<p>ಮೈಸೂರು: ‘₹ 3 ಲಕ್ಷ ಕೋಟಿ ಸಾಲ ಮಾಡಿದ್ದೇ ಬಿಜೆಪಿ ಸರ್ಕಾರದ ಸಾಧನೆ’ ಎಂದು ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ ಟೀಕಿಸಿದರು.</p>.<p>ಇಲ್ಲಿ ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಸಿದ್ದರಾಮಯ್ಯ ಅಧಿಕಾರದಿಂದ ಕೆಳಗಿಳಿಯುವ ವೇಳೆ ₹2.42 ಕೋಟಿ ಸಾಲವಿತ್ತು. ಬಸವರಾಜ ಬೊಮ್ಮಾಯಿ ಸರ್ಕಾರದಲ್ಲಿ ಅದು ₹5.42 ಲಕ್ಷ ಕೋಟಿಗೆ ಏರಿದೆ. ಸಾಲ ಪಾವತಿಗಾಗಿ ಅಸಲು ಮತ್ತು ಬಡ್ಡಿ ಸೇರಿ ವಾರ್ಷಿಕ ₹18ಸಾವಿರ ಕೋಟಿ ಮೀಸಲಿಡಬೇಕಾಗುತ್ತದೆ. ಒಟ್ಟು ₹43ಸಾವಿರ ಕೋಟಿ ಸಾಲ ಪಾವತಿಸಬೇಕು. ಇದರಿಂದ ಸರ್ಕಾರದ ಬೊಕ್ಕಸಕ್ಕೆ ಹೊಡೆತ ಬೀಳಲಿದೆ’ ಎಂದು ದೂರಿದರು.</p>.<p>‘ಕಳೆದ ಬಾರಿ ₹2.65 ಲಕ್ಷ ಕೋಟಿ ಗಾತ್ರದ ಬಜೆಟ್ ಮಂಡಿಸಿದ್ದರು. 337 ಕಾರ್ಯಯೋಜನೆಗಳ ಭರವಸೆ ನೀಡಿದ್ದರು. ಅವುಗಳಲ್ಲಿ 207 ಯೋಜನೆ ಅನುಷ್ಠಾನಗೊಂಡು, 132 ಯೋಜನೆಗಳು ಬಾಕಿ ಉಳಿದಿವೆ. ಕೆಲವೇ ತಿಂಗಳಲ್ಲಿ ಚುನಾವಣೆ ಘೋಷಣೆಯಾಗಲಿದ್ದು, ಈ ಬಾರಿಯ ಭರವಸೆಗಳು ಕೂಡ ಅನುಷ್ಠಾನಗೊಳ್ಳುವುದಿಲ್ಲ’ ಎಂದು ಆರೋಪಿಸಿದರು.</p>.<p>‘ಈ ಬಾರಿಯ ಬಜೆಟ್ನಲ್ಲಿ ಮೈಸೂರನ್ನು ಸಂಪೂರ್ಣವಾಗಿ ನಿರ್ಲಕ್ಷಿಸಲಾಗಿದೆ. ಕಬಿನಿ ಜಲಾಶಯದ ಅಭಿವೃದ್ಧಿಗಾಗಿ ಕಳೆದ ಬಾರಿ ₹50 ಕೋಟಿ ಘೋಷಣೆಯಾಗಿತ್ತು. ಆದರೆ ಪ್ರಗತಿಯಾಗಿಲ್ಲ. ಉಂಡವಾಡಿ ಯೋಜನೆ, ಪ್ರವಾಸೋದ್ಯಮ ಅಭಿವೃದ್ಧಿ, ದಸರಾ ಪ್ರಾಧಿಕಾರ ರಚನೆಯ ಭರವಸೆಗಳನ್ನು ಮೂಲೆಗುಂಪು ಮಾಡಲಾಗಿದೆ’ ಎಂದು ದೂರಿದರು.</p>.<p>‘ರಾಜ್ಯದ ತೆರಿಗೆ ಸಂಗ್ರಹದಲ್ಲಿ ₹4.42 ಲಕ್ಷ ಕೋಟಿಯನ್ನು ಕೇಂದ್ರ ಸರ್ಕಾರಕ್ಕೆ ಕಳುಹಿಸಲಾಗುತ್ತದೆ. ನೀತಿ ಆಯೋಗದ ನಿಯಮದ ಪ್ರಕಾರ ಅದರ ಶೇ.42ರಷ್ಟನ್ನು ಅಂದರೆ ₹1.85 ಲಕ್ಷ ಕೋಟಿ ರಾಜ್ಯಕ್ಕೆ ವಾಪಸ್ ನೀಡಬೇಕು. ಆದರೆ, ಈ ಬಾರಿ ₹60 ಸಾವಿರ ಕೋಟಿಗೆ ಸೀಮಿತಗೊಳಿಸಲಾಗಿದೆ. ಕೇಂದ್ರವು ಮೂರು ವರ್ಷಗಳಲ್ಲಿ ₹12,101 ಕೋಟಿ ಜಿಎಸ್ಟಿಯನ್ನು ಬಾಕಿ ಉಳಿಸಿಕೊಂಡಿದೆ’ ಎಂದು ವಿವರ ನೀಡಿದರು.</p>.<p>‘ಹಿಂದಿನ ಬಜೆಟ್ನಲ್ಲಿ ಮೇಕೆದಾಟು ಯೋಜನೆಗೆ ₹100 ಕೋಟಿ ಘೋಷಿಸಲಾಗಿತ್ತು, ಆದರೆ ಈ ಬಾರಿ ಅದರ ಬಗ್ಗೆ ಉಲ್ಲೇಖವನ್ನೇ ಮಾಡದಿರುವ ಮರ್ಮವೇನು? ಕೇಂದ್ರದೊಂದಿಗೆ ಸಂವಹನ ನಡೆಸಿ ಆ ಯೋಜನೆಯನ್ನು ಅನುಷ್ಠಾನಗೊಳಿಸುವಲ್ಲಿ ಸರ್ಕಾರ ಸೋತಿದೆ. ರಾಜ್ಯದಲ್ಲಿ ಖಾಲಿಯಿರುವ 2.65 ಲಕ್ಷ ಸರ್ಕಾರಿ ಹುದ್ದೆಗಳ ಭರ್ತಿಗೆ ಕ್ರಮ ವಹಿಸಿಲ್ಲ’ ಎಂದು ಆರೋಪಿಸಿದರು.</p>.<p>ಪಕ್ಷದ ಗ್ರಾಮಾಂತರ ಜಿಲ್ಲಾ ಘಟಕದ ಅಧ್ಯಕ್ಷ ಡಾ.ಬಿ.ಜೆ.ವಿಜಯ್ ಕುಮಾರ್, ಮುಖಂಡರಾದ ಬಿ.ಎಂ.ರಾಮು, ಎಂ.ಶಿವಣ್ಣ, ಚಂದ್ರು, ಗಿರೀಶ್, ರಘು, ಮಹೇಶ್ ಇದ್ದರು.</p>.<p class="Briefhead">ಇಂದಿನಿಂದ ‘ಕಿವಿ ಮೇಲೆ ಹೂ ಪೋಸ್ಟರ್’ ಅಭಿಯಾನ</p>.<p>ಮೈಸೂರು: ‘ನೀರಸ ಬಜೆಟ್ ಬಗ್ಗೆ ಜನರಿಗೆ ತಿಳಿಸಲು ಕಿವಿ ಮೇಲೆ ಹೂ ಪೋಸ್ಟರ್ ಅಭಿಯಾನವನ್ನು ಫೆ.19ರಿಂದ (ಭಾನುವಾರ) ನಡೆಸಲಿದ್ದೇವೆ’ ಎಂದು ಕಾಂಗ್ರೆಸ್ ಗ್ರಾಮಾಂತರ ಜಿಲ್ಲಾ ಘಟಕದ ಅಧ್ಯಕ್ಷ ಡಾ.ಬಿ.ಜೆ.ವಿಜಯ್ ಕುಮಾರ್ ತಿಳಿಸಿದರು.</p>.<p>‘ಬಿಜೆಪಿಯೇ ಭರವಸೆ ಎಂಬ ಪೋಸ್ಟರ್ಗಳನ್ನು ನಗರದ ಹಲವು ಭಾಗದಲ್ಲಿ ಅಂಟಿಸಿದ್ದಾರೆ. ಅವುಗಳನ್ನು ಗುರುತಿಸಿ, ಸಮೀಪವೇ ನಮ್ಮ ಪೋಸ್ಟರ್ ಅಂಟಿಸಲಿದ್ದೇವೆ. ಬಿಜೆಪಿಯದ್ದು ಭರವಸೆಯಷ್ಟೇ ಅನುಷ್ಠಾನಕ್ಕೆ ಕ್ರಮ ಕೈಗೊಳ್ಳುತ್ತಿಲ್ಲ’ ಎಂದು ದೂರಿದರು.</p>.<p>‘ಕಾಂಗ್ರೆಸ್ ಭರವಸೆಯಲ್ಲ ಗ್ಯಾರಂಟಿ ಎಂದು ತಿಳಿಸುವ ಗ್ಯಾರಂಟಿ ಕಾರ್ಡನ್ನು ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ್ಸಿಂಗ್ ಸುರ್ಜೇವಾಲ ಫೆ.21ರಂದು ಮಧ್ಯಾಹ್ನ 2ಕ್ಕೆ ಕಾಂಗ್ರೆಸ್ ಭವನದಲ್ಲಿ ಬಿಡುಗಡೆ ಮಾಡಲಿದ್ದಾರೆ’ ಎಂದು ಮಾಹಿತಿ ನೀಡಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಮೈಸೂರು: ‘₹ 3 ಲಕ್ಷ ಕೋಟಿ ಸಾಲ ಮಾಡಿದ್ದೇ ಬಿಜೆಪಿ ಸರ್ಕಾರದ ಸಾಧನೆ’ ಎಂದು ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ ಟೀಕಿಸಿದರು.</p>.<p>ಇಲ್ಲಿ ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಸಿದ್ದರಾಮಯ್ಯ ಅಧಿಕಾರದಿಂದ ಕೆಳಗಿಳಿಯುವ ವೇಳೆ ₹2.42 ಕೋಟಿ ಸಾಲವಿತ್ತು. ಬಸವರಾಜ ಬೊಮ್ಮಾಯಿ ಸರ್ಕಾರದಲ್ಲಿ ಅದು ₹5.42 ಲಕ್ಷ ಕೋಟಿಗೆ ಏರಿದೆ. ಸಾಲ ಪಾವತಿಗಾಗಿ ಅಸಲು ಮತ್ತು ಬಡ್ಡಿ ಸೇರಿ ವಾರ್ಷಿಕ ₹18ಸಾವಿರ ಕೋಟಿ ಮೀಸಲಿಡಬೇಕಾಗುತ್ತದೆ. ಒಟ್ಟು ₹43ಸಾವಿರ ಕೋಟಿ ಸಾಲ ಪಾವತಿಸಬೇಕು. ಇದರಿಂದ ಸರ್ಕಾರದ ಬೊಕ್ಕಸಕ್ಕೆ ಹೊಡೆತ ಬೀಳಲಿದೆ’ ಎಂದು ದೂರಿದರು.</p>.<p>‘ಕಳೆದ ಬಾರಿ ₹2.65 ಲಕ್ಷ ಕೋಟಿ ಗಾತ್ರದ ಬಜೆಟ್ ಮಂಡಿಸಿದ್ದರು. 337 ಕಾರ್ಯಯೋಜನೆಗಳ ಭರವಸೆ ನೀಡಿದ್ದರು. ಅವುಗಳಲ್ಲಿ 207 ಯೋಜನೆ ಅನುಷ್ಠಾನಗೊಂಡು, 132 ಯೋಜನೆಗಳು ಬಾಕಿ ಉಳಿದಿವೆ. ಕೆಲವೇ ತಿಂಗಳಲ್ಲಿ ಚುನಾವಣೆ ಘೋಷಣೆಯಾಗಲಿದ್ದು, ಈ ಬಾರಿಯ ಭರವಸೆಗಳು ಕೂಡ ಅನುಷ್ಠಾನಗೊಳ್ಳುವುದಿಲ್ಲ’ ಎಂದು ಆರೋಪಿಸಿದರು.</p>.<p>‘ಈ ಬಾರಿಯ ಬಜೆಟ್ನಲ್ಲಿ ಮೈಸೂರನ್ನು ಸಂಪೂರ್ಣವಾಗಿ ನಿರ್ಲಕ್ಷಿಸಲಾಗಿದೆ. ಕಬಿನಿ ಜಲಾಶಯದ ಅಭಿವೃದ್ಧಿಗಾಗಿ ಕಳೆದ ಬಾರಿ ₹50 ಕೋಟಿ ಘೋಷಣೆಯಾಗಿತ್ತು. ಆದರೆ ಪ್ರಗತಿಯಾಗಿಲ್ಲ. ಉಂಡವಾಡಿ ಯೋಜನೆ, ಪ್ರವಾಸೋದ್ಯಮ ಅಭಿವೃದ್ಧಿ, ದಸರಾ ಪ್ರಾಧಿಕಾರ ರಚನೆಯ ಭರವಸೆಗಳನ್ನು ಮೂಲೆಗುಂಪು ಮಾಡಲಾಗಿದೆ’ ಎಂದು ದೂರಿದರು.</p>.<p>‘ರಾಜ್ಯದ ತೆರಿಗೆ ಸಂಗ್ರಹದಲ್ಲಿ ₹4.42 ಲಕ್ಷ ಕೋಟಿಯನ್ನು ಕೇಂದ್ರ ಸರ್ಕಾರಕ್ಕೆ ಕಳುಹಿಸಲಾಗುತ್ತದೆ. ನೀತಿ ಆಯೋಗದ ನಿಯಮದ ಪ್ರಕಾರ ಅದರ ಶೇ.42ರಷ್ಟನ್ನು ಅಂದರೆ ₹1.85 ಲಕ್ಷ ಕೋಟಿ ರಾಜ್ಯಕ್ಕೆ ವಾಪಸ್ ನೀಡಬೇಕು. ಆದರೆ, ಈ ಬಾರಿ ₹60 ಸಾವಿರ ಕೋಟಿಗೆ ಸೀಮಿತಗೊಳಿಸಲಾಗಿದೆ. ಕೇಂದ್ರವು ಮೂರು ವರ್ಷಗಳಲ್ಲಿ ₹12,101 ಕೋಟಿ ಜಿಎಸ್ಟಿಯನ್ನು ಬಾಕಿ ಉಳಿಸಿಕೊಂಡಿದೆ’ ಎಂದು ವಿವರ ನೀಡಿದರು.</p>.<p>‘ಹಿಂದಿನ ಬಜೆಟ್ನಲ್ಲಿ ಮೇಕೆದಾಟು ಯೋಜನೆಗೆ ₹100 ಕೋಟಿ ಘೋಷಿಸಲಾಗಿತ್ತು, ಆದರೆ ಈ ಬಾರಿ ಅದರ ಬಗ್ಗೆ ಉಲ್ಲೇಖವನ್ನೇ ಮಾಡದಿರುವ ಮರ್ಮವೇನು? ಕೇಂದ್ರದೊಂದಿಗೆ ಸಂವಹನ ನಡೆಸಿ ಆ ಯೋಜನೆಯನ್ನು ಅನುಷ್ಠಾನಗೊಳಿಸುವಲ್ಲಿ ಸರ್ಕಾರ ಸೋತಿದೆ. ರಾಜ್ಯದಲ್ಲಿ ಖಾಲಿಯಿರುವ 2.65 ಲಕ್ಷ ಸರ್ಕಾರಿ ಹುದ್ದೆಗಳ ಭರ್ತಿಗೆ ಕ್ರಮ ವಹಿಸಿಲ್ಲ’ ಎಂದು ಆರೋಪಿಸಿದರು.</p>.<p>ಪಕ್ಷದ ಗ್ರಾಮಾಂತರ ಜಿಲ್ಲಾ ಘಟಕದ ಅಧ್ಯಕ್ಷ ಡಾ.ಬಿ.ಜೆ.ವಿಜಯ್ ಕುಮಾರ್, ಮುಖಂಡರಾದ ಬಿ.ಎಂ.ರಾಮು, ಎಂ.ಶಿವಣ್ಣ, ಚಂದ್ರು, ಗಿರೀಶ್, ರಘು, ಮಹೇಶ್ ಇದ್ದರು.</p>.<p class="Briefhead">ಇಂದಿನಿಂದ ‘ಕಿವಿ ಮೇಲೆ ಹೂ ಪೋಸ್ಟರ್’ ಅಭಿಯಾನ</p>.<p>ಮೈಸೂರು: ‘ನೀರಸ ಬಜೆಟ್ ಬಗ್ಗೆ ಜನರಿಗೆ ತಿಳಿಸಲು ಕಿವಿ ಮೇಲೆ ಹೂ ಪೋಸ್ಟರ್ ಅಭಿಯಾನವನ್ನು ಫೆ.19ರಿಂದ (ಭಾನುವಾರ) ನಡೆಸಲಿದ್ದೇವೆ’ ಎಂದು ಕಾಂಗ್ರೆಸ್ ಗ್ರಾಮಾಂತರ ಜಿಲ್ಲಾ ಘಟಕದ ಅಧ್ಯಕ್ಷ ಡಾ.ಬಿ.ಜೆ.ವಿಜಯ್ ಕುಮಾರ್ ತಿಳಿಸಿದರು.</p>.<p>‘ಬಿಜೆಪಿಯೇ ಭರವಸೆ ಎಂಬ ಪೋಸ್ಟರ್ಗಳನ್ನು ನಗರದ ಹಲವು ಭಾಗದಲ್ಲಿ ಅಂಟಿಸಿದ್ದಾರೆ. ಅವುಗಳನ್ನು ಗುರುತಿಸಿ, ಸಮೀಪವೇ ನಮ್ಮ ಪೋಸ್ಟರ್ ಅಂಟಿಸಲಿದ್ದೇವೆ. ಬಿಜೆಪಿಯದ್ದು ಭರವಸೆಯಷ್ಟೇ ಅನುಷ್ಠಾನಕ್ಕೆ ಕ್ರಮ ಕೈಗೊಳ್ಳುತ್ತಿಲ್ಲ’ ಎಂದು ದೂರಿದರು.</p>.<p>‘ಕಾಂಗ್ರೆಸ್ ಭರವಸೆಯಲ್ಲ ಗ್ಯಾರಂಟಿ ಎಂದು ತಿಳಿಸುವ ಗ್ಯಾರಂಟಿ ಕಾರ್ಡನ್ನು ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ್ಸಿಂಗ್ ಸುರ್ಜೇವಾಲ ಫೆ.21ರಂದು ಮಧ್ಯಾಹ್ನ 2ಕ್ಕೆ ಕಾಂಗ್ರೆಸ್ ಭವನದಲ್ಲಿ ಬಿಡುಗಡೆ ಮಾಡಲಿದ್ದಾರೆ’ ಎಂದು ಮಾಹಿತಿ ನೀಡಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>