<p><strong>ಹುಣಸೂರು (ಮೈಸೂರು ಜಿಲ್ಲೆ):</strong> ಕೇಂದ್ರ ತಂಬಾಕು ಮಂಡಳಿಯು 2026–27ನೇ ಸಾಲಿನಲ್ಲಿ 5.6 ಕೋಟಿ ಕೆ.ಜಿ ತಂಬಾಕನ್ನಷ್ಟೇ ರಾಜ್ಯದಲ್ಲಿ ಉತ್ಪಾದಿಸಬೇಕೆಂದು ಮಿತಿ ಹೇರಿದ್ದು, 66 ಸಾವಿರ ತಂಬಾಕು ಬೆಳೆಗಾರರಲ್ಲಿ ಆತಂಕ ಸೃಷ್ಟಿಯಾಗಿದೆ. ಇಲ್ಲಿಯವರೆಗೆ ರಾಜ್ಯದಲ್ಲಿ 9.9 ಕೋಟಿ ಕೆ.ಜಿ ತಂಬಾಕು ಉತ್ಪಾದಿಸಲು ಅವಕಾಶವಿತ್ತು.</p>.<p>ಹಳೆ ಮೈಸೂರು ಭಾಗದ ಪ್ರಮುಖ ವಾಣಿಜ್ಯ ಬೆಳೆ ವರ್ಜೀನಿಯ ತಂಬಾಕು. ಆಂಧ್ರಪ್ರದೇಶದ ಗುಂಟೂರಿನಲ್ಲಿ ತಂಬಾಕು ಖರೀದಿ ಕಂಪನಿಗಳೊಂದಿಗೆ ಇತ್ತೀಚೆಗೆ ನಡೆಸಿದ ಸಭೆಯಲ್ಲಿ ತಂಬಾಕು ಬೆಳೆ ಮೇಲೆ ಮಿತಿ ಹೇರಲು ತೀರ್ಮಾನಿಸಲಾಗಿದೆ.</p>.<p>ವಿಶ್ವದಲ್ಲಿ ಅತಿ ಹೆಚ್ಚು ತಂಬಾಕು ಬೆಳೆಯುವ ಬ್ರೆಜಿಲ್, ಜಿಂಬಾಬ್ವೆ, ನೈಜೀರಿಯಾ ದೇಶಗಳಲ್ಲಿ ಬೆಳೆ ಜಾಸ್ತಿ ಆಗಿದ್ದು, ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ದರ ಕುಸಿದಿದೆ. ರಾಜ್ಯದಲ್ಲಿಯೂ ಉತ್ಪಾದನೆ ಹೆಚ್ಚಿದರೆ, ಬೇಡಿಕೆಯು ಮತ್ತಷ್ಟು ತಗ್ಗಿ ದರ ಕುಸಿಯಬಹುದು ಎಂದು ಕಂಪನಿಗಳು ನೀಡಿದ ಸಲಹೆಯನ್ನು ಮಂಡಳಿ ಗಂಭೀರವಾಗಿ ಪರಿಗಣಿಸಿದೆ.</p>.<p>‘ಕಳೆದ ಸಾಲಿನಲ್ಲಿ ಹವಾಮಾನ ವೈಪರೀತ್ಯದಿಂದ ಉತ್ಪಾದನೆ ಕುಸಿದರೂ, ಉತ್ತಮ ದರ ಸಿಗದೆ ರೈತರು ಬೀದಿಗಿಳಿದು ಹೋರಾಟ ನಡೆಸಿದ್ದರು. ಈ ಸಮಸ್ಯೆ ಮರುಕಳಿಸಬಾರದು ಎಂಬ ಉದ್ದೇಶದಿಂದ ಮಿತಿ ಹೇರಲಾಗಿದೆ’ ಎಂದು ತಂಬಾಕು ಮಂಡಳಿಯ ಮೈಸೂರು ಪ್ರಾದೇಶಿಕ ವ್ಯವಸ್ಥಾಪಕ ಗೋಪಾಲ್ ‘ಪ್ರಜಾವಾಣಿ’ಗೆ ತಿಳಿಸಿದರು.</p>.<p><strong>ಸಿಂಗಲ್ ಬ್ಯಾರನ್ಗೆ 0.85 ಹೆಕ್ಟೇರ್:</strong> ‘ಮುಂಬರುವ ಸಾಲಿನಲ್ಲಿ ಸಿಂಗಲ್ ಬ್ಯಾರನ್ಗೆ 0.85 ಹೆಕ್ಟೇರ್ ಪ್ರದೇಶದಲ್ಲಿ ಗರಿಷ್ಠ 1,017 ಕೆ.ಜಿಯಷ್ಟೇ ತಂಬಾಕು ಉತ್ಪಾದಿಸಬೇಕೆಂದು ನಿಗದಿಗೊಳಿಸಲಾಗಿದೆ. ಇಷ್ಟು ವರ್ಷ 2.5 ಹೆಕ್ಟೇರ್ ಪ್ರದೇಶದಲ್ಲಿ ತಂಬಾಕು ಬೆಳೆಯಲು ಅವಕಾಶವಿತ್ತು. ಅನಧಿಕೃತವಾಗಿ ಬೆಳೆಯುವುದನ್ನು ಸಂಪೂರ್ಣ ನಿಷೇಧಿಸಲಾಗಿದೆ. ಇದು ನೆರೆಯ ಆಂದ್ರಪ್ರದೇಶಕ್ಕೂ ಅನ್ವಯಿಸುವಂತೆ ಮಂಡಳಿ ಕ್ರಮವಹಿಸಬೇಕು. ಇಲ್ಲದಿದ್ದರೆ, ರಾಜ್ಯದ ಬೆಳೆಗಾರರ ಪರವಾನಗಿಯನ್ನು ಹಿಂಪಡೆದು ವೈಜ್ಞಾನಿಕವಾಗಿ ಪರಿಹಾರ ನೀಡಬೇಕು. ಆಗ ಪರ್ಯಾಯ ಬೆಳೆ ಬೆಳೆಯುತ್ತೇವೆ’ ಎಂದು ಜಿಲ್ಲಾ ರೈತ ಸಂಘದ ಅಧ್ಯಕ್ಷ ಹೊಸೂರು ಕುಮಾರ್ ಹೇಳಿದರು.</p>.<div><blockquote>ಕಡಿಮೆ ಪ್ರದೇಶದಲ್ಲಿ ಕಡಿಮೆ ಇಳುವರಿ ಎಂಬ ನೀತಿಯನ್ನು ತಂಬಾಕಿಗೆ ಅನ್ವಯಿಸುವುದು ಕಷ್ಟಕರ. </blockquote><span class="attribution">ಎಸ್.ರಾಮಕೃಷ್ಣನ್ ಎನ್ಐಆರ್ಸಿಎ ಮುಖ್ಯಸ್ಥ</span></div>.<div><blockquote>ತಂಬಾಕು ಮಂಡಳಿ ಅವೈಜ್ಞಾನಿಕ ತೀರ್ಮಾನ ಕೈಗೊಂಡಿದೆ. ಮಂಡಳಿ ನಿಗದಿಗೊಳಿಸಿರುವ ಪ್ರಮಾಣದಲ್ಲಿ ಬೆಳೆದರೆ ಉತ್ಪಾದನಾ ವೆಚ್ಚ ದುಪ್ಪಟ್ಟಾಗಲಿದೆ</blockquote><span class="attribution"> ವಿಷಕಂಠಪ್ಪ ತಂಬಾಕು ಬೆಳೆಗಾರ ಕಲ್ಲಹಳ್ಳಿ</span></div>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಹುಣಸೂರು (ಮೈಸೂರು ಜಿಲ್ಲೆ):</strong> ಕೇಂದ್ರ ತಂಬಾಕು ಮಂಡಳಿಯು 2026–27ನೇ ಸಾಲಿನಲ್ಲಿ 5.6 ಕೋಟಿ ಕೆ.ಜಿ ತಂಬಾಕನ್ನಷ್ಟೇ ರಾಜ್ಯದಲ್ಲಿ ಉತ್ಪಾದಿಸಬೇಕೆಂದು ಮಿತಿ ಹೇರಿದ್ದು, 66 ಸಾವಿರ ತಂಬಾಕು ಬೆಳೆಗಾರರಲ್ಲಿ ಆತಂಕ ಸೃಷ್ಟಿಯಾಗಿದೆ. ಇಲ್ಲಿಯವರೆಗೆ ರಾಜ್ಯದಲ್ಲಿ 9.9 ಕೋಟಿ ಕೆ.ಜಿ ತಂಬಾಕು ಉತ್ಪಾದಿಸಲು ಅವಕಾಶವಿತ್ತು.</p>.<p>ಹಳೆ ಮೈಸೂರು ಭಾಗದ ಪ್ರಮುಖ ವಾಣಿಜ್ಯ ಬೆಳೆ ವರ್ಜೀನಿಯ ತಂಬಾಕು. ಆಂಧ್ರಪ್ರದೇಶದ ಗುಂಟೂರಿನಲ್ಲಿ ತಂಬಾಕು ಖರೀದಿ ಕಂಪನಿಗಳೊಂದಿಗೆ ಇತ್ತೀಚೆಗೆ ನಡೆಸಿದ ಸಭೆಯಲ್ಲಿ ತಂಬಾಕು ಬೆಳೆ ಮೇಲೆ ಮಿತಿ ಹೇರಲು ತೀರ್ಮಾನಿಸಲಾಗಿದೆ.</p>.<p>ವಿಶ್ವದಲ್ಲಿ ಅತಿ ಹೆಚ್ಚು ತಂಬಾಕು ಬೆಳೆಯುವ ಬ್ರೆಜಿಲ್, ಜಿಂಬಾಬ್ವೆ, ನೈಜೀರಿಯಾ ದೇಶಗಳಲ್ಲಿ ಬೆಳೆ ಜಾಸ್ತಿ ಆಗಿದ್ದು, ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ದರ ಕುಸಿದಿದೆ. ರಾಜ್ಯದಲ್ಲಿಯೂ ಉತ್ಪಾದನೆ ಹೆಚ್ಚಿದರೆ, ಬೇಡಿಕೆಯು ಮತ್ತಷ್ಟು ತಗ್ಗಿ ದರ ಕುಸಿಯಬಹುದು ಎಂದು ಕಂಪನಿಗಳು ನೀಡಿದ ಸಲಹೆಯನ್ನು ಮಂಡಳಿ ಗಂಭೀರವಾಗಿ ಪರಿಗಣಿಸಿದೆ.</p>.<p>‘ಕಳೆದ ಸಾಲಿನಲ್ಲಿ ಹವಾಮಾನ ವೈಪರೀತ್ಯದಿಂದ ಉತ್ಪಾದನೆ ಕುಸಿದರೂ, ಉತ್ತಮ ದರ ಸಿಗದೆ ರೈತರು ಬೀದಿಗಿಳಿದು ಹೋರಾಟ ನಡೆಸಿದ್ದರು. ಈ ಸಮಸ್ಯೆ ಮರುಕಳಿಸಬಾರದು ಎಂಬ ಉದ್ದೇಶದಿಂದ ಮಿತಿ ಹೇರಲಾಗಿದೆ’ ಎಂದು ತಂಬಾಕು ಮಂಡಳಿಯ ಮೈಸೂರು ಪ್ರಾದೇಶಿಕ ವ್ಯವಸ್ಥಾಪಕ ಗೋಪಾಲ್ ‘ಪ್ರಜಾವಾಣಿ’ಗೆ ತಿಳಿಸಿದರು.</p>.<p><strong>ಸಿಂಗಲ್ ಬ್ಯಾರನ್ಗೆ 0.85 ಹೆಕ್ಟೇರ್:</strong> ‘ಮುಂಬರುವ ಸಾಲಿನಲ್ಲಿ ಸಿಂಗಲ್ ಬ್ಯಾರನ್ಗೆ 0.85 ಹೆಕ್ಟೇರ್ ಪ್ರದೇಶದಲ್ಲಿ ಗರಿಷ್ಠ 1,017 ಕೆ.ಜಿಯಷ್ಟೇ ತಂಬಾಕು ಉತ್ಪಾದಿಸಬೇಕೆಂದು ನಿಗದಿಗೊಳಿಸಲಾಗಿದೆ. ಇಷ್ಟು ವರ್ಷ 2.5 ಹೆಕ್ಟೇರ್ ಪ್ರದೇಶದಲ್ಲಿ ತಂಬಾಕು ಬೆಳೆಯಲು ಅವಕಾಶವಿತ್ತು. ಅನಧಿಕೃತವಾಗಿ ಬೆಳೆಯುವುದನ್ನು ಸಂಪೂರ್ಣ ನಿಷೇಧಿಸಲಾಗಿದೆ. ಇದು ನೆರೆಯ ಆಂದ್ರಪ್ರದೇಶಕ್ಕೂ ಅನ್ವಯಿಸುವಂತೆ ಮಂಡಳಿ ಕ್ರಮವಹಿಸಬೇಕು. ಇಲ್ಲದಿದ್ದರೆ, ರಾಜ್ಯದ ಬೆಳೆಗಾರರ ಪರವಾನಗಿಯನ್ನು ಹಿಂಪಡೆದು ವೈಜ್ಞಾನಿಕವಾಗಿ ಪರಿಹಾರ ನೀಡಬೇಕು. ಆಗ ಪರ್ಯಾಯ ಬೆಳೆ ಬೆಳೆಯುತ್ತೇವೆ’ ಎಂದು ಜಿಲ್ಲಾ ರೈತ ಸಂಘದ ಅಧ್ಯಕ್ಷ ಹೊಸೂರು ಕುಮಾರ್ ಹೇಳಿದರು.</p>.<div><blockquote>ಕಡಿಮೆ ಪ್ರದೇಶದಲ್ಲಿ ಕಡಿಮೆ ಇಳುವರಿ ಎಂಬ ನೀತಿಯನ್ನು ತಂಬಾಕಿಗೆ ಅನ್ವಯಿಸುವುದು ಕಷ್ಟಕರ. </blockquote><span class="attribution">ಎಸ್.ರಾಮಕೃಷ್ಣನ್ ಎನ್ಐಆರ್ಸಿಎ ಮುಖ್ಯಸ್ಥ</span></div>.<div><blockquote>ತಂಬಾಕು ಮಂಡಳಿ ಅವೈಜ್ಞಾನಿಕ ತೀರ್ಮಾನ ಕೈಗೊಂಡಿದೆ. ಮಂಡಳಿ ನಿಗದಿಗೊಳಿಸಿರುವ ಪ್ರಮಾಣದಲ್ಲಿ ಬೆಳೆದರೆ ಉತ್ಪಾದನಾ ವೆಚ್ಚ ದುಪ್ಪಟ್ಟಾಗಲಿದೆ</blockquote><span class="attribution"> ವಿಷಕಂಠಪ್ಪ ತಂಬಾಕು ಬೆಳೆಗಾರ ಕಲ್ಲಹಳ್ಳಿ</span></div>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>