ಮೈಸೂರು: ಇಲ್ಲಿನ ಅರಮನೆ ಆವರಣದಲ್ಲಿ ಸೋಮವಾರ ಜಂಬೂಸವಾರಿ ರಿಹರ್ಸಲ್ ಯಶಸ್ವಿಯಾಗಿ ನೆರವೇರಿತು.
ವಿಜಯದಶಮಿ ಮೆರವಣಿಗೆಯ ಹಿನ್ನೆಲೆಯಲ್ಲಿ ತಾಲೀಮು ನಡೆಸಲಾಯಿತು. ಇದು 3ನೇ ದಿನದ ತಾಲೀಮಾಗಿದೆ.
ವಿಜಯ ದಶಮಿಯಂದು ಚಿನ್ನದ ಅಂಬಾರಿಗೆ ಪುಷ್ಪಾರ್ಚನೆ ಮಾಡಿ ಚಾಲನೆ ನೀಡಲಾಗುತ್ತದೆ. ಅದೇ ಮಾದರಿಯಲ್ಲಿ ನಡೆದ ತಾಲೀಮಿನಲ್ಲಿ ಮುಖ್ಯ ಅತಿಥಿಯಾಗಿ ಶಾಸಕ ಎಲ್.ನಾಗೇಂದ್ರ ಭಾಗವಹಿಸಿದ್ದರು. ಅವರೊಂದಿಗೆ ಡಿಸಿಎಫ್ ಕರಿಕಾಳನ್, ಎಸಿಪಿ ಚಂದ್ರಶೇಖರ್ ಮತ್ತು ಅಧಿಕಾರಿಗಳು–ಸಿಬ್ಬಂದಿ ಇದ್ದರು.
ನಾಯಕ ಅಭಿಮನ್ಯು ನೇತೃತ್ವದ ಗಜಪಡೆಯೊಂದಿಗೆ ಆಶ್ವಾರೋಹಿ ದಳವೂ ಪಾಲ್ಗೊಂಡಿತ್ತು. ಪೊಲೀಸರು ತಾಲೀಮಿನಲ್ಲಿ ಭಾಗವಹಿಸಿದ್ದರು. ಅರಮನೆ ಆವರಣದ ವಿಶೇಷ ವೇದಿಕೆಯ ಎದುರಿಗೆ ಕರೆತರಲಾದ ಅಭಿಮನ್ಯುಗೆ ನಗರ ಸಶಸ್ತ್ರ ಮೀಸಲು ಪಡೆಯಿಂದ ಗೌರವವಂದನೆ ಸಲ್ಲಿಸಲಾಯಿತು.