ಅಂಗಾಂಗ ದಾನದ ಕುರಿತು ಕುಟುಂಬಸ್ಥರಿಗೆ ವೈದ್ಯರು ಮಾಹಿತಿ ನೀಡಲಾಯಿತು. ಇದಕ್ಕೆ ಕುಟುಂಬಸ್ಥರು ಒಪ್ಪಿಗೆ ಸೂಚಿಸಿದರು. ಸರ್ಕಾರದ ‘ಜೀವ ಸಾರ್ಥಕತೆ’ಯ ಅಧಿಕಾರಿಗಳ ಅನುಮತಿ ಪಡೆದು, ಮಧ್ಯಾಹ್ನ 12.30ಕ್ಕೆ ಬಿಜಿಎಸ್ ಆಸ್ಪತ್ರೆಯಲ್ಲಿಯೇ 2 ಮೂತ್ರಪಿಂಡಗಳು, ಮೇದೋಜೀರಕ ಗ್ರಂಥಿ, ಯಕೃತ್ ಅನ್ನು ಕಸಿ ಮಾಡಲಾಯಿತು. ಹೃದಯವನ್ನು ಬೆಂಗಳೂರಿನ ನಾರಾಯಣ ಹೃದಯಾಲಯ, ಕಾರ್ನಿಯಾವನ್ನು ಕೆ.ಆರ್.ಆಸ್ಪತ್ರೆಗೆ ಕಳುಹಿಸಿಕೊಡಲಾಯಿತು.