<p><strong>ಮೈಸೂರು</strong>: ‘ಕೆ.ಆರ್.ಆಸ್ಪತ್ರೆ, ಪಿಕೆಡಿಪಿ (ರಾಜಕುಮಾರಿ ಕೃಷ್ಣಜಮ್ಮಣ್ಣಿ ಕ್ಷಯ ಮತ್ತು ಎದೆ ರೋಗಗಳ ಆಸ್ಪತ್ರೆ) ಆಸ್ಪತ್ರೆಯಲ್ಲಿ ಸಿರಿಂಜುಗಳನ್ನು ಮರುಬಳಕೆ ಮಾಡಲಾಗುತ್ತಿದೆ. ರೋಗಿಗಳ ಬಳಿ ಕೆಲಸ ಮಾಡುವಾಗ ಬಳಸಲು ಕೈಗವಸು, ಮಾಸ್ಕ್ ನೀಡುತ್ತಿಲ್ಲ’ ಎಂದು ಇಲ್ಲಿನ ಮೈಸೂರು ವೈದ್ಯಕೀಯ ಕಾಲೇಜಿನ ನರ್ಸಿಂಗ್ ವಿದ್ಯಾರ್ಥಿಗಳು ದೂರಿದರು.</p>.<p>ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ನಾಗಲಕ್ಷ್ಮಿ ಚೌಧರಿ ಅವರು ಬುಧವಾರ ನಡೆಸಿದ ಸಂವಾದದ ವೇಳೆ ವಿದ್ಯಾರ್ಥಿಗಳು ಈ ಆರೋಪ ಮಾಡಿದರು.</p>.<p>‘ದಾಖಲಾಗುವ ದಿನ ರೋಗಿಗೆ ಬಳಸುವ ಸಿರಿಂಜ್ ಅನ್ನೇ ಪ್ರತಿದಿನ ಬಳಸಲಾಗುತ್ತಿದೆ. ಸಿರಿಂಜು ಬಿಸಾಡಿದರೆ ಮೇಲ್ವಿಚಾರಕ ಶುಶ್ರೂಷಕರು ಬೈಯುತ್ತಾರೆ. ಪ್ರಶ್ನಿಸಿದ್ರೆ ಇಂಡೆಂಟ್ ಇಲ್ಲ ಎನ್ನುತ್ತಾರೆ. ನಮ ಬಗ್ಗೆಯೂ ಮುಂಜಾಗ್ರತೆ ವಹಿಸುತ್ತಿಲ್ಲ’ ಎಂದು ಆರೋಪ ಮಾಡಿದರು.</p>.<p>ಕೆ.ಆರ್ ಆಸ್ಪತ್ರೆಯ ಮೇಲ್ವಿಚಾರಕಿ ಡಾ. ಶೋಭಾ ಮಾತನಾಡಿ, ‘ಈ ರೀತಿಯ ದೂರು ನಮಗೆ ಬಂದಿಲ್ಲ. ಸಿರಿಂಜು ಪೂರೈಕೆ ಮಾಡುತ್ತಿದ್ದೇವೆ’ ಎಂದು ಪ್ರತಿಪಾದಿಸಿದರು.</p>.<p>ನಾಗಲಕ್ಷ್ಮಿ ಚೌಧರಿ ಪ್ರತಿಕ್ರಿಯಿಸಿ, ‘ಇದು ಸೂಕ್ಷ್ಮ ವಿಚಾರ. ಅಧಿಕಾರಿಗಳಿಗೆ ಸಮಸ್ಯೆಯ ಅರಿವಿಲ್ಲ ಎಂಬುದು ವಿಷಾದನೀಯ. ಮುಖ್ಯಮಂತ್ರಿಗಳನ್ನು ಭೇಟಿ ಮಾಡಿ ಮಾಹಿತಿ ನೀಡುತ್ತೇನೆ. ರೋಗಿ ಹಾಗೂ ವಿದ್ಯಾರ್ಥಿಗಳಿಗೆ ತೊಂದರೆ ಆಗಬಾರದು’ ಎಂದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮೈಸೂರು</strong>: ‘ಕೆ.ಆರ್.ಆಸ್ಪತ್ರೆ, ಪಿಕೆಡಿಪಿ (ರಾಜಕುಮಾರಿ ಕೃಷ್ಣಜಮ್ಮಣ್ಣಿ ಕ್ಷಯ ಮತ್ತು ಎದೆ ರೋಗಗಳ ಆಸ್ಪತ್ರೆ) ಆಸ್ಪತ್ರೆಯಲ್ಲಿ ಸಿರಿಂಜುಗಳನ್ನು ಮರುಬಳಕೆ ಮಾಡಲಾಗುತ್ತಿದೆ. ರೋಗಿಗಳ ಬಳಿ ಕೆಲಸ ಮಾಡುವಾಗ ಬಳಸಲು ಕೈಗವಸು, ಮಾಸ್ಕ್ ನೀಡುತ್ತಿಲ್ಲ’ ಎಂದು ಇಲ್ಲಿನ ಮೈಸೂರು ವೈದ್ಯಕೀಯ ಕಾಲೇಜಿನ ನರ್ಸಿಂಗ್ ವಿದ್ಯಾರ್ಥಿಗಳು ದೂರಿದರು.</p>.<p>ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ನಾಗಲಕ್ಷ್ಮಿ ಚೌಧರಿ ಅವರು ಬುಧವಾರ ನಡೆಸಿದ ಸಂವಾದದ ವೇಳೆ ವಿದ್ಯಾರ್ಥಿಗಳು ಈ ಆರೋಪ ಮಾಡಿದರು.</p>.<p>‘ದಾಖಲಾಗುವ ದಿನ ರೋಗಿಗೆ ಬಳಸುವ ಸಿರಿಂಜ್ ಅನ್ನೇ ಪ್ರತಿದಿನ ಬಳಸಲಾಗುತ್ತಿದೆ. ಸಿರಿಂಜು ಬಿಸಾಡಿದರೆ ಮೇಲ್ವಿಚಾರಕ ಶುಶ್ರೂಷಕರು ಬೈಯುತ್ತಾರೆ. ಪ್ರಶ್ನಿಸಿದ್ರೆ ಇಂಡೆಂಟ್ ಇಲ್ಲ ಎನ್ನುತ್ತಾರೆ. ನಮ ಬಗ್ಗೆಯೂ ಮುಂಜಾಗ್ರತೆ ವಹಿಸುತ್ತಿಲ್ಲ’ ಎಂದು ಆರೋಪ ಮಾಡಿದರು.</p>.<p>ಕೆ.ಆರ್ ಆಸ್ಪತ್ರೆಯ ಮೇಲ್ವಿಚಾರಕಿ ಡಾ. ಶೋಭಾ ಮಾತನಾಡಿ, ‘ಈ ರೀತಿಯ ದೂರು ನಮಗೆ ಬಂದಿಲ್ಲ. ಸಿರಿಂಜು ಪೂರೈಕೆ ಮಾಡುತ್ತಿದ್ದೇವೆ’ ಎಂದು ಪ್ರತಿಪಾದಿಸಿದರು.</p>.<p>ನಾಗಲಕ್ಷ್ಮಿ ಚೌಧರಿ ಪ್ರತಿಕ್ರಿಯಿಸಿ, ‘ಇದು ಸೂಕ್ಷ್ಮ ವಿಚಾರ. ಅಧಿಕಾರಿಗಳಿಗೆ ಸಮಸ್ಯೆಯ ಅರಿವಿಲ್ಲ ಎಂಬುದು ವಿಷಾದನೀಯ. ಮುಖ್ಯಮಂತ್ರಿಗಳನ್ನು ಭೇಟಿ ಮಾಡಿ ಮಾಹಿತಿ ನೀಡುತ್ತೇನೆ. ರೋಗಿ ಹಾಗೂ ವಿದ್ಯಾರ್ಥಿಗಳಿಗೆ ತೊಂದರೆ ಆಗಬಾರದು’ ಎಂದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>