<p><strong>ಮೈಸೂರು:</strong> ಅಲ್ಲಿ ಕುಮಾರವ್ಯಾಸ ಕವಿಯ ಉತ್ಕಟ ಅಭಿಮಾನಿಗಳಿದ್ದರು. ಕರ್ಣಾಟ ಭಾರತ ಕಥಾಮಂಜರಿ ಮಹಾಕಾವ್ಯದ ಕುರಿತು ತರಗತಿಗಳಲ್ಲಿ ಫಾಠ ಮಾಡಿದ ವಿದ್ವಾಂಸರಿದ್ದರು. ಸಾಹಿತ್ಯದ ವಿದ್ಯಾರ್ಥಿಗಳಿದ್ದರು. ಹಲವು ಊರುಗಳಿಂದ ಬಂದವರೂ ಇದ್ದರು. ಜೊತೆಗೆ ಕಾವ್ಯ ವಾಚನವಿತ್ತು.</p>.ಮೈಸೂರು | ಆರ್ಡಿಪಿಆರ್ ಜನರ ಬದುಕು ಸುಧಾರಿಸುವ ಇಲಾಖೆ: ಜಿಲ್ಲಾಧಿಕಾರಿ.<p>ಮೈಸೂರು ವಿಶ್ವವಿದ್ಯಾಲಯದ ಪ್ರಸಾರಾಂಗದಲ್ಲಿ ಗುರುವಾರ ಮಹಾಕವಿಯ ಕಥಾಮಂಜರಿಯ ಅಭಿಮಾನವು ವಿಶೇಷವಾಗಿ ಅನಾವರಣಗೊಂಡಿತು</p><p>38 ವರ್ಷದ ಬಳಿಕ ಮರುಮುದ್ರಣಗೊಂಡ ಕುಮಾರವ್ಯಾಸ ಕವಿಯ ಕರ್ಣಾಟ ಭಾರತ ಕಥಾಮಂಜರಿ ಹೊಸ ಆವೃತ್ತಿಯ ಲೋಕಾರ್ಪಣೆ ಸಮಾರಂಭವದು.</p><p>ಕುವೆಂಪು ಮತ್ತು ಮಾಸ್ತಿ ವೆಂಕಟೇಶ ಅಯ್ಯಂಗಾರ್ ಸಂಪಾದಕತ್ವದಲ್ಲಿ ಮೊದಲಿಗೆ ಪ್ರಕಟವಾಗಿದ್ದ ಕೃತಿಯ ಮೊದಲ ಮುದ್ರಣದಿಂದ ಇಲ್ಲಿವರೆಗಿನ ಬೆಳವಣಿಗೆಯ ಕುರಿತ ನೆನಪುಗಳಿಗೂ ಈ ಕಾರ್ಯಕ್ರಮ ದಾರಿ ಮಾಡಿತ್ತು.</p><p>ಪ್ರೊ.ಸಿಪಿಕೆ ಕೃತಿಗಳನ್ನು ಲೋಕಾರ್ಪಣೆಗೊಳಿಸಿದರು.</p>.ಮೈಸೂರು ಸಿಲ್ಕ್ಸ್ ಮೇಲೆ ಕಾಂಗ್ರೆಸ್ ಭೂಗಳ್ಳರ ಕಣ್ಣು: ಆರ್.ಅಶೋಕ .<p>ಹೊಸ ಆವೃತ್ತಿಯ ಕರಡು ತಿದ್ದಿರುವ ಪ್ರೊ.ಕೃಷ್ಣಮೂರ್ತಿ ಹನೂರು, ಕಾವ್ಯದ ಪ್ರಸ್ತುತತೆ ಕುರಿತು ಮಾತನಾಡಿದರು.</p><p>ಪ್ರಸಾರಾಂಗದ ನಿರ್ದೇಶಕ ಪ್ರೊ.ನಂಜಯ್ಯ ಹೊಂಗನೂರು ಪ್ರಾಸ್ತಾವಿಕ ಮಾತನಾಡಿದರು.</p><p>ಕೃತಿಯ ಪ್ರಕಟಣೆಗೆ ಆರ್ಥಿಕ ನೆರವು ನೀಡಿರುವ ನ್ಯೂಯಾರ್ಕ್ ಸ್ಟೋನಿ ಬ್ರೂಕ್ವಿಶ್ವವಿದ್ಯಾಲಯದ ಪ್ರೊ.ಎಸ್.ಎನ್.ಶ್ರೀಧರ್ , ಸಂವಹನ ಪ್ರಕಾಶನದ ಡಿ.ಎನ್.ಲೋಕಪ್ಪ ಪಾಲ್ಗೊಂಡರು.</p><p>ಕಾವ್ಯದ ಕೆಲವು ಭಾಗಗಳನ್ನು ಚಾರ್ವಿ ಸತೀಶ್ ವಾಚಿಸಿದರು.</p><p>ಅಧ್ಯಕ್ಣತೆ ವಹಿಸಿದ್ದ ಮೈಸೂರು ವಿವಿ ಕುಲಪತಿ ಪ್ರೊ.ಎನ್.ಕೆ.ಲೋಕನಾಥ್ ಅವರು ಇದೇ ಸಂದರ್ಭದಲ್ಲಿ ಪ್ರಸಾರಾಂಗದ ಮಾರಾಟ ವಿಭಾಗದ ಗಣಕೀಕೃತ ಲೆಕ್ಕಪತ್ರ ನಿರ್ವಹಣಾ ವ್ಯವಸ್ಥೆಗೆ ಚಾಲನೆ ನೀಡಿದರು.</p>.ಮೈಸೂರು | ಕುಡಿಯುವ ನೀರಿಗೆ ಸಮಸ್ಯೆ ಆಗದಿರಲಿ: ಸಚಿವ ಎಚ್.ಸಿ. ಮಹದೇವಪ್ಪ ಸೂಚನೆ.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮೈಸೂರು:</strong> ಅಲ್ಲಿ ಕುಮಾರವ್ಯಾಸ ಕವಿಯ ಉತ್ಕಟ ಅಭಿಮಾನಿಗಳಿದ್ದರು. ಕರ್ಣಾಟ ಭಾರತ ಕಥಾಮಂಜರಿ ಮಹಾಕಾವ್ಯದ ಕುರಿತು ತರಗತಿಗಳಲ್ಲಿ ಫಾಠ ಮಾಡಿದ ವಿದ್ವಾಂಸರಿದ್ದರು. ಸಾಹಿತ್ಯದ ವಿದ್ಯಾರ್ಥಿಗಳಿದ್ದರು. ಹಲವು ಊರುಗಳಿಂದ ಬಂದವರೂ ಇದ್ದರು. ಜೊತೆಗೆ ಕಾವ್ಯ ವಾಚನವಿತ್ತು.</p>.ಮೈಸೂರು | ಆರ್ಡಿಪಿಆರ್ ಜನರ ಬದುಕು ಸುಧಾರಿಸುವ ಇಲಾಖೆ: ಜಿಲ್ಲಾಧಿಕಾರಿ.<p>ಮೈಸೂರು ವಿಶ್ವವಿದ್ಯಾಲಯದ ಪ್ರಸಾರಾಂಗದಲ್ಲಿ ಗುರುವಾರ ಮಹಾಕವಿಯ ಕಥಾಮಂಜರಿಯ ಅಭಿಮಾನವು ವಿಶೇಷವಾಗಿ ಅನಾವರಣಗೊಂಡಿತು</p><p>38 ವರ್ಷದ ಬಳಿಕ ಮರುಮುದ್ರಣಗೊಂಡ ಕುಮಾರವ್ಯಾಸ ಕವಿಯ ಕರ್ಣಾಟ ಭಾರತ ಕಥಾಮಂಜರಿ ಹೊಸ ಆವೃತ್ತಿಯ ಲೋಕಾರ್ಪಣೆ ಸಮಾರಂಭವದು.</p><p>ಕುವೆಂಪು ಮತ್ತು ಮಾಸ್ತಿ ವೆಂಕಟೇಶ ಅಯ್ಯಂಗಾರ್ ಸಂಪಾದಕತ್ವದಲ್ಲಿ ಮೊದಲಿಗೆ ಪ್ರಕಟವಾಗಿದ್ದ ಕೃತಿಯ ಮೊದಲ ಮುದ್ರಣದಿಂದ ಇಲ್ಲಿವರೆಗಿನ ಬೆಳವಣಿಗೆಯ ಕುರಿತ ನೆನಪುಗಳಿಗೂ ಈ ಕಾರ್ಯಕ್ರಮ ದಾರಿ ಮಾಡಿತ್ತು.</p><p>ಪ್ರೊ.ಸಿಪಿಕೆ ಕೃತಿಗಳನ್ನು ಲೋಕಾರ್ಪಣೆಗೊಳಿಸಿದರು.</p>.ಮೈಸೂರು ಸಿಲ್ಕ್ಸ್ ಮೇಲೆ ಕಾಂಗ್ರೆಸ್ ಭೂಗಳ್ಳರ ಕಣ್ಣು: ಆರ್.ಅಶೋಕ .<p>ಹೊಸ ಆವೃತ್ತಿಯ ಕರಡು ತಿದ್ದಿರುವ ಪ್ರೊ.ಕೃಷ್ಣಮೂರ್ತಿ ಹನೂರು, ಕಾವ್ಯದ ಪ್ರಸ್ತುತತೆ ಕುರಿತು ಮಾತನಾಡಿದರು.</p><p>ಪ್ರಸಾರಾಂಗದ ನಿರ್ದೇಶಕ ಪ್ರೊ.ನಂಜಯ್ಯ ಹೊಂಗನೂರು ಪ್ರಾಸ್ತಾವಿಕ ಮಾತನಾಡಿದರು.</p><p>ಕೃತಿಯ ಪ್ರಕಟಣೆಗೆ ಆರ್ಥಿಕ ನೆರವು ನೀಡಿರುವ ನ್ಯೂಯಾರ್ಕ್ ಸ್ಟೋನಿ ಬ್ರೂಕ್ವಿಶ್ವವಿದ್ಯಾಲಯದ ಪ್ರೊ.ಎಸ್.ಎನ್.ಶ್ರೀಧರ್ , ಸಂವಹನ ಪ್ರಕಾಶನದ ಡಿ.ಎನ್.ಲೋಕಪ್ಪ ಪಾಲ್ಗೊಂಡರು.</p><p>ಕಾವ್ಯದ ಕೆಲವು ಭಾಗಗಳನ್ನು ಚಾರ್ವಿ ಸತೀಶ್ ವಾಚಿಸಿದರು.</p><p>ಅಧ್ಯಕ್ಣತೆ ವಹಿಸಿದ್ದ ಮೈಸೂರು ವಿವಿ ಕುಲಪತಿ ಪ್ರೊ.ಎನ್.ಕೆ.ಲೋಕನಾಥ್ ಅವರು ಇದೇ ಸಂದರ್ಭದಲ್ಲಿ ಪ್ರಸಾರಾಂಗದ ಮಾರಾಟ ವಿಭಾಗದ ಗಣಕೀಕೃತ ಲೆಕ್ಕಪತ್ರ ನಿರ್ವಹಣಾ ವ್ಯವಸ್ಥೆಗೆ ಚಾಲನೆ ನೀಡಿದರು.</p>.ಮೈಸೂರು | ಕುಡಿಯುವ ನೀರಿಗೆ ಸಮಸ್ಯೆ ಆಗದಿರಲಿ: ಸಚಿವ ಎಚ್.ಸಿ. ಮಹದೇವಪ್ಪ ಸೂಚನೆ.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>