<p>ಹುಣಸೂರು: ನಗರದಲ್ಲಿರುವ ಗ್ರಾಮ ದೇವತೆ ಮುತ್ತುಮಾರಮ್ಮ ದೇವಸ್ಥಾನದ ನೂತನ ಬೆಳ್ಳಿ ರಥವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಏಪ್ರಿಲ್ 20ರಂದು ಉದ್ಘಾಟಿಸುವರು ಎಂದು ದೇವಸ್ಥಾನದ ಸಮಿತಿ ಅಧ್ಯಕ್ಷ ಎಚ್. ವೈ. ಮಹದೇವ್ ಹೇಳಿದರು.</p>.<p>ನಗರದಲ್ಲಿ ಸುದ್ದಿಗೊಷ್ಠಿಯಲ್ಲಿ ಅವರು ಮಾತನಾಡಿ, ₹ 3 ಕೋಟಿ ವೆಚ್ಚದಲ್ಲಿ 125 ಕೆ.ಜಿ. ಬೆಳ್ಳಿ ಬಳಸಿ 12 ಅಡಿ ಎತ್ತರ, 6 ಆಡಿ ಉದ್ದ ಮತ್ತು 5 ಅಡಿ ಅಗಲ ಇರುವ ಬೆಳ್ಳಿ ರಥ ಭಕ್ತರ ದೇಣಿಗೆ, ಉದ್ಯಮಿ ಅಶೋಕ್ ಅವರ ಕೊಡುಗೆ ಸಂಗ್ರಹಿಸಿ ನಿರ್ಮಿಸಲಾಗಿದೆ. ₹ 7 ಲಕ್ಷ ಮೌಲ್ಯದ ತೇಗದ ಮರವನ್ನು ಉದ್ಯಮಿ ಎಚ್.ಎಸ್ ಶಿವಯ್ಯ ನೀಡಿದ್ದಾರೆ ಎಂದರು.</p>.<p>ಅನ್ನಸಂತರ್ಪಣೆ: ಅಂದು ಬೆಳಗ್ಗೆಯಿಂದಲೇ ವಿವಿಧ ಧಾರ್ಮಿಕ ಪೂಜೆ, 5 ಸಾವಿರ ಭಕ್ತರಿಗೆ ಅನ್ನಸಂತರ್ಪಣೆ ಹಮ್ಮಿಕೊಳ್ಳಲಾಗಿದೆಎಂದರು. ದೇವಸ್ಥಾನದ ಆಡಳಿತ ಮಂಡಳಿ ಸದಸ್ಯರಾದ ಅಶೋಕ್, ಎಚ್.ಎಸ್.ಶಿವಯ್ಯ, ಯೋಗೇಶ್, ಪ್ರಕಾಶ್ ಇದ್ದರು.</p>.<p>ಕಾಂಗ್ರೆಸ್ ಗ್ರಾಮಾಂತರ ಬ್ಲಾಕ್ ಅಧ್ಯಕ್ಷ ಬಾಲಸುಂದರ್, ಗ್ಯಾರಂಟಿ ಸಮಿತಿ ಅಧ್ಯಕ್ಷ ರಾಘು ಕಲ್ಕುಣಿಕೆ, ಅಕ್ರಮ ಸಕ್ರಮ ಸಮಿತಿ ಸದಸ್ಯ ಕುಮಾರ್, ದರ್ಶನ್ ಇದ್ದರು.</p>.<p><em>ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ</em><br />260419-38-1357948818</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಹುಣಸೂರು: ನಗರದಲ್ಲಿರುವ ಗ್ರಾಮ ದೇವತೆ ಮುತ್ತುಮಾರಮ್ಮ ದೇವಸ್ಥಾನದ ನೂತನ ಬೆಳ್ಳಿ ರಥವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಏಪ್ರಿಲ್ 20ರಂದು ಉದ್ಘಾಟಿಸುವರು ಎಂದು ದೇವಸ್ಥಾನದ ಸಮಿತಿ ಅಧ್ಯಕ್ಷ ಎಚ್. ವೈ. ಮಹದೇವ್ ಹೇಳಿದರು.</p>.<p>ನಗರದಲ್ಲಿ ಸುದ್ದಿಗೊಷ್ಠಿಯಲ್ಲಿ ಅವರು ಮಾತನಾಡಿ, ₹ 3 ಕೋಟಿ ವೆಚ್ಚದಲ್ಲಿ 125 ಕೆ.ಜಿ. ಬೆಳ್ಳಿ ಬಳಸಿ 12 ಅಡಿ ಎತ್ತರ, 6 ಆಡಿ ಉದ್ದ ಮತ್ತು 5 ಅಡಿ ಅಗಲ ಇರುವ ಬೆಳ್ಳಿ ರಥ ಭಕ್ತರ ದೇಣಿಗೆ, ಉದ್ಯಮಿ ಅಶೋಕ್ ಅವರ ಕೊಡುಗೆ ಸಂಗ್ರಹಿಸಿ ನಿರ್ಮಿಸಲಾಗಿದೆ. ₹ 7 ಲಕ್ಷ ಮೌಲ್ಯದ ತೇಗದ ಮರವನ್ನು ಉದ್ಯಮಿ ಎಚ್.ಎಸ್ ಶಿವಯ್ಯ ನೀಡಿದ್ದಾರೆ ಎಂದರು.</p>.<p>ಅನ್ನಸಂತರ್ಪಣೆ: ಅಂದು ಬೆಳಗ್ಗೆಯಿಂದಲೇ ವಿವಿಧ ಧಾರ್ಮಿಕ ಪೂಜೆ, 5 ಸಾವಿರ ಭಕ್ತರಿಗೆ ಅನ್ನಸಂತರ್ಪಣೆ ಹಮ್ಮಿಕೊಳ್ಳಲಾಗಿದೆಎಂದರು. ದೇವಸ್ಥಾನದ ಆಡಳಿತ ಮಂಡಳಿ ಸದಸ್ಯರಾದ ಅಶೋಕ್, ಎಚ್.ಎಸ್.ಶಿವಯ್ಯ, ಯೋಗೇಶ್, ಪ್ರಕಾಶ್ ಇದ್ದರು.</p>.<p>ಕಾಂಗ್ರೆಸ್ ಗ್ರಾಮಾಂತರ ಬ್ಲಾಕ್ ಅಧ್ಯಕ್ಷ ಬಾಲಸುಂದರ್, ಗ್ಯಾರಂಟಿ ಸಮಿತಿ ಅಧ್ಯಕ್ಷ ರಾಘು ಕಲ್ಕುಣಿಕೆ, ಅಕ್ರಮ ಸಕ್ರಮ ಸಮಿತಿ ಸದಸ್ಯ ಕುಮಾರ್, ದರ್ಶನ್ ಇದ್ದರು.</p>.<p><em>ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ</em><br />260419-38-1357948818</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>