ಪಾಷ (45) ಅವರನ್ನು ಹತ್ಯೆ ಮಾಡಿದ್ದ ಆರೋಪದಲ್ಲಿ ಮೂವರನ್ನು ನಗರ ಠಾಣೆ ಪೊಲೀಸರು ವಶಕ್ಕೆ ಪಡೆದು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.</p>.<p>‘ಎಜಾಜ್ ಪಾಷ (45) ಮುಜೀಬ್ (35) ಮತ್ತು ಅಬ್ದುಲ್ಲಾ (25) ಅವರನ್ನು ಹಾಸನ ಜಿಲ್ಲೆ ಕೊಣನೂರು ಬಳಿ ಮಂಗಳವಾರ ವಶಕ್ಕೆ ಪಡೆದು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದೇವೆ. ಇಬ್ಬರು ತಲೆಮರೆಸಿಕೊಂಡಿದ್ದು, ಅವರಿಗಾಗಿ ಹುಡುಕಾಟ ನಡೆದಿದೆ’ ಎಂದು ಸರ್ಕಲ್ ಇನ್ಸ್ಪೆಕ್ಟರ್ ಸಂತೋಷ್ ಕಶ್ಯಪ್ ತಿಳಿಸಿದ್ದಾರೆ.</p>.<p>ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವಿಷ್ಣುವರ್ಧನ್, ಎ.ಎಸ್.ಪಿ ಮಲ್ಲಿಕ್ ಮತ್ತು ಡಿವೈಎಸ್ಪಿ ರವಿ ಮಾರ್ಗದರ್ಶನದಲ್ಲಿ ಕಾರ್ಯಾಚರಣೆ ನಡೆದಿದ್ದು, ತಂಡದಲ್ಲಿ ಅರುಣ್, ಪ್ರಸಾದ್, ಇರ್ಫಾನ್, ರಾಘು, ಜಮೀರ್ ಆಹಮ್ಮದ್ ಇದ್ದರು. </p>
<p><strong>ಹುಣಸೂರು:</strong> ನಗರದ ಶಬ್ಬೀರ್ ನಗರದಲ್ಲಿ ನ.6 ರಂದು ಸಾಲಿಗ್ರಾಮ ತಾಲ್ಲೂಕಿನ ಹೊನ್ನೇನಹಳ್ಳಿ ಪಂಚಾಯಿತಿ ಸದಸ್ಯ ಕಿಜರ್ ಪಾಷ (45) ಅವರನ್ನು ಹತ್ಯೆ ಮಾಡಿದ್ದ ಆರೋಪದಲ್ಲಿ ಮೂವರನ್ನು ನಗರ ಠಾಣೆ ಪೊಲೀಸರು ವಶಕ್ಕೆ ಪಡೆದು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.</p>.<p>‘ಎಜಾಜ್ ಪಾಷ (45) ಮುಜೀಬ್ (35) ಮತ್ತು ಅಬ್ದುಲ್ಲಾ (25) ಅವರನ್ನು ಹಾಸನ ಜಿಲ್ಲೆ ಕೊಣನೂರು ಬಳಿ ಮಂಗಳವಾರ ವಶಕ್ಕೆ ಪಡೆದು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದೇವೆ. ಇಬ್ಬರು ತಲೆಮರೆಸಿಕೊಂಡಿದ್ದು, ಅವರಿಗಾಗಿ ಹುಡುಕಾಟ ನಡೆದಿದೆ’ ಎಂದು ಸರ್ಕಲ್ ಇನ್ಸ್ಪೆಕ್ಟರ್ ಸಂತೋಷ್ ಕಶ್ಯಪ್ ತಿಳಿಸಿದ್ದಾರೆ.</p>.<p>ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವಿಷ್ಣುವರ್ಧನ್, ಎ.ಎಸ್.ಪಿ ಮಲ್ಲಿಕ್ ಮತ್ತು ಡಿವೈಎಸ್ಪಿ ರವಿ ಮಾರ್ಗದರ್ಶನದಲ್ಲಿ ಕಾರ್ಯಾಚರಣೆ ನಡೆದಿದ್ದು, ತಂಡದಲ್ಲಿ ಅರುಣ್, ಪ್ರಸಾದ್, ಇರ್ಫಾನ್, ರಾಘು, ಜಮೀರ್ ಆಹಮ್ಮದ್ ಇದ್ದರು. </p>